Fact Check | ಮೆಟ್ರೋ ಪಿಲ್ಲರ್‌ಗಳ ಮೇಲೆ ರೇವಂತ್ ರೆಡ್ಡಿ ಸರ್ಕಾರವನ್ನು ಪ್ರಶ್ನಿಸುವ ‘420’ಎಂಬ ಜಾಹೀರಾತಿನ ಫಲಕ ಹಾಕಲಾಗಿದೆ ಎಂದು ಎಡಿಟೆಡ್‌ ಚಿತ್ರ ಹಂಚಿಕೆ

ಹೈದರಾಬಾದ್‌ನ ಎರಡು ಮೆಟ್ರೋ ಪಿಲ್ಲರ್‌ಗಳ ಮೇಲೆ ಜಾಹೀರಾತು ಫಲಕಗಳನ್ನು ಒಳಗೊಂಡಿರುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ. ಪ್ರತಿಯೊಂದೂ ಜಾಹೀರಾತಿನ ಬೋರ್ಡ್‌ಗಳು ನೀಲಿ ಬಣ್ಣದ ಪ್ರಶ್ನಾರ್ಥಕ ಚಿಹ್ನೆಯನ್ನೂ ಹೊಂದಿದ್ದೂ, ಆ ಚಿಹ್ನೆಯ ಮೇಲೆ ‘420’ ಎಂಬ ಸಂಖ್ಯೆಯನ್ನು ಬರೆಯಲಾಗಿದೆ. ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ನೇತೃತ್ವದ ತೆಲಂಗಾಣ ಕಾಂಗ್ರೆಸ್ ಸರ್ಕಾರ ಮತ್ತು ಅದರ ‘420’ ಭರವಸೆಗಳನ್ನು ಜಾಹೀರಾತು ಫಲಕಗಳಲ್ಲಿನ ಸಂದೇಶಗಳು ಟೀಕಿಸುತ್ತವೆ ಎಂದು ಚಿತ್ರವನ್ನು ಹಂಚಿಕೊಳ್ಳಲಾಗುತ್ತಿದೆ. 420 ಎಂಬ ಸಂಖ್ಯೆಯನ್ನು ಸ್ಥಳೀಯವಾಗಿ ವಂಚನೆ ಅಥವಾ ವಿಶ್ವಾಸ…

Read More
ಬಿಜೆಪಿ

Fact Check: ಬಿಜೆಪಿ ಮಾಜಿ ಶಾಸಕ ಹಾಲಿ ಶಾಸಕನ ಕಚೇರಿಯ ಮೇಲೆ ಗುಂಡು ಹಾರಿಸಿರುವ ವಿಡಿಯೋ ಉತ್ತರಾಖಂಡದ್ದೇ ಹೊರತು ಉತ್ತರ ಪ್ರದೇಶದ್ದಲ್ಲ

ವ್ಯಕ್ತಿಯೋಬ್ಬರು ಪಿಸ್ತೂಲ್‌ ಹಿಡಿದು ಮನೆಯೊಂದರ ಮೇಲೆ ಗುಂಡು ಹಾರಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಉತ್ತರ ಪ್ರದೇಶದ ಮಾಜಿ ಶಾಸಕನೊಬ್ಬ ಹಾಲಿ ಶಾಸಕನ ಮನೆಯ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಪ್ರತಿಪಾದಿಸಲಾಗುತ್ತಿದೆ. ಫೇಸ್‌ಬುಕ್‌ನಲ್ಲಿ ಜನವರಿ 27 ರಂದು ವಿಡಿಯೋವನ್ನು (ಆರ್ಕೈವ್ ಲಿಂಕ್) ಪೋಸ್ಟ್ ಮಾಡುವ ಮೂಲಕ ಹಂಚಿಕೊಂಡಿದ್ದು,  “ಉತ್ತರ ಪ್ರದೇಶಕ್ಕೆ ರಾಮರಾಜ್ಯ ಸಂಪೂರ್ಣ ಚಲನಚಿತ್ರ ಶೈಲಿಯಲ್ಲಿ ಬಂದಿದೆ. ಈಗ ಬುಲ್ಡೋಜರ್ ಚಲಿಸುತ್ತದೆಯೇ ಅಥವಾ ಬಿಲಕ್ಕೆ ಹೋಗುತ್ತದೆಯೇ ಎಂದು ನೋಡೋಣ. ” ಎಂಬ ಶೀರ್ಷಿಕೆಗಳೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಫ್ಯಾಕ್ಟ್‌ ಚೆಕ್:…

