Fact Check| ಮಾಲ್ಡೀವ್ಸ್ ತನ್ನ 28 ದ್ವೀಪಗಳನ್ನು ಭಾರತಕ್ಕೆ ಮಾರಾಟ ಮಾಡಿಲ್ಲ

ವಿದೇಶಾಂಗ ಸಚಿವ ಜೈಶಂಕರ್‌ರವರ ಮೂರು ದಿನಗಳ ಮಾಲ್ಡೀವ್ಸ್ ಪ್ರವಾಸದ ಚಿತ್ರಗಳು ವೈರಲ್ ಆದ ಬೆನ್ನಲ್ಲೇ “ಮಾಲ್ಡೀವ್ಸ್ ತನ್ನ 28 ದ್ವೀಪಗಳನ್ನು ಭಾರತಕ್ಕೆ ಮಾರಾಟ ಮಾಡಿದೆ” ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವಿವಿಧ ಆಯಾಮಗಳಲ್ಲಿ ಚರ್ಚೆಯಾಗುತ್ತಿದೆ. ಚೀನಾ ವಿರುದ್ಧ ಮೋದಿ ಸರಕಾರಕ್ಕೆ ರಾಜತಾಂತ್ರಿಕ ಗೆಲುವು. 28 ದ್ವೀಪಗಳನ್ನು ಭಾರತಕ್ಕೆ ಬಿಟ್ಟುಕೊಟ್ಟ ಮಾಲ್ಡೀವ್ಸ್  ಎಂಬ ಶೀರ್ಷಿಕೆಯಲ್ಲಿ  ಪೋಸ್ಟ್ ಕಾರ್ಡ್ ಸುಳ್ಳು ಮಾಹಿತಿಯನ್ನು ಹರಿಬಿಡುತ್ತಿದೆ‌. ಇದರಂತೆಯೇ ಸಾಮಾಜಿಕ ಜಾಲತಾಣ ಎಕ್ಸ್‌ನ ಕೆಲವು ಅಧಿಕೃತ ಖಾತೆಗಳಲ್ಲಿ…

Read More
ANI

Fact Check: ಬಾಂಗ್ಲಾದೇಶದ ಹಿಂದು ವೃದ್ಧರೊಬ್ಬರು ಕಳೆದು ಹೋದ ಮಗನಿಗಾಗಿ ಪ್ರತಿಭಟಿಸಿದ್ದಾರೆ ಎಂದು ಸುಳ್ಳು ಹಂಚಿಕೊಂಡು ಕ್ಷಮೆ ಕೇಳಿದ ANI

ರಸ್ತೆಯಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬನನ್ನು ಭದ್ರತಾ ಸಿಬ್ಬಂದಿ ಎಳೆದುಕೊಂಡು ಹೋಗುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೋವನ್ನು ಕಾಣೆಯಾದ ತನ್ನ ಮಗನ ಪೋಸ್ಟರ್‌ನೊಂದಿಗೆ ಬಾಂಗ್ಲಾದೇಶದ ಹಿಂದೂ ವ್ಯಕ್ತಿಯೊಬ್ಬರು ಪ್ರತಿಭಟಿಸುತ್ತಿರುವುದನ್ನು ಇದು ತೋರಿಸುತ್ತದೆ ಎಂದು ಹಂಚಿಕೊಳ್ಳುವವರು ಬರೆದಿದ್ದಾರೆ. ಇದನ್ನು ಸುದ್ದಿ ಸಂಸ್ಥೆ ಏಷ್ಯನ್ ನ್ಯೂಸ್ ಇಂಟರ್ನ್ಯಾಷನಲ್ (ಎಎನ್ಐ) ಕೂಡ ಇದೇ ಹೇಳಿಕೆಯೊಂದಿಗೆ ವೀಡಿಯೋ ಹಂಚಿಕೊಂಡಿದೆವು. ಪೋಸ್ಟ್ ನ ಆರ್ಕೈವ್ ಅನ್ನು ಇಲ್ಲಿ ಕಾಣಬಹುದು. ಪೋಸ್ಟ್ ನ ಆರ್ಕೈವ್ ಅನ್ನು ಇಲ್ಲಿ ಕಾಣಬಹುದು. ಇದೇ ರೀತಿಯ ಪ್ರತಿಪಾಧನೆಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು. ಫ್ಯಾಕ್ಟ್‌ ಚೆಕ್: ಈ ಹೇಳಿಕೆ ಸುಳ್ಳಾಗಿದ್ದು, ಎಎನ್ಐ ವೀಡಿಯೊದಲ್ಲಿರುವ…

