banu

FACT CHECK | ಅಮೆರಿಕದಿಂದ ಗಡೀಪಾರಾದ ಭಾರತೀಯರು ಎಂದು ಗ್ವಾಟೆಮಾಲಾಗೆ ಗಡೀಪಾರು ಮಾಡಲಾದ ಅಕ್ರಮ ವಲಸಿಗರ ಫೋಟೋ ಹಂಚಿಕೊಳ್ಳಲಾಗುತ್ತಿದೆ

ಅಮೇರಿಕದಿಂದ 104 ಭಾರತೀಯರನ್ನು ಗಡೀಪಾರು ಮಾಡಿದ ವಿಷಯವು ಸಂಸತ್ತಿನಲ್ಲಿ ಭಾರಿ ಕೋಲಾಹಲ ಸೃಷ್ಟಿಸಿತ್ತು ಮತ್ತು ವಿದೇಶಾಂಗ ಸಚಿವ ಎಸ್. ಜೈಶಂಕರ್ ಸಂಸತ್ತಿನಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದರು. ಈ ಸಂದರ್ಭದಲ್ಲಿ, ಯುದ್ಧ ವಿಮಾನದಲ್ಲಿ ಜನರಿಗೆ ಕೈಕೋಳ ತೊಡಿಸಿರುವುದನ್ನು ತೋರಿಸುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಈ ಫೋಟೋ ಅಮೆರಿಕದಿಂದ ಗಡೀಪಾರು ಮಾಡಲಾದ ಭಾರತೀಯರದ್ದಾಗಿದೆ ಎಂದು ಹೇಳಿಕೊಂಡು ಶೇರ್‌ ಮಾಡಲಾಗುತ್ತಿದೆ. ಫೇಸ್‌ಬುಕ್‌ನಲ್ಲಿ ‘ಅಜಯ್ ಸಿಂಗ್ ಚಿಂಪಾ’ ಅವರು ವೈರಲ್ ಪೋಸ್ಟ್ (ಆರ್ಕೈವ್ ಲಿಂಕ್ ) ಅನ್ನು ಹಂಚಿಕೊಳ್ಳುವಾಗ, “ಹೌಡಿ ಮೋದಿ…

Read More

FACT CHECK | ಕೇಜ್ರಿವಾಲ್ & ಅತಿಶಿ ನಾಮಫಲಕಕ್ಕೆ ಮಹಿಳೆಯರು ಮಸಿ ಬಳಿದ ಹಳೆಯ ವಿಡಿಯೋವನ್ನು ದೆಹಲಿ ಚುನಾವಣೆಯದ್ದು ಎಂದು ಹಂಚಿಕೊಳ್ಳಲಾಗುತ್ತಿದೆ

2025ರ ದೆಹಲಿ ವಿಧಾನಸಭಾ ಚುನಾವಣೆಗೆ ಫೆಬ್ರವರಿ 5ರಂದು ಮತದಾನ ನಡೆಯಿತು.  ಈ ನಡುವೆ, ಆಮ್ ಆದ್ಮಿ ಪಕ್ಷದ (ಎಎಪಿ) ಸಂಚಾಲಕ ಮತ್ತು ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ದೆಹಲಿ ಮುಖ್ಯಮಂತ್ರಿ ಅತಿಶಿ ಮರ್ಲೆನಾ ಅವರ ನಾಮಫಲಕಗಳಿಗೆ ಕೆಲವು ಮಹಿಳೆಯರು ಕಪ್ಪು ಬಣ್ಣ ಬಳಿಯುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆಲವು ಬಳಕೆದಾರರು ಈ ವಿಡಿಯೋವನ್ನು ಇತ್ತೀಚಿನದು ಎಂದು ಹಂಚಿಕೊಳ್ಳುತ್ತಿದ್ದಾರೆ. ಎಕ್ಸ್ ಬಳಕೆದಾರ ಓಷನ್ ಜೈನ್  2025ರ ಫೆಬ್ರವರಿ 5ರಂದು ಈ  ವಿಡಿಯೋವನ್ನು ” ದೆಹಲಿಯ…

Read More

FACT CHECK | ಆಜ್ ತಕ್ ಎಕ್ಸಿಟ್‌ ಪೋಲ್ಸ್‌ನಲ್ಲಿ “AAP ಜಯಭೇರಿ” ಎಂದು ನಕಲಿ ಸಮೀಕ್ಷೆಯ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ

