Team Kannada fact check

ಕುತುಬ್ ಮಿನಾರ್

ಕುತುಬ್ ಮಿನಾರ್ ನಿರ್ಮಿಸಿದ್ದು ಮೊಘಲರಲ್ಲ ಎಂದು ತಪ್ಪಾಗಿ ರಾಜಸ್ಥಾನದ ಕಬ್ಬಿಣದ ಕಂಬದ ಫೋಟೊ ಹಂಚಿಕೆ

ಕುತುಬ್ ಮಿನಾರ್ ಅನ್ನು ಮೊಘಲರು ನಿರ್ಮಿಸಿದ್ದು ಎಂದು ಇತಿಹಾಸ ತಜ್ಞರು ಸುಳ್ಳು ಹೇಳುತ್ತಿದ್ದಾರೆ. ಆದರೆ ಅದರ ಮೇಲೆ ಹಿಂದೂಗಳ ಹೆಸರು ಬರೆದಿದೆ ನೋಡಿ ಎಂದು ಸ್ತಂಭದ ಫೋಟೊವೊಂದನ್ನು ವಾಟ್ಸಾಪ್ ನಲ್ಲಿ ಹಂಚಿಕೊಳ್ಳಲಾಗುತ್ತಿದೆ. ಅದರೊಟ್ಟಿಗೆ “ಕುತುಬ್ ಮಿನಾರ್ ನಿರ್ಮಿಸಿದ್ದು ಮೊಘಲರು ಅಂತಾ ಹೇಳ್ತಾರೆ ಆದ್ರೆ ಅಲ್ಲಿ ಇರುವ ಕಬ್ಬಿಣದ ಕಂಬದ ಮೇಲೆ ಯಾರ ಹೆಸರು ಇದೆ ಸ್ವಲ್ಪ ಜೂಮ್ ಮಾಡಿ ನೋಡಿ… ಇದು 1500 ವರ್ಷಗಳ ಹಿಂದಿನ ವರಾಹಮಿಹಿರನ ಕಾಲದ ವಿಷ್ಣು ಸ್ಥಂಭ. ನಮ್ಮ ದೇಶದ ಇತಿಹಾಸವನ್ನು ಬರೆದ…

Read More
ಮೊಹಮ್ಮದ್ ಅಜರುದ್ದೀನ್

ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಕುಟುಂಬ ಸಮೇತ ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದಾರೆ ಎಂಬುದು ಸುಳ್ಳು

“ಮೊಹಮ್ಮದ್ ಅಜರುದ್ದೀನ್ ತನ್ನ ಪತ್ನಿ ಮತ್ತು ಮಗನೊಂದಿಗೆ ಕಾಶಿಯಲ್ಲಿ ಮುಸ್ಲಿಂ ಧರ್ಮವನ್ನು ತೊರೆದು ಸನಾತನ ಹಿಂದೂ ಧರ್ಮವನ್ನು ಸ್ವೀಕರಿಸಿದರು. ವಾರಣಾಸಿಯ ಭೋಜ್‌ಬೀರ್‌ನಲ್ಲಿರುವ ಆರ್ಯ ಸಮಾಜ ಮಂದಿರದಲ್ಲಿ ಮೊಹಮ್ಮದ್ ಅಜರುದ್ದೀನ್ ತನ್ನ ಪತ್ನಿ ಮತ್ತು ಪುತ್ರನೊಂದಿಗೆ ಇಸ್ಲಾಂ ಧರ್ಮವನ್ನು ತೊರೆದು ಸನಾತನ ಧರ್ಮವನ್ನು ಸ್ವೀಕರಿಸಿದ್ದಾರೆ” ಎಂಬ ಸಂದೇಶವೊಂದು ವಾಟ್ಸಾಪ್‌ ಮತ್ತು ಥ್ರೆಡ್‌ನಲ್ಲಿ ಹರಿದಾಡುತ್ತಿದೆ. ಈ ಸಂದೇಶದೊಂದಿಗೆ ದಂಪತಿಯೊಂದು ದೇವಾಸ್ಥಾನದಲ್ಲಿ ಪೂಜೆ ಸಲ್ಲಿಸುವ ಮತ್ತು ಅದಕ್ಕೆ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಫೋಟೊವನ್ನು ಕೊಲಾಜ್ ಮಾಡಿ ಹಂಚಿಕೊಳ್ಳಲಾಗುತ್ತಿದೆ. ಇದು ನಿಜವೇ ಎಂದು…

