Fact Check | ಕರ್ನಾಟಕ ಹೈಕೋರ್ಟ್ ಟಿಪ್ಪು ಸುಲ್ತಾನ್‌ನನ್ನು ‘ಜಿಹಾದಿ’ ಎಂದು ಘೋಷಿಸಿದೆ ಎಂಬುದು ಸುಳ್ಳು

ಸಾಮಾಜಿಕ ಜಾಲತಾಣಗಳಲ್ಲಿ, ವಿಶೇಷವಾಗಿ ಎಕ್ಸ್‌ನಲ್ಲಿ, ಕರ್ನಾಟಕ ಹೈಕೋರ್ಟ್ ಟಿಪ್ಪು ಸುಲ್ತಾನ್‌ ಅನ್ನು ‘ಜಿಹಾದಿ’ ಎಂದು ಘೋಷಿಸಿದೆ ಎಂಬ ಸುದ್ದಿಯೊಂದು ವೈರಲ್‌ ಆಗಿದೆ. ಈ ಸುದ್ದಿಯು ಟಿಪ್ಪುಸುಲ್ತಾನ್ ಸ್ವಾತಂತ್ರ್ಯ ಹೋರಾಟಗಾರರಲ್ಲ, ಬದಲಿಗೆ ತನ್ನ ಸಾಮ್ರಾಜ್ಯವನ್ನು ಉಳಿಸಿಕೊಳ್ಳಲು ಬ್ರಿಟಿಷರ ವಿರುದ್ಧ ಹೋರಾಡಿದ ‘ಜಿಹಾದಿ’ ಎಂದು ಕರ್ನಾಟಕ ಹೈಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ಸುಭ್ರೊ ಕಮಲ್ ಮುಖರ್ಜಿ ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವೈರಲ್‌ ಪೋಸ್ಟ್‌ನಲ್ಲಿ ಟಿಪ್ಪು ಸುಲ್ತಾನ್ ಹಿಂದೂಗಳ ಮೇಲೆ ದೌರ್ಜನ್ಯ, ಕೊಲೆ ಮತ್ತು ಮತಾಂತರಕ್ಕೆ ದೂಡಿದ ಎಂಬ ಆರೋಪಗಳನ್ನು…

Read More

Fact Check | ಉರ್ದು ಭಾಷೆಗೆ ಮಾತ್ರ ಕರ್ನಾಟಕ ಸರ್ಕಾರ 100 ಕೋಟಿ ರೂ. ಮೀಸಲಿಟ್ಟಿದೆ ಎಂಬುದು ಸುಳ್ಳು

ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಸೇರಿದಂತೆ ವಿವಿಧ ಬಲಪಂಥೀಯ ಬೆಂಬಲಿಗರು ಪೋಸ್ಟ್ ಒಂದನ್ನು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಇದರಲ್ಲಿ ಕರ್ನಾಟಕ ಸರ್ಕಾರ 2025-26ರ ಬಜೆಟ್‌ನಲ್ಲಿ ಭಾಷೆಯ ಅಭಿವೃದ್ಧಿಗಾಗಿ ಅನುದಾನ ಬಿಡುಗಡೆ ಮಾಡಿರುವ ಲೆಕ್ಕವನ್ನು ಉಲ್ಲೇಖಿಸಲಾಗಿದೆ. ಇದರ ಪ್ರಕಾರ ಉರ್ದು ಭಾಷೆಗೆ 100 ಕೋಟಿ ಅನುದಾನ ನೀಡಲಾಗಿದ್ದು, ಉಳಿದ ಇತರೆ ಭಾಷೆಗಳಿಗೆ ಕೇವಲ 32 ಕೋಟಿ ರೂಪಾಯಿ ಅನುದಾನವನ್ನು ನೀಡಲಾಗಿದೆ ಎಂದು ತಿಳಿಸಲಾಗಿದೆ. ಇದನ್ನು ನೋಡಿದ ಹಲವು ಮಂದಿ ನಿಜವೆಂದು ಭಾವಿಸಿದ್ದಾರೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಉರ್ದು ಪ್ರಿಯ ಸಿದ್ದರಾಮಯ್ಯ…