2025ರ ದೆಹಲಿ ವಿಧಾನಸಭಾ ಚುನಾವಣೆಗಳು ಫೆಬ್ರವರಿ 05ರಂದು ನಡೆಯಲಿವೆ. ಇದರ ನಡುವೆ, ಆಜ್ ತಕ್ ಅವರ ಬ್ರೇಕಿಂಗ್ ನ್ಯೂಸ್ ಟೆಂಪ್ಲೇಟ್ ಅನ್ನು ಒಳಗೊಂಡ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. “ದೆಹಲಿಯಲ್ಲಿ ಸತತ ನಾಲ್ಕನೇ ಬಾರಿಗೆ ಗೆಲ್ಲುವ ಮೂಲಕ ಎಎಪಿ ಇತಿಹಾಸ ನಿರ್ಮಿಸಲಿದೆ” ಎಂದು ವಿಡಿಯೋದಲ್ಲಿ ಪ್ರಸಾರ ಮಾಡಲಾಗುತ್ತಿದೆ. ಈ ಸಮೀಕ್ಷೆಯ ಪ್ರಕಾರ, ಎಎಪಿ 56-58 ಸ್ಥಾನಗಳನ್ನು ಗಳಿಸುವ ನಿರೀಕ್ಷೆಯಿದೆ, ಆದರೆ ಬಿಜೆಪಿ 12-14 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. ಮತ್ತೊಂದೆಡೆ, ಕಾಂಗ್ರೆಸ್ ಮತ್ತೊಮ್ಮೆ ಸೊನ್ನೆ ಸುತ್ತಲಿದೆ ಎಂದು…

Read More

FACT CHECK | ಮಥುರಾದ ರಾಧಾ-ರಾಣಿ ದೇವಸ್ಥಾನದಲ್ಲಿನ ಜನಸಂದಣಿಯ ವಿಡಿಯೋವನ್ನು ಮಹಾಕುಂಭ ಮೇಳದೊಂದಿಗೆ ಜೋಡಿಸಿ ಹಂಚಿಕೊಳ್ಳಲಾಗುತ್ತಿದೆ

ಕಿರಿದಾದ ರಸ್ತೆಯಲ್ಲಿ ಜನರ ದಂಡು ಸಿಲುಕಿಕೊಂಡು ನೂಕುನುಗ್ಗಲು ಆಗುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದ್ದು ಎಂದು ಹೇಳಿಕೊಂಡು ಹಂಚಿಕೊಳ್ಳಲಾಗುತ್ತಿದೆ. ಬೀದಿಗಳಲ್ಲಿ ನಡೆಯಲು ಸಹ ದಾರಿಯೂ ಇಲ್ಲ. ಮಹಾಕುಂಭ ಮೇಳಕ್ಕೆ ಮಾಡಲಾದ ಕಳಪೆ ವ್ಯವಸ್ಥೆಗಳ ಕುರಿತು ಉತ್ತರ ಪ್ರದೇಶ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು ಈ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. ಫೇಸ್‌ಬುಕ್ ಬಳಕೆದಾರ ‘ಆರತಿ ಭಕರೆ’ 2025ರ ಫೆಬ್ರವರಿ 3ರಂದು ವೈರಲ್ ವಿಡಿಯೋವನ್ನು ಹಂಚಿಕೊಂಡಿದ್ದು,  “ಮಹಾಕುಂಭದ ಐತಿಹಾಸಿಕ ವ್ಯವಸ್ಥೆ” ಎಂದು ಬರೆದುಕೊಂಡಿದ್ದಾರೆ….