Read More
ಕಾಂಗ್ರೆಸ್

ಕಾಂಗ್ರೆಸ್ ಚೀನಾದ ಸಿಸಿಪಿ ಜೊತೆ ಒಪ್ಪಂದ ಮಾಡಿಕೊಂಡಿದೆ ಎಂಬುದು ಸುಳ್ಳು

ಜೂನ್ 24ರಂದು 18ನೇ ಲೋಕಸಭೆಯ ಕಾರ್ಯಕಲಾಪಗಳು ಆರಂಭವಾಗಿದ್ದು, ಲೋಕಸಭೆಗೆ ಸದಸ್ಯರು ಆಗಮಿಸಿದ್ದರು. ಈ ವೇಳೆ ಕಾಂಗ್ರೆಸ್ ಲೋಕಸಭಾ ಸದಸ್ಯರು ಕೆಂಪು ಬಣ್ಣದ ಹೊದಿಕೆ ಇರುವ ಸಂವಿಧಾನದ ಪ್ರತಿಯನ್ನು ಪ್ರದರ್ಶಿಸಿದ್ದರು. ಬಹಳ ಹಿಂದೆ ಚೀನಾದ ಜನರು ಕೆಂಪು ಡೈರಿ ಹಿಡಿದು ಫೋಟೊ ತೆಗೆಸಿಕೊಂಡಿದ್ದರು. ಹಾಗಾಗಿ ಕಾಂಗ್ರೆಸ್ ಚೀನಾದ ಕಮ್ಯುನಿಸ್ಟ್ ಪಾರ್ಟಿ ಜೊತೆ ಒಪ್ಪಂದ ಮಾಡಿಕೊಂಡಿದೆ ಎಂದು ಪ್ರತಿಪಾದಿಸಿ ಪೋಸ್ಟರ್ ಒಂದನ್ನು ಹಂಚಿಕೊಳ್ಳಲಾಗುತ್ತಿದೆ. ಅದು ನಿಜವೇ ಎಂಬುದನ್ನು ಪರಿಶೀಲಿಸೋಣ. ಫ್ಯಾಕ್ಟ್ ಚೆಕ್ ಮೊದಲಿಗೆ ಕಾಂಗ್ರೆಸ್‌ ಸಂಸದರು ಹಿಡಿದುಕೊಂಡಿದ್ದ ಕೆಂಪು ಬಣ್ಣದ…

Read More

ಮಹಾರಾಷ್ಟ್ರದ 6 ವರ್ಷದ ಬಾಲಕಿ ಮೇಲಿನ ಅತ್ಯಾಚಾರ-ಕೊಲೆಯ ಆರೋಪಿ ಮುಸ್ಲಿಂ ಅಲ್ಲ

ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯಲ್ಲಿ 6 ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಲೆಗೈಯ್ಯಲಾಗಿದೆ. ಆರೋಪಿಯನ್ನು ತಮಗೆ ಒಪ್ಪಿಸಿ ಎಂದು ಜನರ ಗುಂಪು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದೆ. ಇದರಿಂದ ಕೆಲವರಿಗೆ ಗಾಯಗಳಾಗಿವೆ. ಈ ವಿಡಿಯೋವನ್ನು ಹಲವಾರು ಜನರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದು, ಆರೋಪಿ ಮುಸ್ಲಿಂ ಸಮುದಾಯಕ್ಕೆ ಸೇರಿದವರನು, ಆತನ ಹೆಸರು ಹಫೀಸ್ ಬೇಗ್ ಎಂದು ಪ್ರತಿಪಾದಿಸುತ್ತಿದ್ದಾರೆ. ಇದು ನಿಜವೇ ಎಂದು ಪರಿಶೀಲಿಸೋಣ. Maharashtra's Jalgaon district,#Jamner35 year old Hafiz Beg raped killed a 6…

