Fact Check | ಸಲ್ಮಾನ್ ಖಾನ್ ಮತ್ತು ತಮನ್ನಾ ಭಾಟಿಯಾ ಅವರ ಸ್ಕೈಡೈವಿಂಗ್ ಪೋಟೋವನ್ನು AIನಿಂದ ರಚಿಸಲಾಗಿದೆ

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಮತ್ತು ತಮನ್ನಾ ಭಾಟಿಯಾ ಸ್ಕೈಡೈವಿಂಗ್ ಮಾಡುತ್ತಿರುವ ಪೋಟೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಉಪಸ್ನಾ ಎಂಬ ಬಳಕೆದಾರರು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ “ಸಲ್ಮಾನ್ ಖಾನ್ ತಮನ್ನಾ ಭಾಟಿಯಾ ಸ್ಕೈಡೈವಿಂಗ್ ಮಾಡುತ್ತಿರುವ ಪೋಟೋ ಸುಂದರವಾಗಿದೆ” ಎಂಬ ಶೀರ್ಷಿಕೆಯೊಂದಿಗೆ ಪೋಟೋವನ್ನು ಹಂಚಿಕೊಂಡಿದ್ದಾರೆ. ಈ ವೈರಲ್‌ ಪೋಟೋದ ನಿಜಾಂಶವನ್ನು ಕನ್ನಡ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲಿಸೋಣ. ಫ್ಯಾಕ್ಟ್‌ ಚೆಕ್‌ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್‌ ಆಗುತ್ತಿರುವ ಪೋಟೋದ ನಿಜಸ್ವರೂಪವನ್ನು ತಿಳಿದುಕೊಳ್ಳಲು ಕನ್ನಡ ಫ್ಯಾಕ್ಟ್‌ ಚೆಕ್‌ ತಂಡವು ಮುಂದಾಯ್ತು….

Read More
ವಂದೇ ಭಾರತ್ ಎಕ್ಸ್‌ಪ್ರೆಸ್‌

Fact Check: ಕಾಶ್ಮೀರದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್‌ ಓಡಾಟ ಆರಂಭಗೊಂಡಿದೆ ಎಂದು ಎಐ ರಚಿತ ಚಿತ್ರವನ್ನು ಹಂಚಿಕೊಳ್ಳಲಾಗುತ್ತಿದೆ

ಹಿಮದಿಂದ ಆವೃತವಾದ ಎತ್ತರದ ಪರ್ವತಗಳ ನಡುವೆ ರೈಲು ಚಲಿಸುತ್ತಿರುವುದನ್ನು ತೋರಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಮೂರು ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ವಂದೇ ಭಾರತ್ ಕಾಶ್ಮೀರದ ಹಿಮಭರಿತ ಕಣಿವೆಗಳ ಮೂಲಕ ಪ್ರಯಾಣಿಸುತ್ತಿದೆ ಎಂದು ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಪ್ರತಿಪಾದಿಸುತ್ತಿದ್ದಾರೆ. ಫೇಸ್‌ಬುಕ್‌ ಬಳಕೆದಾರರೊಬ್ಬರು ಈ ಕೆಳಗಿನ ಶೀರ್ಷಿಕೆಯೊಂದಿಗೆ ವೈರಲ್ ಪೋಸ್ಟ್ ಅನ್ನು ಪೋಸ್ಟ್ ಮಾಡಿದ್ದಾರೆ: বরফে ঢাকা কাশ্মীরে বন্দে ভারত, মনমুগ্ধকর দৃশ্য!(ಹಿಮದಿಂದ ಆವೃತವಾದ ಕಾಶ್ಮೀರದಲ್ಲಿ ಭಾರತ, ಸುಂದರ ದೃಶ್ಯ!) ನೀವು ಪೋಸ್ಟ್ ಅನ್ನು ಇಲ್ಲಿ ಪರಿಶೀಲಿಸಬಹುದು. ಫ್ಯಾಕ್ಟ್ ಚೆಕ್…

Read More
ಮಹಾಕುಂಭ

Fact Check: ಮಹಾಕುಂಭ ಮೇಳದಲ್ಲಿ ಯುವತಿಯೊಬ್ಬಳು ಅಘೋರಿಯನ್ನು ಮದುವೆಯಾಗಿದ್ದಾಳೆ ಎಂಬುದು ಸುಳ್ಳು

