Team Kannada fact check

ಶಕ್ತಿ ಯೋಜನೆ ವಿಫಲ, ಕಡಿಮೆ ಸಂಖ್ಯೆಯ ಬಸ್‌ಗಳಿವೆ ಎಂಬ ಬಿಜೆಪಿ ಮಹಿಳಾ ಮೋರ್ಚಾದ ಆರೋಪ ಸಂಪೂರ್ಣ ಸುಳ್ಳು

ಮಹಿಳಾ ಮೋರ್ಚಾದ ಅಧ್ಯಕ್ಷೆ ಸಿ.ಮಂಜುಳಾ ನೇತೃತ್ವದ ನಿಯೋಗವು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ವಿಜಯ ಕಿಶೋ‌ರ್ ರಾಹತ್ಕ‌ರ್ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದ್ದು ಅದರಲ್ಲಿ ರಾಜ್ಯದಲ್ಲಿ ಶಕ್ತಿ ಯೋಜನೆ ವಿಫಲ, ಕಡಿಮೆ ಸಂಖ್ಯೆಯ ಬಸ್‌ಗಳಿವೆ ಎಂದು ಆರೋಪಿಸಿದೆ. ಈ ಕುರಿತು ಪ್ರಜಾವಾಣಿ ವರದಿ ಮಾಡಿದ್ದು, “ರಾಜ್ಯ ಸರ್ಕಾರವು ಮಹಿಳೆಯರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ‘ಶಕ್ತಿ’ ಯೋಜನೆಯನ್ನು ಘೋಷಿಸಿದೆ. ಆದರೆ ಓಡಾಟಕ್ಕೆ ತುಕ್ಕುಹಿಡಿದ, ಸುಸ್ಥಿತಿಯಲ್ಲಿ ಇರದ ಬಸ್‌ಗಳನ್ನು ನೀಡಿದೆ. ಹೀಗಾಗಿ ಈ ಯೋಜನೆ ಸಂಪೂರ್ಣವಾಗಿ ವಿಫಲವಾಗಿದೆ’…

Read More

ಅಮೆರಿಕಕ್ಕೆ ಹೆದರುವುದಿಲ್ಲ, ರಷ್ಯಾದಿಂದ ತೈಲ ಆಮದು ನಿಲ್ಲುವುದಿಲ್ಲ ಎಂದು ವಿದೇಶಾಂಗ ಸಚಿವ ಜೈಶಂಕರ್ ಹೇಳಿಲ್ಲ

ಭಾರತವು ರಷ್ಯಾದಿಂದ ತೈಲ ಆಮದು ನಿಲ್ಲಿಸಬೇಕು, ಇಲ್ಲದಿದ್ದರೆ ಭಾರತದ ಮೇಲೆ ಮತ್ತಷ್ಟು ಶುಂಕ ವಿಧಿಸಲಾಗುವುದು ಎಂದು ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿರುವುದರ ನಡುವೆ, “ನಮ್ಮ ದೇಶದ ಆರ್ಥಿಕತೆಯು ವೈಟ್ ಹೌಸ್ ನಿಂದ ನಡೆಯುವುದಿಲ್ಲ. ಹಾಗಾಗಿ ಅಮೆರಿಕಕ್ಕೆ ಹೆದರಿ ರಷ್ಯಾದಿಂದ ತೈಲ ಆಮದು ನಿಲ್ಲುವುದಿಲ್ಲ” ಎಂದು ವಿದೇಶಾಂಗ ಸಚಿವ ಜೈಶಂಕರ್ ಹೇಳಿದ್ದಾರೆ ಎಂದು Middle Eastern Affairs ಎಂಬ ಎಕ್ಸ್ ಹ್ಯಾಂಡಲ್‌ನಲ್ಲಿ ಟ್ವೀಟ್ ಮಾಡಲಾಗಿದೆ. ಇದು ನಿಜವೇ ಎಂಬುದನ್ನು ಪರಿಶೀಲಿಸೋಣ. BREAKING "Our economy will…

Read More

Fact Check : ವಿಜಯ ದಶಮಿ ಆಚರಿಸಿ ಮನೆಗೆ ಮರಳುತ್ತಿದ್ದ ಇಬ್ಬರು ಹಿಂದೂ ಯುವತಿಯರನ್ನು ಕೊಲೆ ಮಾಡಲಾಗಿದೆ ಎಂಬುದು ಸುಳ್ಳು