Read More

Fact Check | ಕೇರಳದಲ್ಲಿ ನಡೆದ ಅಪಘಾತದ ವಿಡಿಯೋವನ್ನು ಕೋಮು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ

ಕಾರು ಅಪಘಾತದ ವೀಡಿಯೊ ಕ್ಲಿಪ್ ಅನ್ನು ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ, ಇದರಲ್ಲಿ ಮಗುವಿನೊಂದಿಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆಯೊಬ್ಬರಿಗೆ ಕಾರು ಡಿಕ್ಕಿ ಹೊಡೆಯುವುದನ್ನು ಕಾಣಬಹುದು. ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಳ್ಳುತ್ತಿದ್ದಾರೆ ಮತ್ತು ಕಾರು ಚಾಲಕ ಮಹಿಳೆ ಬುರ್ಖಾ ಧರಿಸಿದ್ದಕ್ಕಾಗಿ ಅಪಘಾತ ಮಾಡಿದ್ದಾನೆ, ಕೇರಳದಲ್ಲಿ ಈಗ ಮುಸ್ಲಿಂ ವಿರೋಧಿ ಮನಸ್ಥಿತಿ ಆರಂಭವಾಗುತ್ತಿದೆ ಎಂದು ಹಲವರು ಮಂದಿ ಪೋಸ್ಟ್‌ ಮಾಡುತ್ತಿದ್ದಾರೆ. ವೈರಲ್‌ ವಿಡಿಯೋದಲ್ಲಿ ಭೀಕರ ಅಪಘಾತವಾಗುವ ದೃಶ್ಯಗಳು ಕಂಡು ಬಂದಿದ್ದು, ಇದನ್ನು ನೋಡಿದ ಹಲವು ಮಂದಿ ಪೋಸ್ಟ್‌ ಅನ್ನು…

Read More

Fact Check | ಕನ್ನಡಿಗನ ಮೇಲೆ ಹಲ್ಲೆ ನಡೆಸಿ ಸುಳ್ಳು ಕತೆ ಕಟ್ಟಿದ ವಿಂಗ್‌ ಕಮಾಂಡರ್‌ ವಿರುದ್ಧ FIR ದಾಖಲು

ನನ್ನ ಮೇಲೆ ಹಲ್ಲೆಯಾಗಿದೆ, ಕನ್ನಡ ಭಾಷೆಯ ಕಾರಣಕ್ಕೆ ನನ್ನ ಮೇಲೆ ಹಲ್ಲೆಯಾಗಿದೆ. ಡಿಆರ್‌ಡಿಒ ಸ್ಟಿಕರ್ ನೋಡಿ ಹಲ್ಲೆ ಮಾಡಿದ್ದಾರೆ. ಇದು ಕರ್ನಾಟಕದ ಪರಿಸ್ಥಿತಿ ಎಂದು ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ಎಂಬಾತ ವಿಡಿಯೋ ಮೂಲಕ ಹೇಳಿಕೆ ನೀಡಿದ್ದ. ಈ ವೇಳೆ ಆತನ ಹಣೆಯಿಂದ ರಕ್ತ ಸೋರುತ್ತಿತ್ತು. ಇದನ್ನು ನೋಡಿದ ಹಲವು ಮಂದಿ, ಕರ್ನಾಟಕದ ಬಗ್ಗೆ, ಕನ್ನಡಿಗರ ಬಗ್ಗೆ ನಕಾರಾತ್ಮಕವಾಗಿ, ಆಕ್ರೋಶಭರಿತವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದರು. ಅದರಲ್ಲೂ ಕನ್ನಡಿಗರನ್ನು ಕಂಡು ಸದಾ ಕಾಲ ಉರಿದು ಬೀಳುತ್ತಿದ್ದ ಹಿಂದಿ…

Read More

Fact Check | ಪಶ್ಚಿಮ ಬಂಗಾಳದಲ್ಲಿ ಹಿಂದೂಗಳನ್ನು ಕೊಲ್ಲಲಾಗುತ್ತಿದೆ ಎಂದು ಮಧ್ಯ ಪ್ರದೇಶದ ವೀಡಿಯೊ ಹಂಚಿಕೆ

ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ, ಇದರಲ್ಲಿ ಒಂದು ಗುಂಪು ಮನೆಯೊಂದರ ಮೇಲೆ ದಾಳಿ ಮಾಡುತ್ತಿರುವುದು ಕಂಡು ಬಂದಿದೆ. ಈ ವೀಡಿಯೊ ಪಶ್ಚಿಮ ಬಂಗಾಳದ್ದು ಎಂದು ಅನೇಕ ಬಳಕೆದಾರರು ಹಂಚಿಕೊಳ್ಳುತ್ತಿದ್ದು, ಹಿಂದೂಗಳ ಮನೆಗಳು- ಅಂಗಡಿಗಳನ್ನು ಮುಸಲ್ಮಾನರು ಲೂಟಿ ಮಾಡುತ್ತಿದ್ದಾರೆ ಹಾಗೆಯೇ ಹಿಂದೂಗಳು ಪ್ರತಿಭಟಿಸಿದರೆ ಅವರನ್ನು ಬರ್ಬರವಾಗಿ ಕೊಲ್ಲಲಾಗುತ್ತಿದೆ ಎಂದು ಶೇರ್‌ ಮಾಡಲಾಗುತ್ತಿದೆ. ಇನ್ನು ಕನ್ನಡದಲ್ಲಿ ಕೂಡ ಈ ಪೋಸ್ಟ್‌ ವೈರಲ್‌ ಆಗುತ್ತಿದೆ. ಪ್ರಮುಖವಾಗಿ ಫೇಸ್​ಬುಕ್ ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಂಡು, ‘‘ಇದು ಪಾಕಿಸ್ತಾನ ಬಂಗ್ಲಾದೇಶ ವಲ್ಲ. ನಮ್ಮ…

Read More

Fact Check | ಬಲಾಢ್ಯ ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ 8ನೇ ಸ್ಥಾನ ಎಂಬುದು ಸುಳ್ಳು

ಸಾಮಾಜಿಕ ಜಾಲತಾಣದಲ್ಲಿ ಪತ್ರಿಕೆಯ ವರದಿಯೊಂದು ವೈರಲ್‌ ಆಗಿದ್ದು, ಇದಕ್ಕೆ “ಬಲಾಢ್ಯ ದೇಶಗಳ ಪಟ್ಟಿ, ಭಾರತಕ್ಕೆ ಎಂಟರ ನಂಟು” ಎಂದು ಶೀರ್ಷಿಕೆಯನ್ನು ನೀಡಲಾಗಿದೆ. ಈ ವರದಿಯಲ್ಲಿ ಬಲಾಢ್ಯ ದೇಶಗಳ ಪಟ್ಟಿ ಬಿಡುಗಡೆಯಾಗಿದ್ದು, ಇದರಲ್ಲಿ ಭಾರತಕ್ಕೆ 8ನೇ ಸ್ಥಾನ ಸಿಕ್ಕಿದೆ ಎಂದು ಉಲ್ಲೇಖಿಸಲಾಗಿದೆ. ಹಲವರು ಈ ವರದಿಯನ್ನು ನಿಜವೆಂದು ನಂಬಿ ಪ್ರಧಾನಿ ಮೋದಿ ಸರ್ಕಾರವನ್ನು ಹೊಗಳಿ ವಿವಿಧ ಬರಹಗಳೊಂದಿಗೆ ವೈರಲ್‌ ಆಗುತ್ತಿರುವ ವರದಿಯನ್ನು ಹಂಚಿಕೊಂಡಿದ್ದಾರೆ. ಇನ್ನೂ ಕೆಲವರು ಭಾರತ ಎಂಟನೇ ಸ್ಥಾನದಲ್ಲಿದೆ. ಪ್ರಧಾನಿ ಮೋದಿ ಅವರು ಭಾರತವನ್ನು ವಿಶ್ವಗುರು ಮಾಡುತ್ತೇನೆ…