Read More

Fact Check | ಅರವಿಂದ್ ಕೇಜ್ರಿವಾಲ್‌ಗೆ ಮತ ಹಾಕುವಂತೆ ಮುಸ್ಲಿಂ ಧರ್ಮಗುರುಗಳು ಫತ್ವಾ ಹೊರಡಿಸಿದ್ದಾರೆ ಎಂಬುದು ಸುಳ್ಳು

ಫೆಬ್ರವರಿ 5 ರಂದು ದೆಹಲಿಯ ಎಲ್ಲಾ 70 ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಫೆಬ್ರವರಿ 8 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಜನವರಿ ತಿಂಗಳಿನಲ್ಲಿ ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ನೇತೃತ್ವದಲ್ಲಿ ಉನ್ನತ ಮಟ್ಟದ ರ್ಯಾಲಿಗಳು ಮತ್ತು ಸಾರ್ವಜನಿಕ ಸಭೆಗಳು ಸೇರಿದಂತೆ ಮಹತ್ತರವಾದ ರಾಜಕೀಯ ಸಭೆ ಸಮಾರಂಭಗಳನ್ನು ನಡೆಸಲಾಗಿದೆ.,  ಇದರ ನಡುವೆ ಇದೀಗ ದೆಹಲಿಯಲ್ಲಿ ಅರವಿಂದ್‌ ಕೇಜ್ರಿವಾಲ್‌ ಅವರಿಗೆ ಮತ ಹಾಕುವಂತೆ ಮುಸ್ಲಿಂ ಧರ್ಮ ಗುರುಗಳು ಫತ್ವಾ ಹೊರಡಿಸಿದ್ದಾರೆ ಎಂಬ…

Read More

Fact Check | ಜನದಟ್ಟಣೆಯಿಂದ ತುಂಬಿರುವ ರೈಲಿನ ವಿಡಿಯೋ ಮಹಾಕುಂಭಮೇಳದ್ದು ಎಂದು ಬಿಹಾರದ ವಿಡಿಯೋ ಹಂಚಿಕೆ

ಕಿಕ್ಕಿರಿದು ತುಂಬಿದ ರೈಲಿನಲ್ಲಿ ಪ್ರಯಾಣಿಕರು ಬಾಗಿಲು ಮತ್ತು ಕಿಟಕಿಗಳಿಗೆ ನೇತಾಡಿಕೊಂಡು ಪ್ರಯಾಣಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್‌ ಆಗುತ್ತಿದೆ. ʼಜನರು ಮಹಾ ಕುಂಭಕ್ಕೆ ಹೋಗುವುದನ್ನು ತೋರಿಸುತ್ತದೆʼ ಎಂಬ ಹೇಳಿಕೆಯೊಂದಿಗೆ ಈ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. ಸಾಮಾಜಿಕ ಜಾಲತಾಣಗಳ ಅನೇಕ ಬಳಕೆದಾರರು ಈ ವಿಡಿಯೋವನ್ನು ನಿಜವೆಂದು ನಂಬಿ “ಜನರು ಮಹಾ ಕುಂಭಮೇಳಕ್ಕೆ ಹೋಗುತ್ತಿದ್ದಾರೆ” ಎಂಬ ಶೀರ್ಷಿಕೆಯೊಂದಿಗೆ  ಹಂಚಿಕೊಳ್ಳುತ್ತಿದ್ದಾರೆ. ಈ ವಿಡಿಯೋದ ಸತ್ಯಾಂಶವನ್ನು ಕನ್ನಡ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ. ಫ್ಯಾಕ್ಟ್‌ಚೆಕ್‌ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್‌ ಆಗುತ್ತಿರುವ ವಿಡಿಯೋದ ನಿಜಸ್ವರೂಪವನ್ನು…