ಬಾಂಗ್ಲಾದೇಶದಲ್ಲಿ ವಿಜಯ ದಶಮಿ ಆಚರಿಸಿ ಮನೆಗೆ ಹಿಂದಿರುಗುತ್ತಿದ್ದಾಗ ಈ ಇಬ್ಬರು ಹಿಂದೂ ಹುಡುಗಿಯರನ್ನು ಉಗ್ರಗಾಮಿಗಳು ಹತ್ಯೆ ಮಾಡಿದ್ದಾರೆ ಎಂಬ ಸಂದೇಶದೊಂದಿಗೆ ಇಬ್ಬರು ಯುವತಿಯರು ಜೊತೆಯಲ್ಲಿ ಕುಳಿತಿರುವ ಚಿತ್ರವೊಂದನ್ನು ಸಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಅದೇ ರೀತಿಯಲ್ಲಿ, “ಬಾಂಗ್ಲಾದಲ್ಲಿ ದುರ್ಗಾ ಪೂಜೆ ಮುಗಿಸಿ ಮನೆಗೆ ವಾಪಸ್ ಆಗುತ್ತಿದ್ದ ಇಬ್ಬರು ಹಿಂದೂ ಯುವತಿಯರ ಭೀಕರ ಹತ್ಯೆ! ಹಿಂದುಗಳಿಗೂ ಕೋಳಿಗಳಿಗೂ ಯಾವುದೇ ವ್ಯತ್ಯಾಸ ಇಲ್ಲ, ಕೋಳಿಯೊಂದನ್ನು ಕತ್ತರಿಸುವಾಗ ಅದು ಮಾತ್ರ ಚೀರಾಡುತ್ತದೆ, ಉಳಿದ ಕೋಳಿಗಳು ಬಿಟ್ಟಿ ಕಾಳುಗಳನ್ನು ತಿನ್ನುತ್ತಾ ತಮ್ಮ ಪಾಡಿಗೆ ತಾವು…

Read More

Fact Check : ಪ್ರವಾಹದಲ್ಲಿ ಮಕ್ಕಳೊಂದಿಗೆ ಸಿಲುಕಿರುವ ವೃದ್ಧ ಮಹಿಳೆಯ ದೃಶ್ಯವು AI ರಚಿತವಾದದ್ದು

ವೃದ್ಧ ಮಹಿಳೆ ಮಗುವನ್ನು ತನ್ನ ಮಡಿಲಲ್ಲಿ ಇಟ್ಟುಕೊಂಡು ಇತರ ಮಕ್ಕಳೊಂದಿಗೆ ನೀರಿನಲ್ಲಿ ನಿಂತಿದ್ದಾಳೆ ಎಂದು ಚಿತ್ರವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇದು ಏಕಾಏಕಿ ಪ್ರವಾಹದ ಪರಿಣಾಮ ಎಂದು ಅನೇಕ ಬಳಕೆದಾರರು ಹೇಳುತ್ತಿದ್ದಾರೆ. “ಹೀರೋಗಳು ಎಲ್ಲಾ ನಾಯಕಿಯ ಫೋಟೋಗಳನ್ನು ಇಷ್ಟಪಡುತ್ತಾರೆ, ಇಂದು ತಾಯಿಯನ್ನು ಯಾರು ಇಷ್ಟಪಡುತ್ತಾರೆ, ಲೈಕ್‌ ಮತ್ತು ಕಾಮೆಂಟ್‌ಗಳನ್ನು ಯಾರು ಮಾಡುತ್ತಾರೆ ಎಂಬುದನ್ನು ನೋಡೋಣ. #ಫೋಟೋಗ್ರಫಿ ಚಿತ್ರದಲ್ಲಿ  ಪ್ರವಾಹದ ದುರಂತ” ಎಂದು ಕೆಲವು ಫೇಸ್‌ಬುಕ್ ಬಳಕೆದಾರರು ಶೀರ್ಷಿಕೆಯೊಂದಿಗೆ ಚಿತ್ರವನ್ನು ಹಂಚಿಕೊಳ್ಳುತ್ತಿದ್ದಾರೆ. ಫ್ಯಾಕ್ಟ್‌ ಚೆಕ್‌ :  ಈ ವೈರಲ್‌…

