Fact Check | ಶ್ರೀರಾಮನ ಚಿತ್ರವಿರುವ ರೈಲಿನ ಫೋಟೋವನ್ನು AI ಬಳಸಿ ಸೃಷ್ಟಿಸಲಾಗಿದೆ

ಸಾಮಾಜಿಕ ಜಾಲತಾಣಗಳಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಟ್ರೈನ್‌ನ ಎಂಜಿನ್‌ನ ಮೇಲೆ ಶ್ರೀ ರಾಮನ ಚಿತ್ರವಿರುವ ಫೋಟೋವೊಂದು ವೈರಲ್‌ ಆಗಿದೆ. ಈ ಚಿತ್ರವನ್ನು ಶೇರ್‌ ಮಾಡಿರುವ ಕೆಲವು ಬಳಕೆದಾರರು ಇದು ವಂದೇ ಭಾರತ್ ಟ್ರೈನ್‌ನ ಹೊಸ ವಿನ್ಯಾಸವೆಂದು ಹೇಳಿಕೊಂಡಿದ್ದಾರೆ. ಫೇಸ್‌ಬುಕ್‌ನಲ್ಲಿ ಒಬ್ಬ ಬಳಕೆದಾರರು ಈ ಚಿತ್ರವನ್ನು “ವಂದೇ ಭಾರತ್ ಟ್ರೈನ್‌ನ ಮೇಲೆ ಶ್ರೀ ರಾಮ ಜಯ ಶ್ರೀ ರಾಮ” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ ಸಾವಿರಾರು ಜನರ ಗಮನ ಸೆಳೆದಿದ್ದು, ಇದು ಭಾರತೀಯ ರೈಲ್ವೆಯ ಒಂದು ಧಾರ್ಮಿಕ…

Read More

Fact Check | ರೈಲಿನಲ್ಲಿ ಕಳ್ಳತನ ಮಾಡಲು ಖರ್ಜೂರದಲ್ಲಿ ನಿದ್ರೆ ಮಾತ್ರೆ ಬೆರಸಿದ ವಿಡಿಯೋವನ್ನು ಕೋಮು ಆಯಾಮದೊಂದಿಗೆ ಹಂಚಿಕೊಳ್ಳಲಾಗುತ್ತಿದೆ

ಸಾಮಾಜಿಕ ಜಾಲತಾಣದಲ್ಲಿ ” ಈ ಮುಸ್ಲಿಂ ಹಲ್ಕಾ ಭೇವಾರ್ಷಿಗಳು ಮಾರಕ ರೋಗ ಬರಲು ಮತ್ತು ಮಕ್ಕಳಾಗದಂತೆ ಖರ್ಜುರದಲ್ಲಿ ಮಾತ್ರೆಗಳನ್ನು ಇಟ್ಟು ಹಿಂದೂಗಳಿಗೆ ಮಾರಾಟ ಮಾಡುತ್ತಿದ್ದವರನ್ನು ಪೊಲೀಸ್ ರವರು ಬಂಧಿಸಿದ್ದಾರೆ..ಇನ್ನಾದರೂ ಎಚೆತ್ತುಕೊಳ್ಳಿ ಈ ರಕ್ಕಸ ಸಮಾಜ ಇಡೀ ಹಿಂದೂ ಮನುಕುಲಕ್ಕೆ ಮಾರಕ ವೆಂಬುದನ್ನು ತಿಳಿಯಿರಿ.” ಎಂದು ಕೋಮು ದ್ವೇಷದೊಂದಿಗೆ ಬರೆದುಕೊಂಡು ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಮತ್ತೊಂದು ಕಡೆ “ಆತ್ಮೀಯ ಸ್ನೇಹಿತರೇ ರಂಜಾನ್ ಶೀಘ್ರದಲ್ಲೇ ಬರಲಿದೆ, ರೈಲ್ವೆ ನಿಲ್ದಾಣಗಳ ಯಾವುದೇ ಮಾರಾಟಗಾರರಿಂದ ಖರ್ಜೂರವನ್ನು ತೆಗೆದುಕೊಳ್ಳಬೇಡಿ ಮತ್ತು ಅಪರಿಚಿತರು ಎಲ್ಲರಿಗೂ ಹಂಚಿಕೊಳ್ಳಿ,…