Read More
ಕೇಜ್ರಿವಾಲ್

Fact Check: ಯಮುನಾ ನದಿಯನ್ನು ಸ್ವಚ್ಚಗೊಳಿಸುವ ಕುರಿತಂತೆ ಅರವಿಂದ್‌ ಕೇಜ್ರಿವಾಲ್‌ ಅವರ ಎಡಿಟೆಡ್‌ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ದೆಹಲಿ ಕ್ಯಾಬಿನೆಟ್ ಸಚಿವ ಸೌರಭ್ ಭಾರದ್ವಾಜ್ ಅವರು ವೇದಿಕೆಯ ಮೇಲೆ ಕಾಣಿಸಿಕೊಂಡಿರುವ ಆಮ್ ಆದ್ಮಿ ಪಕ್ಷದ (ಎಎಪಿ) ಸಭೆಯನ್ನು ತೋರಿಸುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ, ಭಾರದ್ವಾಜ್ ಸಭೆಗೆ ಸಿರಿಯನ್ನು ಪರಿಚಯಿಸುತ್ತಾರೆ, ಪ್ರಶ್ನೆಗಳಿಗೆ ಉತ್ತರಿಸಲು ಚಾಟ್ ಜಿಪಿಟಿಯನ್ನು ಬಳಸುತ್ತಿದ್ದೇನೆ ಎಂದು ಹೇಳುತ್ತಾರೆ. ನಂತರ ಅವರು ಸಿರಿಗೆ ಒಂದು ಪ್ರಶ್ನೆಯನ್ನು ಕೇಳುತ್ತಾರೆ: “ಯಮುನಾ ನದಿಯನ್ನು ಐದು ವರ್ಷಗಳಲ್ಲಿ ಸ್ವಚ್ಛಗೊಳಿಸಲಾಗುವುದು ಎಂದು ಯಾರು ಭರವಸೆ ನೀಡಿದರು?” ಇದಕ್ಕೆ ಪ್ರತಿಕ್ರಿಯಿಸಿದ ಸಿರಿಯ ಧ್ವನಿ, “ಅರವಿಂದ್ ಕೇಜ್ರಿವಾಲ್…

Read More

Fact Check | ಮಹಾ ಕುಂಭಮೇಳದಲ್ಲಿನ ಕಾಲ್ತುಳಿತಕ್ಕೆ ಸಂಬಂಧಿಸಿದ ವಿಡಿಯೋ ಎಂದು ಪೋರ್ಚುಗಲ್‌ನ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ

ಜನವರಿ 28ರಂದು ಮೌನಿ ಅಮಾವಾಸ್ಯೆಯ ದಿನ ತಡರಾತ್ರಿ ಪ್ರಯೋಗ್‌ ರಾಜ್‌ ಮಹಾ ಕುಂಭಮೇಳದಲ್ಲಿ ಕಾಲ್ತುಳಿತ ಉಂಟಾಗಿದ್ದು, ಅದರಲ್ಲಿ ಸುಮಾರು 30 ಭಕ್ತರು ಸಾವನ್ನಪ್ಪಿರುವ ಕುರಿತು ವರದಿಗಳು ಬಂದಿವೆ. ಇದಕ್ಕೆ ಪೂರಕವಾಗಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು, ಆ ವಿಡಿಯೋವನ್ನು ಹಂಚಿಕೊಂಡಿರುವ ಹಲವರು ಇದು ಮಹಾ ಕುಂಭಮೇಳದಲ್ಲಿ ನಡೆದ ಕಾಲ್ತುಳಿತ ಘಟನೆಗೆ ಸಂಬಂಧಿಸಿದಾಗಿದೆ ಎಂದು ಬರೆದುಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ವಿಶಾಲ ಬಯಲು ಪ್ರದೇಶದಲ್ಲಿ ಜನರು ಇಕ್ಕಟ್ಟಿನ ಪ್ರದೇಶದಲ್ಲಿ ಮಲಗಿರುವುದು ಕಂಡು ಬಂದಿದೆ. ಇದನ್ನು ಗಮನಿಸಿದ ಹಲವು…

