Fact check | ಯೋಗಿ ಆದಿತ್ಯನಾಥ್ ವಿರುದ್ಧ ಯೇತಿ ನರಸಿಂಹಾನಂದರು ಟೀಕಿಸಿರುವ ಹಳೆಯ ವಿಡಿಯೋ ಮತ್ತೆ ವೈರಲ್
“ಯುಪಿಯ ಗಾಜಿಯಾಬಾದ್ನಲ್ಲಿರುವ ದಸ್ನಾದೇವಿ ದೇವಸ್ಥಾನದ ಮಹಂತ್ ಯತಿ ನರಸಿಂಹಾನಂದ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅವರ ಈ ಆಕ್ರೋಶಕ್ಕೂ ಕಾರಣವಿದೆ. ಹಿಂದೂ ರಕ್ಷಣಾ ದಳದ ಅಧ್ಯಕ್ಷ ಭೂಪೇಂದ್ರ ತೋಮರ್ ಅಲಿಯಾಸ್ ಪಿಂಕಿ ಚೌಧರಿ ವಿರುದ್ಧ ಗೂಂಡಾ ಕಾಯ್ದೆ ವಿರುದ್ಧ ಗಾಜಿಯಾಬಾದ್ನ ಡಿಎಂ ಕಚೇರಿಯಲ್ಲಿ ಪ್ರತಿಭಟನೆ ನಡೆಸಲಾಯಿತು. ಇಲ್ಲಿ ಪಿಂಕಿ ಚೌಧರಿ ಅವರನ್ನು ಬೆಂಬಲಿಸಲು ದಸ್ನಾದೇವಿ ದೇವಸ್ಥಾನದಿಂದ ಡಿಎಂ ಕಚೇರಿಗೆ ಹೋಗುತ್ತಿದ್ದ ಮಹಾಮಂಡಲೇಶ್ವರ ಯತಿ ನರಸಿಂಹಾನಂದ ಗಿರಿ ಅವರನ್ನು ಪೊಲೀಸರು…