Fact Check | ಪುರೋಹಿತರ ಸಲಹೆಯನ್ನು ಅನುಸರಿಸಿ ರಾಜಸ್ಥಾನದ ಜನರು ಸೌರ ಫಲಕಗಳನ್ನು ಒಡೆದಿದ್ದಾರೆ ಎಂಬುದು ಸುಳ್ಳು

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಒಂದು ವೈರಲಾಗುತ್ತಿದ್ದು, ಇದರಲ್ಲಿ “ಪುರೋಹಿತರು ಸೌರ ಫಲಕಗಳನ್ನು ಬಳಸುವುದು ಸೂರ್ಯ ದೇವರಿಗೆ ಮಾಡುವ ಅವಮಾನ ಎಂದು ಹೇಳಿದ ನಂತರ ರಾಜಸ್ಥಾನದಲ್ಲಿ ಸೌರ ಫಲಕಗಳನ್ನು ಅಳವಡಿಸಿದ್ದ ಪ್ರದೇಶವನ್ನು ಜನಸಾಮಾನ್ಯರು ಧ್ವಂಸ ಮಾಡಿದ್ದಾರೆ. ಆ ಮೂಲಕ ಹಿಂದೂ ಧರ್ಮದ ಆಚರಣೆಗೆ ಧಕ್ಕೆ ತರುವ ಸರ್ಕಾರದ ಷಡ್ಯಂತ್ರವನ್ನು ತಡೆದಿದ್ದಾರೆ” ಎಂಬ ಪೋಸ್ಟ್ ಒಂದು ಸಾಕಷ್ಟು ವೈರಲ್ ಆಗಿದೆ. ವೈರಲ್ ವಿಡಿಯೋದಲ್ಲಿ ಕೂಡ ಪುರುಷರು ಮತ್ತು ಮಹಿಳೆಯರ ಗುಂಪೊಂದು ಸೌರಫಲಕಗಳನ್ನು ದ್ವಂಸ ಮಾಡುತ್ತಿರುವುದು ಕಂಡು ಬಂದಿದೆ. ಈ ವಿಡಿಯೋ…

Read More

Fact Check | ದೆಹಲಿಯಲ್ಲಿ ಬಿಜೆಪಿ ಗೆಲುವಿನ ನಂತರ ಮೊದಲ ಬಾರಿಗೆ ಯಮುನಾ ಆರತಿ ನೆರವೇರಿದೆ ಎಂಬುದು ಸುಳ್ಳು

“ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದ ಬಳಿಕ ಸಾಕಷ್ಟು ಬದಲಾವಣೆಗಳನ್ನು ದೆಹಲಿಯಲ್ಲಿ ಮಾಡುತ್ತಿದೆ. ಈಗ ದೆಹಲಿ ಮರಳಿ ತನ್ನ ಗತವೈಭವವನ್ನು ಪಡೆದುಕೊಳ್ಳುತ್ತಿದೆ. ಈಗ ದೆಹಲಿಯಲ್ಲಿ ಯಮುನಾ ಆರತಿ ಆರಂಭವಾಗಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿಯವರೇ ಬರಬೇಕಾಯಿತು.” ಎಂದು ವಿಡಿಯೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ. ದೆಹಲಿ ಮತ್ತೊಮ್ಮೆ ಇಂದ್ರಪ್ರಸ್ಥದತ್ತ ಸಾಗುತ್ತಿದೆ..‌.❤️ ಕೇಜ್ರಿವಾಲ್ ನನ್ನು ದೂರವಿಟ್ಟು ಇನ್ನು ಒಂದು ವಾರವೂ ಕಳೆದಿಲ್ಲ, ಇಂದು ದೆಹಲಿಯ ಘಾಟ್‌ಗಳಲ್ಲಿ ಯಮುನಾ ಆರತಿ ಪ್ರಾರಂಭವಾಗಿದೆ…💓🙏🚩 pic.twitter.com/bDA7ULn8sW — ಶ್ರೇಯಾ🚩🚩🚩Shreya🌹❤️🇮🇳श्रेया 🚩🚩🚩 (@Shreya_Sanatani) February 13, 2025…

Read More
ದೆಹಲಿ

Fact Check: ದೆಹಲಿಯ ರಸ್ತೆಗಳ ಪರಿಸ್ಥಿತಿ ಎಂದು ಹರಿಯಾಣದ ರಸ್ತೆಯ ವಿಡಿಯೋವನ್ನು ಹಂಚಿಕೊಂಡಿರುವ ಬಿಜೆಪಿ ಐಟಿ ಸೆಲ್