Read More

Fact Check | ಭಾರತ ರೈಲಿನ ಮೂಲಕ ಬಾಂಗ್ಲಾದೇಶದ ಗಡಿಯ ಬಳಿ ಯುದ್ಧ ಟ್ಯಾಂಕರ್‌ಗಳನ್ನು ರವಾನಿಸಿದೆ ಎಂಬುದು ಸುಳ್ಳು

ಬಾಂಗ್ಲಾದೇಶದಾದ್ಯಂತ ಅಲ್ಪಸಂಖ್ಯಾತರ ಮೇಲಿನ ದಾಳಿ ಹೆಚ್ಚಾಗುತ್ತಿರುವ ಕಾರಣ ಮತ್ತು ಹಿಂಸಾಚಾರ ಪ್ರಕರಣವು ಪ್ರತಿನಿತ್ಯವು ದಾಖಲಾಗುತ್ತಿರುವುದರಿಂದ ಭಾರತದ ಭದ್ರತೆಗೆ ಕೂಡ ಅಪಾಯವನ್ನು ತಂದೊಡ್ಡುತ್ತಿದೆ. ಈ ಹಿನ್ನೆಲೆಯಲ್ಲಿ ಡಿಸೆಂಬರ್ 2ರಂದು ಬಾಂಗ್ಲಾದೇಶದ ಗಡಿಯ ಬಳಿ ಭಾರತೀಯ ಸೇನೆಯು ರೈಲುಗಳ ಮೂಲಕ ಯುದ್ಧ ಟ್ಯಾಂಕರ್‌ಗಳನ್ನು ರವಾನಿಸಿ ಗಡಿಯಲ್ಲಿ ನಿಯೋಜಿಸಿದೆ ಎಂದು ವಿಡಿಯೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋದಲ್ಲಿ ರೈಲಿನಲ್ಲಿ ಯುದ್ಧ ಟ್ಯಾಂಕರ್‌ಗಳನ್ನು ರವಾನಿಸುತ್ತಿರುವುದು ಕಂಡುಬಂದಿದೆ. ಹೀಗಾಗಿ ವೈರಲ್ ಪೋಸ್ಟ್ ನಿಜವೆಂದು ಭಾವಿಸಿ, ಹಲವರು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಭಾರತ ಈಗ ಬಾಂಗ್ಲಾದೇಶದೊಂದಿಗೆ…

Read More

Fact Check | ಷಡ್ಯಂತ್ರದಿಂದ ರೈಲು ದುರಂತ ಎಂದು ಸುಳ್ಳು ಹೇಳಿ ಸಿಕ್ಕಿಬಿದ್ದ ಚಕ್ರವರ್ತಿ ಸೂಲಿಬೆಲೆ

“ಹೆರೋದ್ ಹೆರ್ತಾರೆ. ಇಂತಹ ಅಸಹ್ಯಗಳನ್ನೇ ಹೆರ್ತಾರಲ್ಲ ಇವರು?! ರೈಲು ದುರಂತ ಸುಮ್ ಸುಮ್ನೆ ಆಗ್ತಿರೋದಲ್ಲ, ವ್ಯವಸ್ಥಿತ ಷಡ್ಯಂತ್ರ.” ಎಂದು ವಿಡಿಯೋವೊಂದನ್ನು ಚಕ್ರವರ್ತಿ ಸೂಲಿಬೆಲೆ ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ “ಹೆರೋದ್ ಹೆರ್ತಾರೆ. ಇಂತಹ ಅಸಹ್ಯಗಳನ್ನೇ ಹೆರ್ತಾರಲ್ಲ ಇವರು?!” ಎಂದು ಮುಸಲ್ಮಾನ ತಾಯಂದಿರನ್ನು ನಿಂದಿಸಿದ್ದು, ಇದರ ಮುಂದುವರೆದ ಸಾಲಿನಲ್ಲಿ “ರೈಲು ದುರಂತ ಸುಮ್ ಸುಮ್ನೆ ಆಗ್ತಿರೋದಲ್ಲ, ವ್ಯವಸ್ಥಿತ ಷಡ್ಯಂತ್ರ.” ಎಂದು ಇತ್ತೀಚೆಗೆ ಭಾರತದಲ್ಲಿ ಹೆಚ್ಚಾಗುತ್ತಿರುವ ರೈಲು ದುರಂತಕ್ಕೆ ಮುಸಲ್ಮಾನರೇ ಕಾರಣ ಎಂಬುದನ್ನು ಪರೋಕ್ಷವಾಗಿ ಚಕ್ರವರ್ತಿ ಸೂಲಿಬೇಲೆ…

Read More

Fact Check| ರೈಲ್ವೆ ಹಳಿಗಳಲ್ಲಿ ಮುಸ್ಲಿಮ್ ಹುಡುಗರು ಕಳ್ಳತನ ಮಾಡುತ್ತಿದ್ದಾರೆ ಎಂದು ಸುರೇಶ್ ಚವ್ಹಾಂಕೆ ಹಂಚಿಕೊಂಡ ವಿಡಿಯೋ ಪಾಕಿಸ್ತಾನದ್ದು!