Read More
ಮಹಾಕುಂಭ ಮೇಳ

Fact Check: 154 ವರ್ಷದ ಸಂತ ಸಿಯಾರಾಮ್ ಬಾಬಾ 2025ರ ಮಹಾಕುಂಭ ಮೇಳಕ್ಕೆ ಭೇಟಿ ನೀಡಿದ್ದಾರೆ ಎಂದು ಹಳೆಯ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ

ಹಿರಿಯ ಸಂತರೊಬ್ಬರು ಕೆಂಪು ಬಟ್ಟೆಯಿಂದ ದೇವರ ಚಿತ್ರವನ್ನು ತೆಗೆದು ಪೂಜೆಗೆ ಅಣಿ ಮಾಡಿಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ (ಇಲ್ಲಿ, ಇಲ್ಲಿ ಮತ್ತು ಇಲ್ಲಿ). “ಈ ವ್ಯಕ್ತಿ ಹಿಮಾಲಯದ 154 ವರ್ಷದ ಸಂತನಾಗಿದ್ದು, 2025 ರ ಮಹಾ ಕುಂಭ ಮೇಳದಲ್ಲಿ ಭಾಗವಹಿಸಿದ್ದಾರೆ” ಎಂಬ ಹೇಳಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. ಆರ್ಕೈವ್ ಮಾಡಿದ ಪೋಸ್ಟ್ ಅನ್ನು ಇಲ್ಲಿ ಕಾಣಬಹುದು. ಫ್ಯಾಕ್ಟ್‌ ಚೆಕ್: ಈ ವಿಡಿಯೋ 2025ರ ಕುಂಭಮೇಳದ್ದಲ್ಲ. ಇದು ಮಧ್ಯಪ್ರದೇಶದ ಭಟ್ಟಾಯನ್ ಭುಜರ್ಗ್‌ನಲ್ಲಿರುವ ತಮ್ಮ ಆಶ್ರಮದಲ್ಲಿ ಡಿಸೆಂಬರ್ 2024 ರಲ್ಲಿ ನಿಧನರಾದ ಸಂತ…

Read More

Fact Check | ವ್ಯಕ್ತಿಯೊಬ್ಬ ಕ್ಯಾಲಿಫೋರ್ನಿಯಾದ ಕಾಡ್ಗಿಚ್ಚಿನಿಂದ ಮೊಲವನ್ನು ರಕ್ಷಿಸಿದ್ದಾನೆ ಎಂದು 2017ರ ವಿಡಿಯೋ ಹಂಚಿಕೆ

ರಸ್ತೆಬದಿಯಲ್ಲಿ ಹೊತ್ತಿಉರಿಯುತ್ತಿರುವ ಬೆಂಕಿಯಿಂದ ವ್ಯಕ್ತಿಯೊಬ್ಬ ಮೊಲವನ್ನು ರಕ್ಷಿಸಿರುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ. ಅನೇಕ ಬಳಕೆದಾರರು ಈ ಘಟನೆಯನ್ನು ಇತ್ತೀಚೆಗೆ ಸಂಭವಿಸಿದ ಕ್ಯಾಲಿಫೋರ್ನಿಯಾದ ಕಾಡ್ಚಿಚ್ಚಿನದು ಎಂದು ಹಂಚಿಕೊಳ್ಳುತ್ತಿದ್ದಾರೆ. “ಲಾಸ್ ಏಂಜಲೀಸ್‌ನಲ್ಲಿ ಸಂಭವಿಸಿದ ಕಾಡ್ಗಿಚ್ಚಿನಿಂದ ವ್ಯಕ್ತಿಯೊಬ್ಬ ಪುಟ್ಟ ಮೊಲವನ್ನು ರಕ್ಷಿಸಿದ. ಎಂತಹ ಕೆಟ್ಟ ಸಮಯದಲ್ಲೂ ಮಾನವೀಯತೆ ಅಸ್ತಿತ್ವದಲ್ಲಿದೆ ಎಂದು ಸಾಬೀತುಪಡಿಸಿದ ಈ ಮನುಷ್ಯನನ್ನು ದೇವರು ಆಶೀರ್ವದಿಸಲಿ” ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲಾಗಿದೆ. ಫ್ಯಾಕ್ಟ್‌ ಚೆಕ್‌ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್‌ ಆಗುತ್ತಿರುವ ವಿಡಿಯೋದ ನಿಜಸ್ವರೂಪವನ್ನು…