ಇತ್ತೀಚೆಗೆ ಭಾರತೀಯ ಜನತಾ ಪಾರ್ಟಿ ತನ್ನ ಅಧಿಕೃತ ಎಕ್ಸ್‌ ಖಾತೆಯಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ದೆಹಲಿಯ ರಸ್ತೆಗಳ ಸಧ್ಯದ ಪರಿಸ್ಥಿತಿಯನ್ನು ತೋರಿಸುವ ಮೂಲಕ ಅವರವಿಂದ್‌ ಕೇಜ್ರಿವಾಲ್‌ ಅವರ ಸರ್ಕಾರದ ಕಾರ್ಯವೈಖರಿಯನ್ನು ಟೀಕಿಸಿದೆ. ಈ ವಿಡಿಯೋದಲ್ಲಿ ಇಬ್ಬರು ಯುವತಿಯರು ಕುಳಿತಿರುವ ಆಟೋ ನೀರು ತುಂಬಿದ ಗುಂಡಿಬಿದ್ದ ರಸ್ತೆಯಲ್ಲಿ ಸಾಗುವುದನ್ನು ನೋಡಬಹುದು. ಇಬ್ಬರು ಯುವತಿಯರು ರಸ್ತೆಯ ದುರಾವಸ್ಥೆಯ ಕುರಿತು ಬೇಸರ ವ್ಯಕ್ತಪಡಿಸುತ್ತಾರೆ. ನಂತರ ಆಟೋ ಚಾಲಕ ಚುನಾವಣೆ ಹತ್ತು ವರ್ಷಗಳ ಹಿಂದೆಯೇ ನಡೆದಿದೆ. ನೋಡಿ ದಿಲ್ಲಿಯನ್ನು ಯಾವ ಸ್ಥಿತಿಗೆ ತಂದುಬಿಟ್ಟರು…

Read More

FACT CHECK : ದೆಹಲಿ ರಸ್ತೆಯ ಪರಿಸ್ಥಿತಿ ಎಂದು ಎಡಿಟೆಡ್‌ ಚಿತ್ರ ಹಂಚಿಕೊಂಡ ಬಿಜೆಪಿ ಐಟಿ ಸೆಲ್‌ ಮುಖ್ಯಸ್ಥ ಅಮಿತ್‌ ಮಾಳವೀಯ

ದೆಹಲಿಯಲ್ಲಿ ಆಪ್‌ ಸರ್ಕಾರವನ್ನು ಗುರಿಯಾಗಿಸಿ ಹಲವು ಸುಳ್ಳು ಸುದ್ದಿಗಳನ್ನು ಹರಡಿದ ಕುಖ್ಯಾತಿ ಪಡೆದಿರುವ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಮತ್ತೊಮ್ಮ  ಮುಖಭಂಗಕ್ಕೊಳಗಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅಮಿತ್ ಮಾಳವೀಯ  ಹಂಚಿಕೊಂಡಿರುವ ರಸ್ತೆಯ ಫೋಟೋವೊಂದು ಫ್ಯಾಕ್ಟ್‌ಚೆಕರ್‌ ಹಾಗೂ ಆಲ್ಟ್‌ ನ್ಯೂಸ್‌ ಸಹ ಸಂಪಾದಕ ಮುಹಮ್ಮದ್‌ ಝುಬೇರ್‌ ಹಂಚಿಕೊಂಡ ಬಳಿಕ  ವೈರಲ್ ಆಗಿದೆ. ಮುಹಮ್ಮದ್‌ ಝುಬೇರ್‌ ಹಂಚಿಕೊಂಡಿರುವ ಅಮಿತ್‌ ಮಾಳವೀಯ ಹಂಚಿಕೊಂಡಿರುವ ದೆಹಲಿ ಬಿಜೆಪಿ ಪೋಸ್ಟರ್‌ನ ಚಿತ್ರದಲ್ಲಿ ರಸ್ತೆಗಳು ಗುಂಡಿಗಳಿಂದ ತುಂಬಿರುವುದನ್ನು ಗಮನಿಸಿ “ಚೆನ್ನಾಗಿ ಎಡಿಟ್‌ ಮಾಡಿದ್ದೀರಿ@amitmalviya” ಎಂದು…

