ಪಶ್ಚಿಮ ಬಂಗಾಳದಲ್ಲಿ ನವರಾತ್ರಿ ಕಾರ್ಯಕ್ರಮದ ಸಂದರ್ಭದಲ್ಲಿ ದುರ್ಗಾ ಮಾತೆಯ ಆರತಿಯ ವೇಳೇ, ಗಾಯಕನೊಬ್ಬ ಇಸ್ಲಾಮೀ ಘೋಷಣೆ ಕೂಗಿದ್ದಾನೆ ಎಂದು ವಿಡಿಯೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ. “ಇದು ಪಶ್ಚಿಮ ಬಂಗಾಳ, ನವರಾತ್ರಿಯಲ್ಲಿ ನಿಮ್ಮದೇ ಸ್ಥಳದಲ್ಲಿ ಮಾತಾ ರಾಣಿಯ ಆರತಿಯನ್ನು ಈ ರೀತಿಯಲ್ಲಿ (ಇಸ್ಲಾಮಿ ಘೋಷಣೆಯೊಂದಿಗೆ) ಮಾಡಬೇಕೆಂದು ನೀವು ಬಯಸಿದರೆ, ನೀವು ಬಿಜೆಪಿಯನ್ನು ಹೊರತುಪಡಿಸಿ ಯಾರಿಗಾದರೂ ಮತ ಹಾಕಬಹುದು. ತೀರ್ಮಾನ ನಿಮ್ಮದು” ಎಂಬ ಹಿಂದಿಯಲ್ಲಿ ಸಂದೇಶ ದೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ.
(*ये पश्चिम बंगाल है, यदि आप भी चाहते हैं कि नवरात्रि में माता रानी की ऐसी आरती आपके यहाँ भी हो तो भाजपा को छोड़कर किसी को भी वोट कर सकते हैं।* *मर्ज़ी आपकी ???*)
ಫ್ಯಾಕ್ಟ್ ಚೆಕ್ :
ಪಶ್ಚಿಮ ಬಂಗಾಳದಲ್ಲಿ ನವರಾತ್ರಿ ಕಾರ್ಯಕ್ರಮದ ಸಂದರ್ಭದಲ್ಲಿ ದುರ್ಗಾ ಮಾತೆಯ ಆರತಿಯ ವೇಳೇ, ಗಾಯಕನೊಬ್ಬ ಇಸ್ಲಾಮೀ ಘೋಷಣೆ ಕೂಗಿದ್ದಾನೆ ಎಂದು ಹಂಚಿಕೊಳ್ಳಲಾಗುತ್ತಿರುವ ವಿಡಿಯೋ 2023ರ ಜುಲೈ 21ರಂದು ಕೋಲ್ಕತ್ತಾದಲ್ಲಿ ತೃಣಮೂಲ ಕಾಂಗ್ರೆಸ್ ಆಯೋಜಿಸಿದ್ದ ಹುತಾತ್ಮರ ದಿನದ ರ್ಯಾಲಿಯದ್ದಾಗಿದೆ. ಹಾಡಿನೊಳಗೆ ಕೋಮು ಸಾಮರಸ್ಯ ಸಾರುವ ಗೀತೆಯನ್ನು ಗಾಯಕ ಹಾಡಿದ್ದು, ಇದರ ಒಂದಿಷ್ಟು ಭಾಗವನ್ನು ಕತ್ತರಿಸಿ ವೈರಲ್ ವಿಡಿಯೋದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಆದರೆ, ಪೂರ್ಣ ವಿಡಿಯೋದಲ್ಲಿ ಗಾಯಕನು ವೇದಿಕೆಯಲ್ಲಿ ಹಿಂದೂ ಸ್ತೋತ್ರಗಳೊಂದಿಗೆ ಇಸ್ಲಾಮಿಕ್ ಸೂಕ್ತಗಳನ್ನು ಹಾಡುತ್ತಿರುವುದು ಮತ್ತು ನೂರಾರು ಜನರು ಬೀದಿಯಲ್ಲಿ ಜಮಾಯಿಸಿರುವುದು ದಾಖಲಾಗಿದೆ.
ಕತ್ತರಿಸಿ ಹಂಚಿಕೊಳ್ಳಲಾಗುತ್ತಿರುವ ವೀಡಿಯೊದಿಂದ ಕೀಫ್ರೇಮ್ಗಳಿಂದ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದಾಗ 2023ರ ಜುಲೈ ತಿಂಗಳಿನಲ್ಲಾದ ಕಾರ್ಯಕ್ರಮದ ಇಂತಹುದ್ದೇ ಒಂದು ವಿಡಿಯೋ ಇರುವ ಹಲವಾರು ಪೋಸ್ಟ್ಗಳನ್ನು ಲಭಿಸಿವೆ. ಜುಲೈ 21ರಂದು ಕೋಲ್ಕತ್ತಾದಲ್ಲಿ ತೃಣಮೂಲ ಕಾಂಗ್ರೆಸ್ ಆಯೋಜಿಸಿದ್ದ ಹುತಾತ್ಮರ ದಿನದ ರ್ಯಾಲಿಯ ನೇರ ಪ್ರಸಾರದ ವಿಡಿಯೋ ಎಂಬುದು ಇದರಿಂದ ತಿಳಿದು ಬಂದಿದ್ದು ಅಧೀಕೃತ ಯೂಟ್ಯೂಬ್ ಚಾನೆಲ್ನಿಂದ ಪ್ರಸಾರವಾಗಿರುವು ಪತ್ತೆಯಾಗಿದೆ.