ಯುವತಿಯೊಬ್ಬಳು ಅಘೋರಿ ವೇಷ ಧರಿಸಿದ ವ್ಯಕ್ತಿಯನ್ನು ಮದುವೆಯಾಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದು ಮಹಾಕುಂಭ ಮೇಳದಲ್ಲಿ ನಡೆದಿರುವ ಘಟನೆ ಎಂಬ ಹೇಳಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. ಫೇಸ್‌ಬುಕ್‌ ಬಳಕೆದಾರರಾದ ‘ಆರತಿ ಭಕ್ರೆ’ ಜನವರಿ 15, 2025 ರಂದು “ತನಾತನಿಗಳ ಲೀಲೆ ಅಪಾರ. ಮಹಾಕುಂಬ ಮೇಳದಲ್ಲಿ ಒಂದಲ್ಲ ಒಂದು ಕಂಡುಬರುತ್ತದೆ ” ಎಂಬ ಶೀರ್ಷಿಕೆಯೊಂದಿಗೆ ವೈರಲ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಪೋಸ್ಟ್‌ನ ಆರ್ಕೈವ್ ಮಾಡಿದ ಲಿಂಕ್ ಅನ್ನು ಇಲ್ಲಿ ಪರಿಶೀಲಿಸಬಹುದು. ಫ್ಯಾಕ್ಟ್‌ ಚೆಕ್: ವೈರಲ್ ಪೋಸ್ಟ್‌ನ ಸತ್ಯವನ್ನು ತಿಳಿಯಲು,…

Read More

Fact Check | ಮಹಾ ಕುಂಭಮೇಳ ಪ್ರದೇಶದಲ್ಲಿ ಸ್ಥಾಪಿಸಲಾದ ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬುದು ಸುಳ್ಳು

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭಮೇಳ ಆರಂಭಗೊಂಡಿದ್ದು, ಮೊದಲ ದಿನ 50 ಲಕ್ಷಕ್ಕೂ ಹೆಚ್ಚು ಭಕ್ತರು ಪವಿತ್ರ ಸ್ನಾನ ಮಾಡಿದರು. ಈ ಅದ್ಧೂರಿ ಕಾರ್ಯಕ್ರಮದ ನಡುವೆ, ಮಹಾ ಕುಂಭಮೇಳದಲ್ಲಿ ನಿರ್ಮಿಸಲಾದ ಆಸ್ಪತ್ರೆಯಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಎಂಟು ಜನರು ಗಾಯಗೊಂಡಿದ್ದಾರೆ ಎಂಬ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಕೈಲಾಶ್‌ ಮೌರ್ಯ ಎಂಬ ಬಳಕೆದಾರ “ಮಹಾಕುಂಭಮೇಳದ ಪ್ರದೇಶದಲ್ಲಿ ಸ್ಥಾಪಿಸಲಾದ ಆಸ್ಪತ್ರೆಯಲ್ಲಿ ಬೆಂಕಿ ಸಂಭವಿಸಿದೆ”ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾನೆ. ಈ ವಿಡಿಯೋದ ಸತ್ಯಾಸತ್ಯತೆಯನ್ನು ಕನ್ನಡ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ….

Read More

ಡಾ. ಬಿ.ಆರ್‌. ಅಂಬೇಡ್ಕರ್ ಅವರ ಸಂದೇಶ ಫಲಕದ ಮೇಲೆ ಯುಪಿ ಪೊಲೀಸರು ಬಣ್ಣ ಬಳಿದಿದ್ದಾರೆ ಎಂಬುದು ಸುಳ್ಳು

ಉತ್ತರಪ್ರದೇಶದ ಇಟಾಹ್ ಪೊಲೀಸರನ್ನು ಗುರಿಯಾಗಿಸಿ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. ಇದರಲ್ಲಿ ಇಬ್ಬರು ಪೊಲೀಸರು ಡಾ. ಬಿ.ಆರ್‌ ಅಂಬೇಡ್ಕರ್‌ರವರ ಚಿತ್ರವಿರುವ ಬೋರ್ಡ್‌ವೊಂದನ್ನು ಒರೆಸುತ್ತಿರುವುದನ್ನು ಕಾಣಬಹುದು. ಕೆಲವು ಬಳಕೆದಾರರು ಈ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದು, “ದೊದಲ್ಪುರ ಗ್ರಾಮದ ಫಲಕದ ಮೇಲಿದ್ದ ಅಂಬೇಡ್ಕರ್‌ರವರ ಸಂದೇಶವನ್ನು ಅಳಿಸಿ ಅವಮಾನ ಮಾಡಿದ್ದಾರೆ” ಎಂದು ಬರೆದುಕೊಂಡಿದ್ದನ್ನು ಕಾಣಬಹುದು. ಫೇಸ್‌ಬುಕ್‌ನಲ್ಲಿ ರಶ್ಮಿಕಾ ಎಂಬವರು ಈ ಚಿತ್ರವನ್ನು ಜನವರಿ 12 ರಂದು ಪೋಸ್ಟ್ ಮಾಡಿದ್ದಾರೆ ( ಆರ್ಕೈವ್ ಲಿಂಕ್ ) ಮತ್ತು “ಇಟಾಹ್, ದೊದಲ್ಪುರ ಗ್ರಾಮದ ಫಲಕದಲ್ಲಿದ್ದ “ನಿಮ್ಮ ಕಾಲಿಗೆ…