Read More

Fact Check | ವ್ಯಕ್ತಿಯೊಬ್ಬರು ಕೇಸರಿ ಬಟ್ಟೆ ಹೊದ್ದು ಮಲಗಿದ್ದಕ್ಕಾಗಿ ಮುಸಲ್ಮಾನರು ಥಳಿಸಿದ್ದಾರೆ ಎಂಬುದು ಸುಳ್ಳು

ಸಾಮಾಜಿಕ ಜಾಲತಾಣದಲ್ಲಿ “ಕೇಸರಿ ಬಟ್ಟೆ ಧರಿಸಿ ಮಲಗಿದ್ದ ವ್ಯಕ್ತಿಯ ಮೇಲೆ ಮುಸಲ್ಮಾನ ವ್ಯಕ್ತಿಯೊಬ್ಬ ದೊಣ್ಣೆಯಿಂದ ಮನಬಂದಂತೆ ಥಳಿಸಿದ್ದಾನೆ. ಇದು ದೆಹಲಿಯಲ್ಲಿ ನಡೆದಿರುವ ಘಟನೆ, ಈಗಿನ ದೆಹಲಿ ಮಾಡೆಲ್ ನಗರದಲ್ಲಿ ನಡೆದ ಘಟನೆ ಇದು. ಈ ಬಗ್ಗೆ ಈಗಲೇ ಎಚ್ಚರಿಕೆಯನ್ನು ತೆಗೆದುಕೊಳ್ಳದಿದ್ದರೆ ಮುಂದೆ ದೇಶದ ಹಲವೆಡೆ ಇದೇ ರೀತಿಯ ಘಟನೆ ನಡೆಯುವ ಸಾಧ್ಯತೆ ಇದೆ ಎಂದು ಪೋಸ್ಟ್‌ವೊಂದನ್ನು ಹಂಚಿಕೊಳ್ಳಲಾಗುತ್ತಿದೆ. ವಿಡಿಯೋದಲ್ಲಿ ಕೂಡ ಕೇಸರಿ ಬಟ್ಟೆ ಹೊದ್ದು ಮಲಗಿರುವ ವ್ಯಕ್ತಿಯನ್ನು ವ್ಯಕ್ತಿಯೊಬ್ಬ ಥಳಿಸುತ್ತಿರುವುದು ಸ್ಪಷ್ಟವಾಗಿ ಕಂಡುಬಂದಿದೆ. ಹೀಗಾಗಿ ವೈರಲ್ ವಿಡಿಯೋವನ್ನು…

Read More

Fact Check | ಉತ್ತರಪ್ರದೇಶದಲ್ಲಿ ಮಹಿಳಾ ಕಾನ್ಸ್‌ಟೇಬಲ್‌ ಮೇಲಿನ ಹಲ್ಲೆ ವಿಡಿಯೋವನ್ನು ಕೋಮು ನಿರೂಪಣೆಯೊಂದಿಗೆ ಹಂಚಿಕೆ

ಮಹಿಳೆಯೊಬ್ಬರಿಗೆ ಥಳಿಸಿರುವ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದು ಸಿಸಿಟಿವಿ ಕ್ಯಾಮೆರಾದ ರೆಕಾರ್ಡಿಂಗ್‌ನಂತೆ ಕಂಡುಬಂದಿದ್ದು, ಇದರಲ್ಲಿ ಬೈಕಿನಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯನ್ನು ತಡೆದು ಜಗಳವಾಡುತ್ತಾನೆ. ನಂತರ ಅವಳನ್ನು ಥಳಿಸಲು ಪ್ರಾರಂಭಿಸಿದ್ದಾನೆ. ಸುಮಾರು ಎರಡೂವರೆ ನಿಮಿಷದ ಈ ವಿಡಿಯೋದಲ್ಲಿ ಅನೇಕರು ಮಾತನಾಡುತ್ತಿರುವುದು ಕಾಣಬಹುದಾಗಿದೆ. ಈ ವಿಡಿಯೋವನ್ನು ಹಂಚಿಕೊಂಡ ಹಲವರು ಹಲ್ಲೆ ಮಾಡಿರುವ ವ್ಯಕ್ತಿ ಮುಸ್ಲಿಂ ಮತ್ತು ಹಲ್ಲೆಗೊಳಗಾಗಿರುವ ಮಹಿಳೆ ಹಿಂದೂ ಎಂದು ಕೋಮು ನಿರೂಪಣೆಯೊಂದಿಗೆ ಶೇರ್ ಮಾಡುತ್ತಿದ್ದಾರೆ. ವೈರಲ್ ವಿಡಿಯೋವನ್ನು ನೋಡಿದ ಹಲವು…