ಪ್ರಸ್ತುತ ನವರಾತ್ರಿ ಕಾರ್ಯಕ್ರಮದ ಸಂದರ್ಭದಲ್ಲಿ ದುರ್ಗಾ ಮಾತೆಯ ಆರತಿಯ ವೇಳೇ, ಗಾಯಕನೊಬ್ಬ ಇಸ್ಲಾಮೀ ಘೋಷಣೆ ಕೂಗಿದ್ದಾನೆ ಎಂಬ ತಪ್ಪಾದ ಸಂದೇಶದೊಂದಿಗೆ ವೈರಲ್ ಮಾಡಲಾಗುತ್ತಿರುವ ವಿಭಾಗವನ್ನು 44:08 ನಿಮಿಷಗಳಿಂದ 45:56 ನಿಮಿಷಗಳ ನಡುವೆ ವೀಕ್ಷಿಸಬಹುದು.
Must Listen| Video from TMC rally goes viral pic.twitter.com/mbjwerS7RV
— Megh Updates 🚨™ (@MeghUpdates) July 22, 2023
ಲೈವ್ ಸ್ಟ್ರೀಮಿಂಗ್ನಲ್ಲಿ, ಗಾಯಕ, ಸಂತನು ರಾಯ್ ಚೌಧರಿ ಅವರು ಅದೇ ಹಾಡನ್ನು ಪ್ರದರ್ಶಿಸುತ್ತಿದ್ದಾರೆ , ಇದು 40:14 ನಿಮಿಷಗಳಿಂದ ಪ್ರಾರಂಭವಾಗುವ ಹಿಂದೂ ಸ್ತೋತ್ರದೊಂದಿಗೆ ಇಸ್ಲಾಮಿಕ್ ಸೂಕ್ತಗಳ ಪಠಣವನ್ನು ಒಳಗೊಂಡಿದೆ. ಹಾಡನ್ನು ಪ್ರದರ್ಶಿಸುವ ಮೊದಲು, ರಾಯ್ ಚೌಧರಿ, “ನಮ್ಮ ಗೌರವಾನ್ವಿತ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನಮ್ಮ ರಾಜ್ಯದಲ್ಲಿ ಮೊದಲ ಬಾರಿಗೆ ಅಧಿಕಾರ ವಹಿಸಿಕೊಂಡಾಗ ಅವರ ಕೋರಿಕೆಯ ಮೇರೆಗೆ ರೆಕಾರ್ಡ್ ಮಾಡಲಾದ ಈ ಹಾಡಿನೊಂದಿಗೆ ನಾನು ಗಾಯನವನ್ನು ಮುಕ್ತಾಯಗೊಳಿಸುತ್ತೇನೆ.”
“ಧರ್ಮವು ಮಗುವಿನ ಮನಸ್ಸಿನಲ್ಲಿ ಬರೆಯಲ್ಪಟ್ಟಿಲ್ಲ” ಮತ್ತು “(ಮಗುವಿಗೆ) ರಾಮ್ ಮತ್ತು ರಹೀಮ್ ಬಗ್ಗೆ ಹೆಚ್ಚು ತಿಳಿದಿಲ್ಲ” ಎಂಬ ಹಾಡು ಕೋಮು ಸಾಮರಸ್ಯದ ಸಂದೇಶವನ್ನು ರವಾನಿಸುವ ಗುರಿಯನ್ನು ಹೊಂದಿದೆ ಎಂಬುದನ್ನು ತಿಳಿಸುತ್ತದೆ.
ಒಟ್ಟಾರೆಯಾಗಿ ಹೇಳುವುದಾದರೆ, ಪಶ್ಚಿಮ ಬಂಗಾಳದಲ್ಲಿ ನವರಾತ್ರಿ ಕಾರ್ಯಕ್ರಮದ ಸಂದರ್ಭದಲ್ಲಿ ದುರ್ಗಾ ಮಾತೆಯ ಆರತಿಯ ವೇಳೇ, ಗಾಯಕನೊಬ್ಬ ಇಸ್ಲಾಮೀ ಘೋಷಣೆ ಕೂಗಿದ್ದಾನೆ ಎಂಬುದು ಸುಳ್ಳು. ಇದು ಕಳೆದ ವರ್ಷ ಜುಲೈ 21ರಂದು ಕೋಲ್ಕತ್ತಾದಲ್ಲಿ ತೃಣಮೂಲ ಕಾಂಗ್ರೆಸ್ ಆಯೋಜಿಸಿದ್ದ ʼಹುತಾತ್ಮರ ದಿನʼದ ರ್ಯಾಲಿಯಲ್ಲಿ ಹಾಡಿದ ಕೋಮು ಸೌಹಾರ್ದ ಗೀತೆಯದ್ದಾಗಿದೆ. ಇದಕ್ಕೂ ನವರಾತ್ರಿ ಆರತಿಗೂ ಯಾವುದೇ ಸಂಬಂಧವಿಲ್ಲ.
ಇದನ್ನು ಓದಿದ್ದೀರಾ?: Fact Check : ಆಹಾರದಲ್ಲಿ ಮೂತ್ರ ಬೆರೆಸಿದ ಮನೆಕೆಲಸದಾಕೆ ಮುಸ್ಲಿಂ ಸಮುದಾಯಕ್ಕೆ ಸೇರಿದವಳು ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.