Read More

ಇನ್ನೊಬ್ಬರ ಪೂಜಾ ಸ್ಥಳದಲ್ಲಿ ಕುಣಿಯದೇ ಈದ್ ಆಚರಿಸಿದ ಮುಸ್ಲಿಮರು ಅದ್ಭುತ ಸಮುದಾಯ ಎಂದು ಧ್ರುವ್ ರಾಠೀ ಹೇಳಿಲ್ಲ

200 ಮಿಲಿಯನ್ ಮುಸ್ಲಿಮರು ನಿನ್ನೆ ಈದ್ ಆಚರಿಸಿದರು ಬಡವರು ಮತ್ತು ನಿರ್ಗತಿಕರಿಗೆ ಮಾಂಸವನ್ನು ವಿತರಿಸಿದರು ತಮ್ಮ ಸಂಬಂಧಿಕರನ್ನು ಭೇಟಿಯಾದರು ಅದ್ಭುತವಾದ ಆಹಾರವನ್ನು ಸೇವಿಸಿದರು ಮಕ್ಕಳಿಗೆ ಈದಿ ನೀಡಿ ಸಂತಸಗೊಳಿಸಿದರು ಅವರ್ಯಾರೂ ಕುಡಿದು ಮತ್ತೊಬ್ಬರ ಪೂಜಾ ಸ್ಥಳಕ್ಕೆ ಹೋಗಿ ಕುಣಿದು ಕುಪ್ಪಳಿಸಲಿಲ್ಲ ಎಂತಹ ಅದ್ಭುತ ಸಮುದಾಯ ಎಂದು ಪ್ರಖ್ಯಾತ ಯೂಟ್ಯೂಬರ್ ಧ್ರುವ್ ರಾಠೀ ಟ್ವೀಟ್ ಮಾಡಿದ್ದಾರೆ ಎಂಬ ಸಂದೇಶವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಅದು ನಿಜವೇ ಎಂದು ಪರಿಶೀಲಿಸೋಣ. ಫ್ಯಾಕ್ಟ್ ಚೆಕ್ ಇತ್ತೀಚಿನ ದಿನಗಳಲ್ಲಿ ಯೂಟ್ಯೂಬರ್ ಧ್ರುವ್‌…

Read More
ಜೋ ಬೈಡನ್

ಜಿ7 ಶೃಂಗಸಭೆಯಲ್ಲಿ ಪಿಎಂ ಮೋದಿಯನ್ನು ಕರೆದೊಯ್ದ ವ್ಯಕ್ತಿ ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಅಲ್ಲ

ಇತ್ತೀಚೆಗೆ ಇಟಲಿಯಲ್ಲಿ ನಡೆದ ಜಿ7 ಶೃಂಗಸಭೆ ನಡೆಯಿತು. ಅದರಲ್ಲಿ ಏಳು ಪ್ರಮುಖ ರಾಷ್ಟ್ರಗಳ ಮುಖಂಡರು ಭಾಗವಹಿಸಿದ್ದರು. ನರೇಂದ್ರ ಮೋದಿಯವರು ಸಹ ಈ ಸಂದರ್ಭದಲ್ಲಿ ಭಾಗವಹಿಸಿದರು. ಆಗ ಅವರನ್ನು ವೇದಿಕೆಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್‌ರವರೆ ಖುದ್ದು ಕರೆದುಕೊಂಡು ಹೋದರು. ಅವರು ಕೈ ಕುಲುಕಲು ಮುಂದಾದರೂ ಮೋದಿ ಕೈ ಕುಲಕಲಿಲ್ಲ. ಮೋದಿಯವರು ಅಷ್ಟು ಎತ್ತರಕ್ಕೆ ಬೆಳೆದಿದ್ದಾರೆ ನೋಡಿ ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇದು ನಿಜವೇ ಎಂದು ಪರಿಶೀಲಿಸೋಣ. ಫ್ಯಾಕ್ಟ್ ಚೆಕ್‌ 2024ರ ಜಿ7 ಶೃಂಗಸಭೆಯ ನೇರ…