Read More

Fact Check | ಎಂ.ಎಸ್‌.ಧೋನಿ 3D ಮಾಡೆಲ್ ಅನ್ನು ಚಾಣಕ್ಯನದ್ದು ಎಂದು ಹಂಚಿಕೆ

ಸಾಮಾಜಿಕ ಮಾಧ್ಯಮದಲ್ಲಿ ಚಿತ್ರವೊಂದು ವೈರಲ್ ಆಗುತ್ತಿದ್ದು, ಇದರಲ್ಲಿ  3ಡಿ ಮುಖದ ಮಾದರಿಯನ್ನು ನೋಡಬಹುದಾಗಿದೆ. ಈ ಫೋಟೋವನ್ನು ಹಂಚಿಕೊಳ್ಳುವಾಗ, ಮಗಧ್ ಡಿಎಸ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಭಾರತೀಯ ಶಿಕ್ಷಕ ಮತ್ತು ತತ್ವಜ್ಞಾನಿ ಚಾಣಕ್ಯನ 3D ಮಾದರಿಯನ್ನು ರಚಿಸಿದ್ದಾರೆ ಮತ್ತು ಅವರು ಕ್ರಿಕೆಟಿಗ ಎಂಎಸ್ ಧೋನಿಯಂತೆ ಕಾಣುತ್ತಿದ್ದಾರೆ ಎಂದು ಹಲವರು ಬರೆದುಕೊಂಡಿದ್ದಾರೆ. ಇನ್ನೂ ಕೆಲವರು ಚಾಣಕ್ಯನ ನಿಜವಾದ ಮುಖವನ್ನು ಈ 3D ಪೂರ್ಣಗೊಂಡ ಮೇಲೆ ನೋಡಬಹುದಾಗಿದೆ ಎಂದು ಕೂಡ ಶೇರ್‌ ಮಾಡುತ್ತಿದ್ದಾರೆ. Scientists at Magadha DS University have reconstructed…

Read More

Fact Check: ಪ್ರಿಯಾಂಕಾ ಗಾಂಧಿ ನಾಮಪತ್ರ ಸಲ್ಲಿಕೆ ವೇಳೆ ಮಲ್ಲಿಕಾರ್ಜುನ್‌ ಖರ್ಗೆ ಅವರನ್ನು ಅವಮಾನಿಸಲಾಗಿದೆ ಎಂದು ಸುಳ್ಳು ಹಂಚಿಕೊಂಡ ಬಿಜೆಪಿ ನಾಯಕರು

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಬುಧವಾರ ವಯನಾಡು ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ನಾಮಪತ್ರ ಸಲ್ಲಿಸಿದ್ದು, ಕಲ್ಪೆಟ್ಟಾ ಪಟ್ಟಣದ ಮೂಲಕ ಬೃಹತ್ ರೋಡ್ ಶೋ ನಡೆಸಿ ವಯನಾಡು ಕ್ಷೇತ್ರದ ಮತದಾರರ ಬೆಂಬಲಕ್ಕೆ ಸದಾ ಇರುವೆ ಎಂದು ಭರವಸೆ ನೀಡಿದ್ದಾರೆ. ಆದರೆ, ಈ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಆರೋಪವೊಂದು ಕೇಳಿ ಬಂದಿದ್ದು, ನಾಮಪತ್ರ ಸಲ್ಲಿಕೆ ವೇಳೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರನ್ನು  ಒಳಗೆ ಕರೆದುಕೊಂಡು ಹೋಗದೇ ಬಾಗಿಲಿನಲ್ಲಿಯೇ ನಿಲ್ಲಿಸಿ ಅವಮಾನಿಸಲಾಗಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ….