Read More
ಒಲಿಂಪಿಕ್ಸ್‌

Fact Check: ಈಜಿಪ್ಟ್‌ನ ಫೆನ್ಸಿಂಗ್ ಆಟಗಾರ್ತಿ ನಾಡಾ ಹಫೀಜ್ ಅವರ ಪೋಟೋವನ್ನು ಭಾರತೀಯ ಒಲಿಂಪಿಕ್ಸ್‌ ಆಟಗಾರ್ತಿ ಎಂದು ಹಂಚಿಕೊಳ್ಳಲಾಗುತ್ತಿದೆ

ಏಳು ತಿಂಗಳ ಗರ್ಭಿಣಿಯಾಗಿದ್ದರೂ ಭಾರತೀಯ ಫೆನ್ಸಿಂಗ್ ಅಥ್ಲೀಟ್ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದಿದ್ದಾರೆ ಎಂದು ಹೇಳುವ ಪೋಸ್ಟ್ (ಇಲ್ಲಿ ಮತ್ತು ಇಲ್ಲಿ) ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಆಟಗಾರ್ತಿಯ ಚಿತ್ರವನ್ನು ಒಳಗೊಂಡಿರುವ ಪೋಸ್ಟರ್‌ ಒಂದನ್ನು “ಅತ್ಯಂತ ಭಾದಿಸುವ ಸಂಗತಿ ಎಂದರೆ ಇದೆ. ಏಳು ತಿಂಗಳ ಗರ್ಭಿಣಿಯಾಗಿದ್ದರೂ ಭಾರತೀಯ ಫೆನ್ಸಿಂಗ್ ಅಥ್ಲೀಟ್ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದಿದ್ದಾರೆ . ಅವರು ಪಟ್ಟ ಶ್ರಮವನ್ನು ಯಾರೂ ಗುರುತಿಸುತ್ತಿಲ್ಲ, ಅವರು ಕ್ರಿಕೇಟಿಗರಲ್ಲ ಎಂದಾ?” ಎಂದು ಬರೆದು ಹಂಚಿಕೊಳ್ಳಲಾಗುತ್ತಿದೆ. ಈ ಪೋಸ್ಟ್ ನ ಆರ್ಕೈವ್ ಮಾಡಿದ ಆವೃತ್ತಿಯನ್ನು ನೀವು ಇಲ್ಲಿ…

Read More

Fact Check | ಮಹಾಕುಂಭದಲ್ಲಿ ವ್ಯಕ್ತಿಯೊಬ್ಬ 2ನಿಮಿಷಕ್ಕೂ ಹೆಚ್ಚು ಕಾಲ ಶಂಖ ಊದುವ ಮೂಲಕ ವಿಶ್ವದಾಖಲೆ ಮಾಡಿದ್ದಾನೆ ಎಂಬುದು ಸುಳ್ಳು

ಅಲಂಕರಿಸಿದ ವೇದಿಕೆಯ ಮೇಲೆ ವ್ಯಕ್ತಿಯೊಬ್ಬ ಎರಡು ನಿಮಿಷಗಳಿಗಿಂತ ಹೆಚ್ಚು ಕಾಲ ಶಂಖ ಊದಿರುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದು ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭದ ಉದ್ಘಾಟನಾ ಸಮಾರಂಭದ ದೃಶ್ಯ ಎಂದು ಬಳಕೆದಾರರು ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ. ನಂದ ದುಲಾಲ್‌ ಗೊಸ್ವಾಮಿ ಎಂಬ ಬಳಕೆದಾರ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ” ಜೈ ಜಗನ್ನಾಥ, ಶುಭ ಸಂಜೆ………ಮಹಾಕುಂಭದ ಉದ್ಘಾಟನಾ ಸಮಾರಂಭದ ದೃಶ್ಯದಲ್ಲಿ 2 ನಿಮಿಷ 49 ಸೆಕೆಂಡ್ಸ್‌ಗಳ ಕಾಲ ವ್ಯಕ್ತಿಯೊಬ್ಬ ಶಂಖವನ್ನು ಊದಿ ವರ್ಲ್ಡ್‌ ರೆಕಾರ್ಡ್‌ ಮಾಡಿದ್ದಾನೆ. ಇದು ಹಿಂದೂ…

Read More