Read More
ಇರಾನಿ ಗ್ಯಾಂಗ್‌

Fact Check: ರಾಜ್ಯದಲ್ಲಿ ಇರಾನಿ ಗ್ಯಾಂಗ್‌ ಕಳ್ಳತನ ಮತ್ತು ದರೋಡೆ ಮಾಡುತ್ತಿರುವ ಪ್ರಕರಣಗಳು ನಿಜವಾಗಿದೆ

ಇತ್ತೀಚೆಗೆ ಇರಾನಿ ಗ್ಯಾಂಗ್ ಹೆಸರಿನ ದರೋಡೆಕೋರ ಗುಂಪೊಂದು ಬೆಡ್‌ಶೀಟ್‌ ಮಾರುವ ನೆಪದಲ್ಲಿ ಮನೆಗಳನ್ನು ಲೂಟಿ ಮಾಡುತ್ತಿದೆ ಎಂಬ ಸಂದೇಶವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ವೈರಲ್‌ ಸಂದೇಶದಲ್ಲಿ “ಇವರು ಬೀದರ್ ಮತ್ತು ಗುಲ್ಬರ್ಗಾ ಇರಾನಿ ಜನರು, ಇವರು ಬೆಡ್‌ಶೀಟ್ ಮಾರಾಟಗಾರರಂತೆ ನಟಿಸುತ್ತಿದ್ದಾರೆ, ಅವರೆಲ್ಲರೂ ದರೋಡೆಕೋರರು ದಯವಿಟ್ಟು ಗಮನಿಸಿ. ಗ್ಯಾಂಗ್‌ನ ಸದಸ್ಯರು ಹಗಲಿನಲ್ಲಿ ಕಂಬಳಿ ಮಾರಾಟ ಮಾಡುವವರಾಗಿ ಸಾರ್ವಜನಿಕರನ್ನು ಸಂಪರ್ಕಿಸುತ್ತಾರೆ, ಮನೆ ಸಮೀಕ್ಷೆ ಮಾಡಿ ನಂತರ ಮನೆಯನ್ನು ಲೂಟಿ ಮಾಡುತ್ತಾರೆ ಎಂದು ಹೇಳಲಾಗುತ್ತದೆ, ಆದ್ದರಿಂದ ಎಲ್ಲರೂ ತಮ್ಮ ತಮ್ಮ ಬೀಟ್…

Read More

Fact Check | ರಾಹುಲ್ ಗಾಂಧಿ ಮುಂದೆ ಉದ್ಧವ್ ಠಾಕ್ರೆ ನಮಸ್ಕರಿಸುತ್ತಿರುವ ಫೋಟೋ ಎಡಿಟ್ ಮಾಡಲಾಗಿದೆ

“ಈ ಫೋಟೋವನ್ನು ನೋಡಿ.. ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಮುಂದೆ ನಮಸ್ಕರಿಸುತ್ತಿದ್ದಾರೆ. ಈ ಕುರ್ಚಿಯ ದುರಾಸೆ ಒಬ್ಬ ವ್ಯಕ್ತಿಯನ್ನು ಏನು ಬೇಕಾದರೂ ಮಾಡಿಸ ಬಲ್ಲದು. ಭಾರತೀಯರೇ ಇನ್ನಾದರೂ ಎಚ್ಚೆತ್ತುಕೊಳ್ಳಿ ಇಂಡಿಯಾ ಮೈತ್ರಿಕೂಟ ಖುರ್ಚಿಗಾಗಿ ಹೋರಾಡುತ್ತಿದೆ ಎಂಬುದನ್ನು ಮರೆಯದಿರಿ.” ಎಂದು ಫೋಟೋವೊಂದನ್ನು ಅಂತರ್ಜಾಲದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. https://twitter.com/kanganaranautin/status/1823577791507337676 ಈ ಫೋಟೋ ನೋಡಿದ ಹಲವು ಮಂದಿ ಉದ್ಧವ್ ಠಾಕ್ರೆ‌ ಅವರು ನಿಜಕ್ಕೂ ರಾಹುಲ್‌ ಗಾಂಧಿ ಅವರಿಗೆ ನಮಸ್ಕರಿಸಿದ್ದಾರೆ ಎಂದು…

Read More

Fact Check | ಕ್ಯಾಡ್‌ಬರಿಸ್ ಚಾಕೊಲೇಟ್‌ನಲ್ಲಿ ದನದ ಮಾಂಸ ಬೆರೆಸಲಾಗುತ್ತಿದೆ ಎಂಬುದು ಸುಳ್ಳು.!