Read More

Fact Check: ಬಡ ಮಕ್ಕಳೊಂದಿಗೆ ರತನ್ ಟಾಟಾ ಊಟ ಮಾಡುತ್ತಿರುವ ಫೋಟೊ AI ರಚಿತವಾದದ್ದು

ಕೈಗಾರಿಕೋದ್ಯಮಿ ಮತ್ತು ಲೋಕೋಪಕಾರಿಯಾದ ರತನ್ ಟಾಟಾ ಅವರ ನಿಧನದ ನಂತರ, ಅವರು ಬಡ ಮಕ್ಕಳೊಂದಿಗೆ ಊಟ ಮಾಡುತ್ತಿದ್ದಾರೆ ಎಂಬ ಚಿತ್ರವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಕಪ್ಪು-ಬಿಳುಪು ಫೋಟೋದಲ್ಲಿ ಯುವ ರತನ್ ಟಾಟಾ ನಗರದಲ್ಲಿ ಸೈಕಲ್ ಸವಾರಿ ಮಾಡಿದ್ದಾರೆ ಎಂಬ ಚಿತ್ರವನ್ನು ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಫ್ಯಾಕ್ಟ್‌ ಚೆಕ್‌ : ಈ ವೈರಲ್‌ ಚಿತ್ರಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಚಿತ್ರಗಳಲ್ಲಿ ಹಲವಾರು ಅಸಂಗತೆಗಳು ಕಂಡುಬಂದಿವೆ.  ರತನ್ ಟಾಟಾ ಅವರ ಕಣ್ಣುಗಳು, ಕೈಗಳು ವಿರೂಪಗೊಂಡಿವೆ ಮತ್ತು ಚಿತ್ರಗಳಲ್ಲಿ ಎಲ್ಲಾ ವ್ಯಕ್ತಿಗಳ ಮುಖದ ಆವ ಭಾವಗಳು…

Read More

Fact Check : ಪ್ಯಾಲೆಸ್ಟೈನ್ ಪರ ಪ್ರತಿಭಟನಾಕಾರರು ಪಂಜಾಬಿನಲ್ಲಿ ಮಹಾರಾಜ ರಂಜಿತ್ ಸಿಂಗ್‌ರವರ ಪ್ರತಿಮೆಯನ್ನು ವಿರೂಪಗೊಳಿಸಿದ್ದಾರೆ ಎಂಬುದು ಸುಳ್ಳು

ಪ್ಯಾಲೆಸ್ಟೈನ್ ಧ್ವಜವನ್ನು ಹಿಡಿದಿರುವ ವ್ಯಕ್ತಿಗಳ ಗುಂಪೊಂದು ಮಹಾರಾಜ ರಂಜಿತ್ ಸಿಂಗ್‌ರವರ ಪ್ರತಿಮೆಯನ್ನು ಧ್ವಂಸಗೊಳಿಸುತ್ತಿರುವ ಚಿತ್ರವನ್ನು ಸಾಮಾಜಿಕ‌ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ಘಟನೆಯು ಪಂಜಾಬ್‌ನಲ್ಲಿ ನಡೆದಿದೆ ಎಂದು ಕೆಲವು ವರದಿಗಳು ಹೇಳುತ್ತಿದ್ದು, ಪ್ಯಾಲೆಸ್ಟೈನ್ ಬೆಂಬಲಿಗರು ಭಾರತದಲ್ಲಿ ಪ್ರತಿಮೆಯನ್ನು ವಿರೂಪಗೊಳಿಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ. Xನ @TimesAlgebraIND ಎಂಬ ಖಾತೆಯಲ್ಲಿ ಈ ಚಿತ್ರವನ್ನು ಹಂಚಿಕೊಳ್ಳುವ ಮೂಲಕ, “ಪ್ಯಾಲೆಸ್ಟೈನ್ ಪರ ಬೆಂಬಲಿಗರು ಪಂಜಾಬ್‌ನಲ್ಲಿ ಮಹಾರಾಜ ರಂಜಿತ್ ಸಿಂಗ್ ಅವರ ಪ್ರತಿಮೆಯನ್ನು ವಿರೂಪಗೊಳಿಸಿದ್ದಾರೆ. ಮಹಾರಾಜ ರಂಜಿತ್ ಸಿಂಗ್ ಅವರು ಪಂಜಾಬ್‌ನಲ್ಲಿ ಅನೇಕ ಇಸ್ಲಾಮಿಕ್…