Read More
ಸಂವಿಧಾನ

Fact Check: ಕಾಂಗ್ರೆಸ್ ಅತಿ ಹೆಚ್ಚು ಬಾರಿ ಸಂವಿಧಾನ ಬದಲಿಸಿದೆ ಎಂಬುದು ಸುಳ್ಳು

“ಬಿಜೆಪಿ 400ಕ್ಕೂ ಅಧಿಕ ಸೀಟುಗಳನ್ನು ಗೆದ್ದರೆ ಅವರು ಸಂವಿಧಾನವನ್ನೇ ಬದಲಿಸುತ್ತಾರೆ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಆದರೆ ರಿಯಾಲಿಟಿ ಏನೆಂದರೆ ಜವಹರಲಾಲ ನೆಹರೂ 17 ಬಾರಿ ಸಂವಿಧಾನ ಬದಲಿಸಿದ್ದಾರೆ. ಇಂದಿರಾಗಾಂಧಿ  28 ಸಲ ಬದಲಿಸಿದ್ದು, ರಾಜೀವ್ ಗಾಂಧಿ 10 ಸಲ ಬದಲಿಸಿದ್ದು, ಮನಮೋಹನ್ ಸಿಂಗ್/ಸೋನಿಯಾ ಗಾಂಧಿ 7 ಸಲ ಬದಲಿಸಿದ್ದಾರೆ.  ಮಣ್ಣು ತಿನ್ನೋ ಕೆಲಸ ಮಾಡೋದು ಕಾಂಗ್ರೆಸ್ಸಿಗರು.. ಅಪವಾದ ಹಾಕೋದು ಮಾತ್ರ ಬಿಜೆಪಿ ಮೇಲೆ..! ಎಂಬ ಪೋಸ್ಟರ್ ಒಂದು ಸಾಮಾಜಿಕ ಜಾಲತಾಣಗಲ್ಲಿ ಹರಿದಾಡುತ್ತಿದೆ. ಇದು ನಿಜವೇ ಎಂದು…

Read More
ಖರ್ಗೆ

ಖರ್ಗೆ ಆಸ್ತಿ 50 ಸಾವಿರ ಕೋಟಿ, ಮಾಯಾವತಿಯವರ ಆಸ್ತಿ 90 ಸಾವಿರ ಕೋಟಿ ಎಂಬುದಕ್ಕೆ ಆಧಾರಗಳಿಲ್ಲ

ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರ ಒಟ್ಟು ಆಸ್ತಿ 50 ಸಾವಿರ ಕೋಟಿ ರೂ ಇದೆ. (ಆಧಾರ ಒನ್ ಇಂಡಿಯಾ.ಕಾಂ) ಅದೇ ರೀತಿ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿಯವರ ಆಸ್ತಿ 90 ಸಾವಿರ ಕೋಟಿ ರೂ ಆಗಿದೆ. (ಆಧಾರ ಇಂಡಿಯನ್ ಎಕ್ಸ್‌ಪ್ರೆಸ್) ಎಂಬ ಪೋಸ್ಟ್ ಒಂದು ವಾಟ್ಸಾಪ್‌ನಲ್ಲಿ ಹರಿದಾಡುತ್ತಿದೆ. ಇವರಿಬ್ಬರ ಒಟ್ಟು ಆಸ್ತಿಯಿಂದ ದೇಶದ ಎಲ್ಲಾ ದಲಿತರನ್ನು ಲಕ್ಷಾಧಿಪತಿಗಳನ್ನಾಗಿ ಮಾಡಬಹುದು ಎಂದು ಆ ಪೋಸ್ಟರ್‌ನಲ್ಲಿ ಪ್ರತಿಪಾದಿಸಲಾಗಿದೆ. ಇದು ನಿಜವೇ ಎಂಬುದನ್ನು ಪರಿಶೀಲಿಸೋಣ. ಫ್ಯಾಕ್ಟ್ ಚೆಕ್ ಮಲ್ಲಿಕಾರ್ಜುನ ಖರ್ಗೆಯವರ ಆಸ್ತಿಯ ಕುರಿತಾಗಿ…