Read More

Fact Check | ಜಾರ್ಜಿಯಾ ದೇಶದ ಮಾಡೆಲ್‌ ಡಾ. ರಾಜ್‌ಕುಮಾರ್‌ ಅವರ ರೀತಿ ಇದ್ದಾರೆ ಎಂದು AI ಫೋಟೋ ಹಂಚಿಕೊಳ್ಳಲಾಗುತ್ತಿದೆ

ಸಾಮಾಜಿಕ ಜಾಲತಾಣಗಳಲ್ಲಿ “ಜಾರ್ಜಿಯ ದೇಶದ ಯುವ ಮಾಡೆಲ್ ಒಬ್ಬರು ನೋಡಲು ಕನ್ನಡದ ಹಿರಿಯ ನಟರಾದ ಡಾ.ರಾಜ್‌ಕುಮಾರ್ ಅವರ ರೀತಿಯಲ್ಲಿ ಇದ್ದಾರೆ” ಎಂದು ಫೋಟೋಗಳನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಹಲವರು ಈ ಫೋಟೋವಿಗೆ ತಮ್ಮದೇ ಆದ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದು, ಈ ವ್ಯಕ್ತಿಯ ಕುರಿತು ಹುಡುಕಾಟವನ್ನು ನಡೆಸಬೇಕು. ಇವರನ್ನು ಕರ್ನಾಟಕಕ್ಕೆ ಒಮ್ಮೆಯಾದರೂ ಕರೆಯಿಸಬೇಕು ಎಂಬ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ವೈರಲ್ ವಿಡಿಯೋದಲ್ಲೂ ಕೂಡ ಯುವಕನಂತೆ ಭಾಸವಾಗುವ ವ್ಯಕ್ತಿಯೊಬ್ಬ ನೋಡಲು ಹಿರಿಯ ನಟ ಡಾ.ರಾಜ್‌ಕುಮಾರ್ ಅವರ ರೀತಿಯಲ್ಲೇ ಕಂಡು ಬಂದಿದ್ದು, ಕೇಶವಿನ್ಯಾಸಗಳು ಬೇರೆ ಬೇರೆಯದ್ದಾಗಿದೆ ಮತ್ತು…

Read More

Fact Check | ಇಫ್ತಾರ್ ಕೂಟ ಆಯೋಜನೆಯ ನಂತರ ತಮಿಳು ನಟ ವಿಜಯ್ ಅವರ ಪಕ್ಷದ ಕಚೇರಿಯನ್ನು ಕೆಡವಲಾಯಿತು ಎಂಬುದು ಸುಳ್ಳು

ತಮಿಳು ನಟ ಹಾಗೂ ರಾಜಕಾರಣಿಯಾಗಿರುವ ವಿಜಯ್ ಅವರ ಫೋಟೋ ಇರುವ ಗೋಡೆಯನ್ನು ದ್ವಂಸ ಮಾಡುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದನ್ನು ಹಂಚಿಕೊಂಡ ಹಲವರು ತಮಿಳುನಾಡಿನಲ್ಲಿ ವಿಜಯ್‌ಗೆ ಮಂಗಳಾರತಿ ಆರಂಭವಾಗಿದೆ ಇಂದು ಬರೆದುಕೊಂಡರೆ, ಇನ್ನೂ ಕೆಲವರು ಅಲ್ಲಿನ ಆಡಳಿತರೂಢ ಡಿಎಂಕೆ ಪಕ್ಷ ವಿಜಯ್‌ ಅವರನ್ನು ಆರಂಭಿಕ ಹಂತದಲ್ಲಿ ತುಳಿಯಲು ಯತ್ನಿಸುತ್ತಿದೆ ಎಂದು ಬರೆದುಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿಯೂ ಕೂಡ ಸಣ್ಣ ಕಟ್ಟಡ ಒಂದರ ಗೋಡೆಯ ಮೇಲೆ ನಟ ವಿಜಯ್‌ ಅವರ ಭಾವಚಿತ್ರವಿದ್ದು, ಅವರ ಪಕ್ಷದ ಬಣ್ಣಗಳು…