Read More

Fact Check : ಹೃದಯ ಶಸ್ತ್ರಚಿಕಿತ್ಸೆಗೆ ಬಳಸುವ ಮೆಗಾವಾಕ್ ಉಪಕರಣವನ್ನು ಭಾರತೀಯ ವೈದ್ಯರು ಅಭಿವೃದ್ಧಿ ಪಡಿಸಿದ್ದಾರೆ ಎಂಬುದು ಸುಳ್ಳು

ಹೃದಯದ ಅಪಧಮನಿಗಳಲ್ಲಿ ಹೆಪ್ಪುಟ್ಟುವ ರಕ್ತವನ್ನು ಪರಿಣಾಮಕಾರಿಯಾಗಿ ತೆಗೆದುಹಾಕುವ ಮೂಲಕ ಹೃದಯ ಶಸ್ತ್ರಚಿಕಿತ್ಸೆಗಳನ್ನು ಸರಳಗೊಳಿಸುವ ಮೆಗಾವಾಕ್ ಮೆಕ್ಯಾನಿಕಲ್ ಥ್ರಂಬೆಕ್ಟಮಿ ಸಿಸ್ಟಮ್ ಎಂಬ ಉಪಕರಣವನ್ನು ನಮ್ಮ ಭಾರತೀಯ ವೈದ್ಯರು ಅಭಿವೃದ್ಧಿ ಪಡಿಸಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವೊಂದನ್ನು‌ ಹಂಚಿಕೊಳ್ಳಲಾಗುತ್ತಿದೆ. ಈ ಸುಧಾರಿತ ಸಾಧನವು ಹೃದಯ ಶಸ್ತ್ರಚಿಕಿತ್ಸೆಗೆ ಸಹಾಯಕವಾಗುತ್ತದೆ ಮತ್ತು ಇದರ ಬೆಲೆ ಕೇವಲ ರೂ.5,000(USD 75) ಎಂಬ ಉಲ್ಲೇಖದೊಂದಿಗೆ ಶೇರ್ ಮಾಡಲಾಗುತ್ತಿದೆ. ಫ್ಯಾಕ್ಟ್ ಚೆಕ್: ಮೆಗಾವಾಕ್ ಮೆಕ್ಯಾನಿಕಲ್ ಥ್ರಂಬೆಕ್ಟಮಿ ಸಿಸ್ಟಮ್ ಅನ್ನು ಭಾರತೀಯ ವೈದ್ಯರು ಕಂಡುಹಿಡಿದಿಲ್ಲ. ಇದನ್ನು 2013 ರಲ್ಲಿ…

Read More

Fact Check: ದೇವರ ಶಾಪದಿಂದ ಇರಾನ್‌ ಕ್ಷಿಪಣಿ ಅವರದೇ ದೇಶದಲ್ಲಿ ಸ್ಫೋಟಗೊಂಡಿದೆ ಎಂಬುದು ಸುಳ್ಳು, ಇದು ಉಕ್ರೇನ್‌ ವಿಡಿಯೋ

ಇಸ್ರೇಲ್ ಮತ್ತು ಇರಾನ್ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ, ಇರಾನಿನ ಅಸಮರ್ಪಕ ಕ್ಷಿಪಣಿಯು ಉಡಾವಣೆಯಾದ ಸ್ವಲ್ಪ ಸಮಯದ ನಂತರ ಯು-ಟರ್ನ್ ತೆಗೆದುಕೊಂಡಿದೆ. ಅದರ ಗುರಿಯತ್ತ ಸಾಗುವ ಬದಲು ತನ್ನದೇ ದೇಶದ ಲಾಂಚರ್‌ ಮೇಲೆ ದಾಳಿ ಮಾಡಿ ನಾಶಪಡಿಸಿದೆ ಎಂದು ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. “ಇದು ದೇವರ ಮಧ್ಯ ಪ್ರವೇಶವಲ್ಲವೇ?, ಇರಾನ್ ದಾಳಿಯ ಕ್ಷಿಪಣಿ ಯು-ಟರ್ನ್ ತೆಗೆದುಕೊಂಡು ಲಾಂಚರ್ ಅನ್ನು ನಾಶಪಡಿಸಿತು, ವಾಹ್.” ಎಂದು ಪೋಸ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. Say if this is not the…