ಮುಸ್ಲಿಮ್ ಸಮುದಾಯವನ್ನು ಗುರಿಯಾಗಿಸಿ ಸದಾ ದ್ವೇಷ ಹರಡಲು ಯತ್ನಿಸುವ ಸುದರ್ಶನ್ ಟಿವಿ ಸಂಸ್ಥಾಪಕ ಸುರೇಶ್ ಚವ್ಹಾಂಕೆ ಮತ್ತೊಮ್ಮೆ ಅಂತಹುದ್ದೇ ವಿಡಿಯೋವೊಂದನ್ನು ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಜನರಿಂದ ಮತ್ತೊಮ್ಮೆ ಪಾಠ ಹೇಳಿಸಿಕೊಂಡಿದ್ದಾರೆ. ಚಿಕ್ಕ ಹುಡುಗರು ರೈಲು ಹಳಿಯನ್ನು ಧ್ವಂಸಗೊಳಿಸುವ/ ಕಳ್ಳತನ ಮಾಡಲು ಯತ್ನಿಸುತ್ತಿರುವ ವಿಡಿಯೋ ಹಂಚಿಕೊಂಡಿರುವ ಚವ್ಹಾಂಕೆ, “ಈ ವಯಸ್ಸಿನಲ್ಲಿ ಇವರು ರೈಲ್ವೆ ಹಳಿಗಳನ್ನು ಅಗೆಯುತ್ತಿದ್ದಾರೆ. ಮುಂದಿನ 50 ವರ್ಷಗಳಲ್ಲಿ ಇವರು ಏನು ಮಾಡಬಹುದೆಂದು ಯೋಚಿಸಿ. ಡಾ.ಬಾಬಾಸಾಹೇಬ್ ಅಂಬೇಡ್ಕರ್ ಇವರ ಬಗ್ಗೆ ಏನು ಹೇಳಿದ್ದಾರೆ ಎಂಬುದನ್ನು…

Read More

Fact Check | IRCTC ಯ ಹೊಸ ನಿಯಮದ ಪ್ರಕಾರ ಉಪನಾಮ ಹೊಂದಿರದ ಕುಟುಂಬ ಸದಸ್ಯರಿಗೆ ಟಿಕೆಟ್‌ ಬುಕ್‌ ಮಾಡಲಾಗುವುದಿಲ್ಲ ಎಂಬುದು ಸುಳ್ಳು

IRCTC ಯಿಂದ ಹೊಸ ಬುಕಿಂಗ್ ನಿಯಮದ ಕುರಿತು ಸಾಮಾಜಿಕ ಜಾಲತಾಣದಲ್ಲಿನ ಸುದ್ದಿಯೊಂದು ಹರಿದಾಡುತ್ತಿದೆ. ಅದರ ಪ್ರಕಾರ “ಸಾರ್ವಜನಿಕರು ವೈಯಕ್ತಿಕ IRCTC ಖಾತೆಯನ್ನು ಬಳಸಿಕೊಂಡು, ರಕ್ತ ಸಂಬಂಧಿಗಳಿಗೆ ಅಥವಾ ಅದೇ ಉಪನಾಮ ಹೊಂದಿರುವವರಿಗೆ ಮಾತ್ರ ಟಿಕೆಟ್‌ಗಳನ್ನು ಬುಕ್ ಮಾಡಬಹುದು. ಸ್ನೇಹಿತರು ಅಥವಾ ಇತರರಿಗಾಗಿ ಟಿಕೆಟ್‌ಗಳನ್ನು ಕಾಯ್ದಿರಿಸುವುದರಿಂದ 10,000 ರೂ.ಗಳ ಭಾರಿ ದಂಡ, 3 ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ಎರಡಕ್ಕೂ ಕಾರಣವಾಗಬಹುದು.” ಎಂದು ಹಂಚಿಕೊಳ್ಳಲಾಗುತ್ತಿದೆ. New IRCTC Rule: Booking Train Tickets for Friends Could Cost…

Read More