FACT CHECK : ಬೈಕ್ನಲ್ಲಿ ಬಾಲಕನ ಶವವನ್ನು ಹೊತ್ತೊಯ್ಯುವ ವಿಡಿಯೋವಿಗೂ ತಿರುಪತಿ ಕಾಳ್ತುಳಿತಕ್ಕೂ ಯಾವುದೇ ಸಂಬಂಧವಿಲ್ಲ
ಆಂಧ್ರ ಪ್ರದೇಶದ ತಿರುಪತಿ ತಿರುಮಲ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಬುಧವಾರ ರಾತ್ರಿ ಸಂಭವಿಸಿದ ಕಾಲ್ತುಳಿತದಲ್ಲಿ 7 ಮಂದಿ ಮೃತಪಟ್ಟಿದ್ದಾಗಿ ವರದಿಯಾಗಿವೆ. ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ಸಂಬಂಧವಿಲ್ಲದ ವಿಡಿಯೋ ಫೋಟೋಗಳನ್ನು ಬಳಸಿಕೊಂಡು ಸುಳ್ಳು ಸುದ್ದಿಗಳನ್ನು ಹರಿಬಿಡುತ್ತಿರುವುದು ಕಂಡು ಬರುತ್ತಿದೆ. ತಂದೆಯೊಬ್ಬ ಆಸ್ಪತ್ರೆಯಿಂದ ಮಗುವಿನ ಮೃತದೇಹವನ್ನು ಬೈಕ್ನಲ್ಲಿ ಹೊತ್ತೊಯ್ಯುವ 43 ಸೆಕೆಂಡ್ಗಳ ಹೃದಯವಿದ್ರಾವಕ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈ ವಿಡಿಯೋವನ್ನು ದೇವಸ್ಥಾನದಲ್ಲಿ ಬುಧವಾರ ರಾತ್ರಿ ಸಂಭವಿಸಿದ ಕಾಲ್ತುಳಿತದೊಂದಿಗೆ ತಳುಕು ಹಾಕಿ ಹಂಚಿಕೊಳ್ಳುತ್ತಿರುವುದು ಕಂಡುಬಂದಿದೆ. ಬಳಕೆದಾರರು “ಒಬ್ಬ ತಂದೆಗೆ…