Read More

FACT CHECK | ಭಾರತ-ಬಾಂಗ್ಲಾದೇಶ ಗಡಿಯಲ್ಲಿ “ಹಾಡಿನ ಯುದ್ಧ” ಎಂದು ಪ.ಬಂಗಾಳದಲ್ಲಿ ನಡೆದ ಸ್ಥಳೀಯ ಧ್ವನಿವರ್ಧಕ ಸ್ಪರ್ಧೆಯ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ

ಈ ವರ್ಷ ಜನವರಿಯಲ್ಲಿ, ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಮುಳ್ಳುತಂತಿ ಬೇಲಿ ಅಳವಡಿಸುವ ಬಗ್ಗೆ ಬಿಎಸ್‌ಎಫ್ ಮತ್ತು ಬಾಂಗ್ಲಾ ಪಡೆಯ ನಡುವೆ ಉದ್ವಿಗ್ನತೆ ಉಂಟಾಗಿತ್ತು. ಈ ನಡುವೆ, ಚಾಪೈನವಾಬ್‌ಗಂಜ್ ಗಡಿಯಲ್ಲಿ ಎರಡೂ ದೇಶಗಳ ನಿವಾಸಿಗಳ ನಡುವೆ ‘ಗುಂಡು ಹಾರಾಟ’ ನಡೆದಿದೆ ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ.  ವಿಡಿಯೋದಲ್ಲಿ, ಬಯಲು ಕೃಷಿಭೂಮಿಯ ಎರಡೂ ಬದಿಗಳಲ್ಲಿ ಹಲವಾರು ಲೌಡ್‌ಸ್ಪೀಕರ್‌ ಮತ್ತು ಮೈಕ್ರೊಫೋನ್‌ಗಳನ್ನು ಇರಿಸಲಾಗಿದ್ದು ಮತ್ತು ಜೋರಾಗಿ ಸಂಗೀತವನ್ನು ಮೊಳಗಿಸುವುದನ್ನು ಕಾಣಬಹುದು. ಫೇಸ್‌ಬುಕ್ ಬಳಕೆದಾರರೊಬ್ಬರು ಈ ವೈರಲ್ ಪೋಸ್ಟ್ ಅನ್ನು “ಬಾಂಗ್ಲಾದೇಶ-ಭಾರತ ಚಾಪೈನವಾಬ್‌ಗಂಜ್ ಗಡಿಯಲ್ಲಿ…

Read More

FACT CHECK | ಮೆಕ್ಸಿಕೋದಲ್ಲಿ ಸಮಾಧಿಗಳು ಪತ್ತೆಯಾಗಿವೆ ಎಂದು ಗಾಜಾದ ಸಾಮೂಹಿಕ ಅಂತ್ಯಸಂಸ್ಕಾರದ ಫೋಟೋ ಹಂಚಿಕೊಳ್ಳಲಾಗುತ್ತಿದೆ

2025ರ  ಜನವರಿ 25ರಂದು, ಸಿಬಿಎಸ್ ನ್ಯೂಸ್ ಅಮೆರಿಕದ ಗಡಿಯ ಬಳಿ ಉತ್ತರ ಮೆಕ್ಸಿಕೋದಲ್ಲಿ ಸಾಮೂಹಿಕ ಸಮಾಧಿಯಲ್ಲಿ 56  ಅನಾಮಿಕ ಶವಗಳು ಪತ್ತೆಯಾಗಿವೆ ಎಂದು ವರದಿ ಮಾಡಿತ್ತು. ಸಮಾಧಿಗಳಲ್ಲಿ ಸಂಪೂರ್ಣ ಅಸ್ಥಿಪಂಜರಗಳು, ಕೆಲವು ದೇಹಗಳು, ಭಾಗಶಃ ಅವಶೇಷಗಳು ಮತ್ತು ಸಂಪೂರ್ಣ ಅಸ್ಥಿಪಂಜರದ ಅವಶೇಷಗಳು ಇವೆ ಎಂದು ವರದಿಯು ತಿಳಿಸಿತ್ತು. ಇದರ ನಡುವೆ, “ಮೆಕ್ಸಿಕೋದಲ್ಲಿ ಇತ್ತೀಚೆಗೆ ಪತ್ತೆಯಾದ ಸಮಾಧಿ” ಎಂದು ಹೇಳಿಕೊಂಡು ಸಾಮೂಹಿಕ ಸಮಾಧಿಯನ್ನು ತೋರಿಸುವ ಚಿತ್ರವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.   ಇದೇ ರೀತಿಯ ಹೇಳಿಕೆಯೊಂದಿಗೆ ಸಾಮಾಜಿಕ…

Read More

FACT CHECK : ರಾಜಸ್ಥಾನದಲ್ಲಿ ರೈಲು ಅಪಘಾತ ಎಂದು ಹೈದರಾಬಾದ್‌ನ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ

ಒಂದೇ ಹಳಿಯಲ್ಲಿ ಎರಡು ರೈಲುಗಳು ಪರಸ್ಪರ ಡಿಕ್ಕಿ ಹೊಡೆದಿರುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.   “ಅಜ್ಮೀರ್‌ನಿಂದ ಅಸ್ಸಾಂಗೆ ಹೊರಟಿದ್ದ ರೈಲು ಜೈಪುರದಲ್ಲಿ ಅಪಘಾತಕ್ಕೀಡಾಗಿದೆ” ಎಂದು ಈ ವಿಡಿಯೋವನ್ನು ಹಂಚಿಕೊಳ್ಳಾಗುತ್ತಿದೆ. ಇನ್‌ಸ್ಟಾಗ್ರಾನ official_sahil_shayar ಹ್ಯಾಂಡಲ್‌ ಮೂಲಕ  ಫೆಬ್ರವರಿ 3 ರಂದು ಜೈಪುರದಲ್ಲಿ ಮತ್ತೊಂದು ಅಪಘಾತ ಸಂಭವಿಸಿದೆ ಎಂದು ಈ ಕ್ಲಿಪ್ ಅನ್ನು ಪೋಸ್ಟ್ ಮಾಡಿದ್ದಾರೆ. “ಇಂದು ಬೆಳಗಿನ ಜಾವ 12 ಗಂಟೆಗೆ ಅಜ್ಮೀರ್‌ನಿಂದ ಅಸ್ಸಾಂಗೆ ಹೋಗುತ್ತಿದ್ದ ರೈಲು ಮಾರ್ಗ‌ ಮಧ್ಯೆ ಮತ್ತೊಂದು ರೈಲಿಗೆ ಡಿಕ್ಕಿ ಹೊಡೆದಿದೆ. ಅವಘಡದಲ್ಲಿ …

Read More

FACT CHECK : ಮಹಾಕುಂಭ ಮೇಳದ ಕಾಲ್ತುಳಿತದಲ್ಲಿ ಮೃತಪಟ್ಟ ಸಂತ್ರಸ್ತರ ಕುಟುಂಬಕ್ಕೆ ವಿರಾಟ್‌ ಕೊಹ್ಲಿ ₹2 ಕೋಟಿ ದೇಣಿಗೆ ನೀಡಿದ್ದಾರೆ ಎಂಬುದು ಸುಳ್ಳು

ಪ್ರಯಾಗ್‌ರಾಜ್‌ನ ಮಹಾಕುಂಭ ಮೇಳದಲ್ಲಾದ ಕಾಲ್ತುಳಿತದಲ್ಲಿ 30 ಜನರು ಬಲಿಯಾಗಿದ್ದು, ಈ ದುರಂತದ ಬಳಿಕ,  ಕ್ರಿಕೆಟಿಗ ವಿರಾಟ್ ಕೊಹ್ಲಿ ಸಂತ್ರಸ್ತರ ಕುಟುಂಬಗಳಿಗೆ ಆರ್ಥಿಕ ನೆರವು ನೀಡಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹಲವಾರು ಪೋಸ್ಟ್‌ಗಳನ್ನು ಹಂಚಿಕೊಳ್ಳಲಾಗುತ್ತಿದೆ. ಇದಕ್ಕೆ ಸಂಬಂಧಿಸಿ, “ವಿರಾಟ್‌ ಕೊಹ್ಲಿ ಮಹಾಕುಂಭ ಮೇಳದಲ್ಲಾದ ಕಾಲ್ತುಳಿತದಲ್ಲಿ  ಮೃತಪಟ್ಟವರಿಗೆ ಮತ್ತು ಗಾಯಗೊಂಡವರ ಕುಟುಂಬಗಳಿಗೆ ₹2 ಕೋಟಿ ದೇಣಿಗೆ ನೀಡಿದ್ದಾರೆ” ಎಂಬ ಹಿಂದಿ ಸಂದೇಶದೊಂದಿಗೆ  ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್‌ವೊಂದನ್ನು ಹರಿಬಿಡಲಾಗಿದೆ. ‌ ಮೇಲಿನ ಪೋಸ್ಟ್ ಅನ್ನು ಇಲ್ಲಿ ನೋಡಬಹುದು( ಆರ್ಕೈವ್ ). ಫ್ಯಾಕ್ಟ್‌ಚೆಕ್‌ ಮಹಾಕುಂಭ ಮೇಳದಲ್ಲಿ…