Read More

Fact Check : ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ವಿನೇಶ್‌ ಪೋಗಟ್‌ ಸೋತಿಲ್ಲ

ಹರಿಯಾಣ ವಿಧಾನಸಭಾ ಚುನಾವಣೆಯ 2024ರ ಫಲಿತಾಂಶವು ಮಂಗಳವಾರದಂದು ಪ್ರಕಟವಾದ ನಂತರ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಜೂಲಾನಾ ವಿಧಾನಸಭಾ ಸ್ಥಾನಕ್ಕೆ ಸ್ಪರ್ಧಿಸಿದ್ದ ಮಾಜಿ ಕುಸ್ತಿಪಟು ವಿನೇಶ್ ಫೋಗಟ್‌ರವರು ಚುನಾವಣೆಯಲ್ಲಿ ಸೋತಿದ್ದಾರೆ ಎಂದು ಪೋಸ್ಟ್‌ಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. “ಹರಿಯಾಣದ ಜನರು ದೇಶದ ಮಗಳನ್ನು ಸೋಲಿಸಿದ್ದೀರಿ, ನೀವು ಚಿನ್ನದ ಪದಕ ವಿಜೇತೆಯನ್ನು ತುಂಬಾ ಅವಮಾನಿಸಿದ್ದೀರಿ” ಎಂದು ಆಕೆಯ ಚಿತ್ರದೊಂದಿಗೆ ಬರೆದು ಹಂಚಿಕೊಳ್ಳುತ್ತಿದ್ದಾರೆ. ಫ್ಯಾಕ್ಟ್‌ ಚೆಕ್‌ : ಈ ವೈರಲ್ ಪೋಸ್ಟ್‌ನ್ನು ಪರಿಶೀಲಿಸಲು, ಭಾರತದ ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್‌ನಲ್ಲಿ…

Read More

Fact Check : ಅಮಿತಾಬ್ ಬಚ್ಚನ್ ಕೀಲು ನೋವಿನ ಚಿಕಿತ್ಸೆ ಕುರಿತು ಮಾತನಾಡಿಲ್ಲ, ಇದು AI ರಚಿತ ವಿಡಿಯೋ

ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಮತ್ತು ಇಂಡಿಯಾ ಟಿವಿಯ ರಜತ್ ಶರ್ಮಾ ನಡುವಿನ ಸಂದರ್ಶನದ ವಿಡಿಯೋದಲ್ಲಿ, ದೀಪಕ್ ಚೋಪ್ರಾ ಎಂಬ ವ್ಯಕ್ತಿ ತನ್ನ ಕೀಲು ನೋವಿನ ಸಮಸ್ಯೆಯನ್ನುಹೇಳಿಕೊಂಡಾಗ ಬಚ್ಚನ್ ಮತ್ತು ಶರ್ಮಾ ಕೀಲು ನೋವಿನ ಸಮಸ್ಯೆಗೆ ಚಿಕಿತ್ಸೆಯನ್ನು ನೀಡಿದ್ದಾರೆ ಎಂದು ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಫ್ಯಾಕ್ಟ್‌ ಚೆಕ್‌ : ಈ ವೈರಲ್‌ ವಿಡಿಯೋದ ಕುರಿತು ಸತ್ಯಾಸತ್ಯತೆಯನ್ನು ತಿಳಿದುಕೊಳ್ಳಲು, ವಿಡಿಯೋವನ್ನು ಸೂಕ್ಷ್ಮವಾಗಿ ಪರೀಕ್ಷಿಸಿದಾಗ ಆಡಿಯೋ ಮತ್ತು ದೃಶ್ಯಗಳ ನಡುವಿನ ಲಿಪ್-ಸಿಂಕಿಂಗ್‌ ಸಮಸ್ಯೆಗಳು ಕಂಡುಬಂದಿವೆ. ಮತ್ತು ಹಲವಾರು…

Read More