Read More

Fact Check | ತಮಿಳುನಾಡು ಬಿಜೆಪಿ ಮುಖ್ಯಸ್ಥ ಅಣ್ಣಾಮಲೈ ‘ಗೋ ಬ್ಯಾಕ್ ಗ್ರೋಕ್‌’ ಎಂದು ಪೋಸ್ಟರ್‌ ಹಿಡಿದಿರುವ ಚಿತ್ರ ಎಡಿಟೆಡ್‌ ಆಗಿದೆ

ಎಲಾನ್ ಮಸ್ಕ್ ಅವರ AI ಚಾಟ್‌ಬಾಟ್‌ ಗ್ರೋಕ್ ಕಳೆದ ಕೆಲವು ದಿನಗಳಿಂದ ಭಾರತದಲ್ಲಿ ಬಹಳ ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟು ಹಾಕಿದೆ. ಅದರಲ್ಲೂ ಪ್ರಮುಖವಾಗಿ ಕೇಂದ್ರ ಬಿಜೆಪಿ ಸರ್ಕಾರದ ವೈಫಲ್ಯಗಳು, ಮತ್ತು ಕೇಂದ್ರ ಸರ್ಕಾರದ ಸುಳ್ಳುಗಳ ಕುರಿತು ನೀಡುತ್ತಿರುವ ಪ್ರತಿಕ್ರಿಯೆಗಳು ಬಲಪಂಥೀಯರ ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನೇ ಕಾರಣವಾಗಿಟ್ಟುಕೊಂಡು ತಮಿಳುನಾಡು ಬಿಜೆಪಿ ರಾಜ್ಯಧ್ಯಕ್ಷ ಅಣ್ಣಾಮಲೈ ಅವರು “ಗೋ ಬ್ಯಾಕ್ ಗ್ರೋಕ್‌” ಎಂಬ ಅಭಿಯಾನ ಆರಂಭಿಸಿದ್ದಾರೆ ಎಂದು ಫೋಟೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ. #go_back_grok pic.twitter.com/fR405aJJ2b — ಕೈಲಾಸಂ (@Kade_kade2216) March…

Read More

Fact Check | ತೆಲಂಗಾಣದ ಅಂಬಾ ರಾಮಲಿಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಕಾಶಿಗೆ ಹೋಗಲು ಸುರಂಗ ಮಾರ್ಗ ಪತ್ತೆಯಾಗಿದೆ ಎಂಬುದು ಸುಳ್ಳು

ತೆಲಂಗಾಣದ ನಾಗರ್‌ ಕರ್ನೂಲ್‌ನ ಗುಂಡಾಲ್‌ನಲ್ಲಿರುವ ಶ್ರೀ ಅಂಬಾ ರಾಮಲಿಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಒಂದು ದುರಂತ ಘಟನೆ ಸಂಭವಿಸಿದ್ದು, ಕಲ್ಪಕುರ್ತಿಯ ಸಮಾಜ ಕಲ್ಯಾಣ ವಸತಿ ಶಾಲೆಯ 16 ವರ್ಷದ ಮಧ್ಯಂತರ ವಿದ್ಯಾರ್ಥಿ ಓಮೇಶ್ ದೇವಾಲಯದ ತೊಟ್ಟಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ . ಎನ್‌ಡಿಆರ್‌ಎಫ್ ತಂಡಗಳು ಮೂರು ದಿನಗಳ ರಕ್ಷಣಾ ಕಾರ್ಯಾಚರಣೆ ನಡೆಸಿ, ಭಾರೀ ಕ್ರೇನ್ ಬಳಸಿ ಆತನ ಶವವನ್ನು ಹೊರತೆಗೆಯಲಾಯಿತು.ಈ ಮಧ್ಯೆ, ದೇವಾಲಯದ ತೊಟ್ಟಿಯಿಂದ ನೀರು ಖಾಲಿ ಮಾಡಿದ ನಂತರ ಸುರಂಗ ಮಾರ್ಗ ಪತ್ತೆಯಾಗಿದೆ ಎಂದು ಹೇಳುವ ವೀಡಿಯೊ ಸಾಮಾಜಿಕ…

Read More