Read More

FACT CHECK | ಪ್ರಯಾಗರಾಜ್‌ನ ಮಹಾಕುಂಭ ಮೇಳದಲ್ಲಿ ನೆರೆದ ಭಾರೀ ಜನಸಮೂಹ ಎಂದು ಅಯೋಧ್ಯೆಯ ಫೋಟೋ ಹಂಚಿಕೊಳ್ಳಲಾಗುತ್ತಿದೆ

ಪ್ರಯಾಗ್‌ರಾಜ್ ಮಹಾಕುಂಭದಲ್ಲಾದ ಕಾಲ್ತುಳಿತದ ನಂತರ, ಭಾರೀ ಜನಸಂದಣಿ ನೆರೆದಿರುವ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಈ ಚಿತ್ರವನ್ನು ಸಾಮಾಜಿಕ ಜಾಲತಾಣದದಲ್ಲಿ ಬಳಕೆದಾರರು ” ಮಹಾಕುಂಭ ಮೇಳದಲ್ಲಿ ನೆರೆದ ಭಾರೀ ಜನಸಂಣಿ” ಎಂಬ ತಲೆಬರಹದೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ‘ಪಂಡಿತ್_ಪ್ರದೀಪ್‌ಜಿ_ಮಿಶ್ರಾ_ರವರು ವೈರಲ್ ಚಿತ್ರವನ್ನು (ಆರ್ಕೈವ್ ಲಿಂಕ್ ) “ಮಹಾಕುಂಭ ಪ್ರಯಾಗ್‌ರಾಜ್‌” ಎಂದು ಹಂಚಿಕೊಂಡಿದ್ದಾರೆ.  ವಿಭಿನ್ನ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿನ ಇತರ ಅನೇಕ ಬಳಕೆದಾರರು ಈ ಚಿತ್ರವನ್ನು ಇದೇ ರೀತಿಯ ಸಂದೇಶದೊಂದಿಗೆ  ಹಂಚಿಕೊಳ್ಳುತ್ತಿದ್ದು,  ಈ ಚಿತ್ರದ ಸತ್ಯಾಂಶವನ್ನು ಇಲ್ಲಿ ಪರಿಶೀಲಿಸೋಣ.  ಫ್ಯಾಕ್ಟ್‌ಚೆಕ್‌ ವೈರಲ್ ಚಿತ್ರದ…

Read More

“ನಮೋ ಭಾರತ್” ರೈಲು ಡಿಕ್ಕಿ ಹೊಡೆದಿವೆ ಎಂದು ಫ್ರಾನ್ಸ್‌ನಲ್ಲಾದ ʼಟ್ರಾಮ್‌ʼ ಘರ್ಷಣೆಯ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ

ಎರಡು ರೈಲುಗಳು ಪರಸ್ಪರ ಡಿಕ್ಕಿ ಹೊಡೆದಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. “ನಮೋ ಭಾರತ್ ರೈಲುಗಳು ಪರಸ್ಪರ ಡಿಕ್ಕಿ ಹೊಡೆದಿವೆ” ಎಂದು ಈ ವಿಡಿಯೋವನ್ನು ಶೇರ್ ಮಾಡಲಾಗುತ್ತಿದ್ದು, ಇದನ್ನು  ನಿಜವೆಂದು ಭಾವಿಸಿ ಅನೇಕ ಬಳಕೆದಾರರು ವ್ಯಾಪಕವಾಗಿ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ. Instagram ಬಳಕೆದಾರ ranjeetpatel357 ಎಂಬವರು ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದು (ಆರ್ಕೈವ್ ಲಿಂಕ್ ) “ನಮೋ ಭಾರತ್ ಮೆಟ್ರೋ ಪರಸ್ಪರ ಡಿಕ್ಕಿ ಹೊಡೆದು ಜನರಲ್ಲಿ ಭೀತಿಯನ್ನುಂಟು ಮಾಡಿದೆ” ಎಂದು ಬರೆದುಕೊಂಡಿದ್ದಾರೆ. ವಿಡಿಯೋದ ಮೇಲೆ “ದೆಹಲಿ ಮೆಟ್ರೋ ನಮೋ…

Read More