Read More

Fact Check | ಡಿಂಪಲ್ ಯಾದವ್ ಅವರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ ಎಂದು 2022ರ ವಿಡಿಯೋ ಹಂಚಿಕೆ

ಇತ್ತೀಚಿನ ದಿನಗಳಲ್ಲಿ ಸಮಾಜವಾದಿ ಪಕ್ಷದ ನಾಯಕರಿಗೆ ಒಳ್ಳೆಯ ಬುದ್ಧಿ ಬಂದಿದೆ. ಆ ಪಕ್ಷದ ನಾಯಕರಾದ ಅಖಿಲೇಶ್ ಯಾದವ್, ಡಿಂಪಲ್ ಯಾದವ್ ಸೇರಿದಂತೆ ಹಲವರು ಈಗ ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡುವ ಮೂಲಕ ಹಿಂದೂ ಧರ್ಮದ ಆಚರಣೆಗಳಲ್ಲಿ ಭಾಗಿಯಾಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇವರು ಬಿಜೆಪಿಯೊಂದಿಗೆ ಗುರುತಿಸಿಕೊಂಡರೆ ಅಚ್ಚರಿ ಇಲ್ಲ ಎಂದು ಪೋಸ್ಟ್ ಒಂದನ್ನು ಹಂಚಿಕೊಳ್ಳಲಾಗುತ್ತಿದೆ. सभी सपाई #यदमुल्लों को सनातन के विरुद्ध भड़काकर, उनके मालिक के बाद उनकी मालकिन डिम्पल भी…

Read More

Fact Check | ಅಮೃತಸರದಲ್ಲಿ ಅಂಬೇಡ್ಕರ್‌ರವರ ಪ್ರತಿಮೆಯನ್ನು ಒಡೆಯಲು ಯತ್ನಿಸಿದ ಯುವಕನಿಗೆ ವಕೀಲರು ಥಳಿಸಿದ್ದಾರೆ ಎಂಬುದು ಸುಳ್ಳು

ವಕೀಲರು ನ್ಯಾಯಾಲಯದ ಅವರಣದಲ್ಲಿ ಪೊಲೀಸರ ಎದುರೇ ವ್ಯಕ್ತಿಯನ್ನು ಥಳಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲಾತಾಣಗಳಲ್ಲಿ ವ್ಯಾಪಕವಾಗಿ ವೈರಲ್‌ ಆಗುತ್ತಿದೆ. ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಯನ್ನು ಧಕ್ಕೆಗೊಳಿಸಿದ್ದಕ್ಕಾಗಿ ವಕೀಲರು ಆರೋಪಿಗಳನ್ನು ಥಳಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಜನವರಿ 26ರಂದು ಪಂಜಾಬ್‌ನ ಅಮೃತಸರದಲ್ಲಿ ಅಂಬೇಡ್ಕರ್ ಅವರ ಪ್ರತಿಮೆಯನ್ನು ಧಕ್ಕೆಗೊಳಿಸಲು ಯತ್ನಿಸಿದ ಆರೋಪದ ಮೇಲೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈ ವ್ಯಕ್ತಿಯನ್ನು ಮೊಗದ ನಿವಾಸಿ ಆಕಾಶದೀಪ್ ಸಿಂಗ್ ಎಂದು ಗುರುತಿಸಲಾಗಿದ್ದು, ಈತನನ್ನು ಜನರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಘಟನೆ ನಡೆದ ಮೂರು ದಿನಗಳ…

Read More