“ಹಿಂದೂಗಳೇ ಎಚ್ಚರ ನೀವು ತಿನ್ನುವ ಕ್ಯಾಡ್‌ಬರೀಸ್‌ನ ಚಾಕೊಲೇಟ್‌ಗಳಲ್ಲಿ (ಡೈರಿ ಮಿಲ್ಕ್, ಫೈವ್ ಸ್ಟಾರ್ ಇತ್ಯಾದಿ) ದನದ ಮಾಂಸವನ್ನು ಬೆರೆಸಲಾಗುತ್ತಿದೆ. ಇದನ್ನು ಸ್ವತಃ ಕ್ಯಾಡ್‌ಬರೀಸ್‌ ಕಂಪನಿಯೇ ಒಪ್ಪಿಕೊಂಡಿದೆ. ಇಷ್ಟು ಮಾತ್ರವಲ್ಲದೆ ಕ್ಯಾಡ್‌ಬರೀಸ್‌ನ ಯಾವುದೇ ಚಾಕೊಲೇಟ್‌ ರ್ಯಾಪರ್‌ಗಳನ್ನು ಗಮನಿಸಿ ಅದರಲ್ಲಿ ಹಸಿರು ಬಣ್ಣದ ಗುರುತು ಇರುತ್ತದೆ, ಇದು ಹಲಾಲ್‌ ಬೀಫ್‌ ಬೆರೆಸಿರುವ ಸೂಚನೆ. ಇನ್ನು ಈ ಕುರಿತು ಕ್ಯಾಡ್‌ಬರೀಸ್‌ ತನ್ನ ಅಧಿಕೃತವಾಗಿ ವೆಬ್‌ಸೈಟನಲ್ಲಿ ಕೂಡ ಉಲ್ಲಖಿಸಲಾಗಿದೆ” ಎಂದು ಸ್ಕ್ರೀನ್‌ಶಾಟ್‌ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. He vegetarians please note that…

Read More

Fact Check| ಬೌದ್ಧರ ಮೇಲೆ ದಾಳಿ ಎಂದು 2012ರ ಕಾಕ್ಸ್ ಬಜಾರ್ ಹಿಂಸಾಚಾರದ ಫೋಟೋ ಹಂಚಿಕೊಂಡ ಬಲಪಂಥೀಯರು

ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ಹಾಗೂ ಪಲಾಯನದ ಬಳಿಕ ದೇಶದಲ್ಲಿ ಪ್ರತಿಭಟನಾಕಾರರಿಂದ ಅವಾಮೀ ಲೀಗ್ ನಾಯಕರ ಮೇಲೆ ದಾಳಿ ಭುಗಿಲೆದಿದ್ದು, ಹಲವೆಡೆ ಹಿಂಸಾಚಾರದ ಘಟನೆಗಳು ವರದಿಯಾಗುತ್ತಿವೆ. ಈ ನಡುವೆ ಬಾಂಗ್ಲದೇಶದಲ್ಲಿರುವ ಅಲ್ಪಸಂಖ್ಯಾತ ಬೌದ್ಧ ಧರ್ಮೀಯರ ಮೇಲೆ ಬಹುಸಂಖ್ಯಾತ ಮುಸ್ಲಿಮರಿಂದ ಹಿಂಸಾಚಾರ ನಡೆಯುತ್ತಿದೆ ಎಂದು ಬುದ್ಧ ಪ್ರತಿಮೆಗಳನ್ನು ಧ್ವಂಸಗೊಳಿಸಿ, ವಿಹಾರಕ್ಕೆ ಬೆಂಕಿ ಹಚ್ಚಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಬಲಪಂಥೀಯರು ಹಂಚಿಕೊಳ್ಳುತ್ತಿದ್ದಾರೆ. ಆದರೆ, ಈ ಚಿತ್ರಗಳು 2012ರಲ್ಲಿ ನಡೆದ ಕಾಕ್ಸ್ ಬಜಾರ್ ಹಿಂಸಾಚಾರಕ್ಕೆ ಸಂಬಂಧಿಸಿದ್ದು ಎಂಬ ವಿಷಯ ಬಹಿರಂಗವಾಗಿದೆ‌….

Read More