Read More

Fact Check | ಹಸುಗಳು ಆಮ್ಲಜನಕವನ್ನು ಉಸಿರಾಡಿ ಆಮ್ಲಜನಕವನ್ನೇ ಹೊರಹಾಕುತ್ತವೆ ಎಂದು ಸುಳ್ಳು ಹೇಳಿದ ಬಿಜೆಪಿ ಸಚಿವೆ

ಉತ್ತರಾಖಂಡ ವಿಧಾನಸಭೆಯು ಹಸುವಿಗೆ ” ರಾಷ್ಟ್ರ ಮಾತ” (ರಾಷ್ಟ್ರದ ಮಾತೆ) ಸ್ಥಾನಮಾನವನ್ನು ಕೋರಿ ಬುಧವಾರ ನಿರ್ಣಯವನ್ನು ಅಂಗೀಕರಿಸಿದೆ. ಈ ನಿರ್ಣಯವನ್ನು ಕೇಂದ್ರಕ್ಕೆ ಕಳುಹಿಸಲಾಗಿದ್ದು. ಇದನ್ನು ಉತ್ತರಾಖಂಡ ರಾಜ್ಯ ಪಶುಸಂಗೋಪನಾ ಸಚಿವೆ ರೇಖಾ ಆರ್ಯ ಅವರು ಮಂಡಿಸಿದ್ದಾರೆ. ಇನ್ನು ಇದಕ್ಕೆ ಪ್ರತಿಪಕ್ಷಗಳು ಬೆಂಬಲವನ್ನು ಘೋಷಿಸಿದ ನಂತರ ಅವಿರೋಧವಾಗಿ ಈ ನಿರ್ಣಯವನ್ನು ವಿಧಾನಸಭೆಯಲ್ಲಿ ಅಂಗೀಕರಿಸಲಾಗಿದೆ. ಈ ನಡುವೆ ರೇಖಾ ಆರ್ಯ ಹಸುಗಳು ಆಮ್ಲಜನಕವನ್ನು ಉಸಿರಾಡಿ, ಆಮ್ಲಜನಕವನ್ನು ಮಾತ್ರ ಹೊರ ಹಾಕುತ್ತವೆ ಎಂಬ ಹೇಳಿಕೆ ನೀಡಿದ್ದಾರೆ. ಇದು ಬಹುದೊಡ್ಡ ಚರ್ಚೆಗೆ ಕಾರಣವಾಗಿದೆ …

Read More

Fact Check | ರಾಜಸ್ತಾನದಲ್ಲಿ RSS ಕಾರ್ಯಕರ್ತನ ಮೇಲೆ ಮುಸ್ಲಿಮರಿಂದ ಹಲ್ಲೆ ಎಂಬುದು ಸುಳ್ಳು

“ಅಕ್ಟೋಬರ್ 17 ರಂದು ರಾಜಸ್ತಾನದ ಜೈಪುರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತನೊಬ್ಬ ಅನ್ಯಕೋಮಿನ ಪುರುಷರ ಗುಂಪು ನಡೆಸಿದ ದಾಳಿಗೆ ತೀವ್ರವಾಗಿ ಗಾಯಗೊಂಡಿದ್ದಾನೆ. ಈ ದಾಳಿಯ ಉದ್ದೇಶ ಬಹಳ ಸ್ಪಷ್ಟ ಮುಸ್ಲಿಂ ಬಾಹುಲ್ಯವುಳ್ಳ ಪ್ರದೇಶದಲ್ಲಿ ಹಿಂದೂಗಳು ಯಾವುದೇ ಕಾರ್ಯಕ್ರಮವನ್ನು ನಡೆಸಬಾರದು,  ಅಷ್ಟಕ್ಕೂ ಆ ದಿನ ಶರದ್ ಪೂರ್ಣಿಮೆಯ ಆಚರಣೆಯಲ್ಲಿ ಪ್ರಸಾದವಾಗಿ ಖೀರ್ ವಿತರಿಸುತ್ತಿದ್ದಾಗ ದಾಳಿಕೋರರಲ್ಲಿ ಒಬ್ಬನಾದ ನಸೀಬ್ ದೇವಾಲಯವನ್ನು ಪ್ರವೇಶಿಸಿದ್ದಾನೆ ಇವನ ಜೊತೆ ಬಂದ ಅವನ ಕೋಮಿನ ಪುರುಷರು ದಾಳಿ ನಡೆಸಿದ್ದಾರೆ” ಎಂದು ಪೋಸ್ಟ್‌ ಅನ್ನು ಹಂಚಿಕೊಳ್ಳಲಾಗುತ್ತಿದೆ. Rajasthan:…

Read More