Read More
Paracetamol p-500

Paracetamol p-500 ಮಾತ್ರೆಯಲ್ಲಿ Machupo ವೈರಸ್ ಇದೆ ಎಂಬುದು ಸುಳ್ಳು

ತುರ್ತು ಎಚ್ಚರಿಕೆ! Paracetamol p-500 ಎಂದು ಬರೆದಿರುವ ಪ್ಯಾರಸಿಟಮಾಲ್ ಅನ್ನು ತೆಗೆದುಕೊಳ್ಳದಂತೆ ಎಚ್ಚರಿಕೆ ವಹಿಸಿ. ಇದು ಹೊಸ, ತುಂಬಾ ಬಿಳಿ ಮತ್ತು ಹೊಳೆಯುವ ಪ್ಯಾರಸಿಟಮಾಲ್ ಆಗಿದೆ, ಇದು “ಮಚುಪೋ” ವೈರಸ್ ಅನ್ನು ಹೊಂದಿದೆ ಎಂದು ವೈದ್ಯರು ಸಲಹೆ ನೀಡುತ್ತಾರೆ. ಇದು ಹೆಚ್ಚಿನ ಮರಣ ಪ್ರಮಾಣದೊಂದಿಗೆ ದರ ಹೊಂದಿರುವ ವಿಶ್ವದ ಅತ್ಯಂತ ಅಪಾಯಕಾರಿ ವೈರಸ್‌ಗಳಲ್ಲಿ ಒಂದಾಗಿದೆ. ದಯವಿಟ್ಟು ಈ ಸಂದೇಶವನ್ನು ನಿಮ್ಮ ಸಂಪರ್ಕ ಪಟ್ಟಿಯಲ್ಲಿರುವ ಎಲ್ಲಾ ಜನರೊಂದಿಗೆ ಮತ್ತು ಕುಟುಂಬದೊಂದಿಗೆ ಹಂಚಿಕೊಳ್ಳಿ, ಮತ್ತು ಒಂದು ಜೀವ ಅಥವಾ ಜೀವವನ್ನು…

Read More

ಗಾಂಧಿ ಸಿನಿಮಾ ಬಿಡುಗಡೆಗೂ ಮುನ್ನ ಅವರ ಬಗ್ಗೆ ಜಗತ್ತಿಗೆ ತಿಳಿದಿರಲಿಲ್ಲ ಎಂಬ ಮೋದಿ ಹೇಳಿಕೆ ಸುಳ್ಳು

ಲೋಕಸಭಾ ಚುನಾವಣೆಯ ಅಂಗವಾಗಿ ಖಾಸಗಿ ಚಾನೆಲ್ ಒಂದಕ್ಕೆ ಸಂದರ್ಶನ ನೀಡಿದ ಪ್ರಧಾನಿ ಮೋದಿಯವರು “ಗಾಂಧಿ ಸಿನಿಮಾ ಬಿಡುಗಡೆಯಾಗುವವರೆಗೂ ಮಹಾತ್ಮ ಗಾಂಧಿಯವರ ಬಗ್ಗೆ ಜಗತ್ತಿಗೆ ತಿಳಿದಿರಲಿಲ್ಲ.  ಸ್ವಾತಂತ್ರ್ಯದ ನಂತರದ 75 ವರ್ಷಗಳಲ್ಲಿ ಜಗತ್ತು ಮಹಾನ್ ನಾಯಕನ ಬಗ್ಗೆ ಜಾಗೃತವಾಗಿದೆ ಎಂದು ಖಚಿತಪಡಿಸಿಕೊಳ್ಳುವುದು ಭಾರತೀಯ ರಾಜಕೀಯ ನಾಯಕರ ಜವಾಬ್ದಾರಿಯಾಗಿದೆ. ಮಾರ್ಟಿನ್ ಲೂಥರ್ ಕಿಂಗ್ ಮತ್ತು ನೆಲ್ಸನ್ ಮಂಡೇಲಾ ಅವರು ವಿಶ್ವಾದ್ಯಂತ ಪ್ರಸಿದ್ಧ ವ್ಯಕ್ತಿಗಳಾಗಿದ್ದರೆ, ಮಹಾತ್ಮ ಗಾಂಧಿಯನ್ನು ವಿಶ್ವಪ್ರಸಿದ್ಧ ವ್ಯಕ್ತಿಯಾಗಿ ಮಾಡಲು ಭಾರತವು ಉತ್ತಮವಾಗಿ ‘ಕೆಲಸ’ ಮಾಡಬೇಕಿತ್ತು ಎಂದು ವಿಶ್ವವನ್ನು ಸುತ್ತಿದ…

Read More