ಸಂಸತ್ತು ವಕ್ಫ್ (ತಿದ್ದುಪಡಿ) ಕಾಯ್ದೆಯನ್ನು ಅಂಗೀಕರಿಸಿದ ನಂತರ, ವಕ್ಫ್ ಕಾಯ್ದೆ ದೇಶದಲ್ಲಿ ಜಾರಿಗೆ ಬಂದಿದೆ ಮತ್ತು ಈ ಕಾಯ್ದೆಯನ್ನು ಹಲವಾರು ಅರ್ಜಿಗಳ ಮೂಲಕ ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಲಾಗಿದೆ. ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸಂಜೀವ್ ಖನ್ನಾ ಸೇರಿದಂತೆ ಸುಪ್ರೀಂ ಕೋರ್ಟ್ನ ತ್ರಿಸದಸ್ಯ ಪೀಠವು, 2025 ರ ವಕ್ಫ್ ಕಾಯ್ದೆಯ ಸಾಂವಿಧಾನಿಕತೆಯನ್ನು ಪ್ರಶ್ನಿಸಿರುವ ಪ್ರಕರಣದ ವಿಚಾರಣೆ ನಡೆಸುತ್ತಿದೆ. ಹಲವು ಅರ್ಜಿಗಳಲ್ಲಿ ಜಮಿಯತ್ ಉಲಮಾ-ಎ-ಹಿಂದ್ ಅಧ್ಯಕ್ಷ ಮೌಲಾನಾ ಅರ್ಷದ್ ಮದನಿ ಅವರ ಅರ್ಜಿಯೂ ಒಂದು, ಅದರ ಬಗ್ಗೆ ಕಪಿಲ್ ಸಿಬಲ್ ತಮ್ಮ ಪರ ವಾದ ಮಂಡಿಸುತ್ತಿದ್ದಾರೆ. ಇದೀಗ ಇದಕ್ಕೆ ಸಂಬಂಧ ಪಟ್ಟಂತೆ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ
एक सांसद के रूप में सरकारी वेतन, भत्ते और पेंशन लेने के बाबजूद कपिल सिब्बल सुप्रीम कोर्ट में वक्फ मामले में मुस्लिम पक्ष के वकील के रूप में बहस कैसे कर सकते है?
इंडियन एडवोकेट एक्ट 1961 का संदर्भ क्यों नहीं लिया जा रहा है?
इतना Repost करो कि @KapilSibal की डिग्री चली जाएं pic.twitter.com/M4s1N74Fon
— Sùññy Shrìvastava (@SanatanPremi23) April 25, 2025
ಆ ಸುದ್ದಿಯನ್ನು, ಸಾಮಾಜಿಕ ಮಾಧ್ಯಮ ಬಳಕೆದಾರರು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ, ಆ ಸುದ್ದಿಯ ಪ್ರಕಾರ ಕಪಿಲ್ ಸಿಬಲ್ ಅವರು ಸಂಸದರಾಗಿ ಸರ್ಕಾರಿ ಸಂಬಳ ಮತ್ತು ಭತ್ಯೆಗಳನ್ನು ಪಡೆದಿದ್ದರೂ ಸಹ, ಸುಪ್ರೀಂ ಕೋರ್ಟ್ನಲ್ಲಿ ವಕ್ಫ್ ಕಾಯ್ದೆಯ ವಿರುದ್ಧ ಮುಸ್ಲಿಂ ಪರ ವಕೀಲರಾಗಿ ವಾದಿಸಲು ಸಾಧ್ಯವಿಲ್ಲ, ಏಕೆಂದರೆ 1961 ರ ಭಾರತೀಯ ವಕೀಲರ ಕಾಯ್ದೆಯ ಪ್ರಕಾರ ಸಂಸದರು ಅಥವಾ ಶಾಸಕರು ವಕೀಲಿ ವೃತ್ತಿ ಮಾಡುವುದಕ್ಕೆ ನಿಷೇಧವಿದೆ. ಹಾಗಾಗಿ ಕಪಿಲ್ ಸಿಬಲ್ ಅವರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ ಎಂದು ಬರೆದುಕೊಳ್ಳಲಾಗುತ್ತಿದೆ. ಇದನ್ನು ನಿಜವೆಂದು ನಂಬಿ ಹಲವರು ಕಪಿಲ್ ಸಿಬಲ್ ಅವರಿಗೆ ಸಾಮಾನ್ಯ ಜ್ಙಾನವಿಲ್ಲ ಎಂದು ಟೀಕಿಸುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ಶೇರ್ ಮಾಡಲಾಗುತ್ತಿರುವ ವೈರಲ್ ಪೋಸ್ಟ್ನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ
एक सांसद के रूप में सरकारी वेतन, भत्ते और पेंशन लेने के बाबजूद… कपिल सिब्बल सुप्रीम कोर्ट में वक्फ मामले में मुस्लिम पक्ष के वकील के रूप में बहस कैसे कर सकता है ?
इंडियन एडवोकेट एक्ट 1961 का संदर्भ क्यों नहीं लिया जा रहा है ? pic.twitter.com/N214MkvdjH— महात्मा नाथूराम गोडसे (@Tipndot) April 19, 2025
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ಭಾರತೀಯ ವಕೀಲರ ಕಾಯ್ದೆ 1961 ರ ಕುರಿತು ಪರಿಶೀಲನೆ ನಡೆಸಿದೆವು. ಈ ಕಾಯ್ದೆಯಲ್ಲಿ ಯಾವುದೇ ಶಾಸಕ (ಸಂಸದ/ಶಾಸಕ/ಶಾಸಕ) ತಮ್ಮ ಅಧಿಕಾರಾವಧಿಯಲ್ಲಿ ವಕೀಲಿ ವೃತ್ತಿ ಮಾಡುವುದನ್ನು ನಿಷೇಧಿಸಲಾಗಿದೆ ಎಂಬ ನಿಬಂಧನೆ ಎಲ್ಲಿಯೂ ನಮಗೆ ಕಂಡು ಬಂದಿಲ್ಲ. ಇದೇ ಕಾಯಿದೆಯ ಸೆಕ್ಷನ್ 7 , ವಕೀಲರ ನಡವಳಿಕೆಗೆ ಸಂಬಂಧಿಸಿದಂತೆ ನಿಯಮಗಳನ್ನು ರೂಪಿಸುವ ಅಧಿಕಾರವನ್ನು ಬಾರ್ ಕೌನ್ಸಿಲ್ ಆಫ್ ಇಂಡಿಯಾ (ಬಿಸಿಐ) ಹೊಂದಿದೆ ಎಂಬ ಅಂಶ ಕೂಡ ನಮಗೆ ಕಂಡು ಬಂದಿದೆ..

ಬಾರ್ ಕೌನ್ಸಿಲ್ ಆಫ್ ಇಂಡಿಯಾ ವಕೀಲರ ಹಕ್ಕುಗಳು, ಸವಲತ್ತುಗಳು ಮತ್ತು ಹಿತಾಸಕ್ತಿಗಳನ್ನು ರಕ್ಷಿಸುತ್ತದೆ ಮತ್ತು ಕಾನೂನು ಸುಧಾರಣೆಗಳನ್ನು ಬೆಂಬಲಿಸುತ್ತದೆ ಮತ್ತು ಪ್ರೋತ್ಸಾಹಿಸುತ್ತದೆ. ಭಾರತೀಯ ವಕೀಲರ ಕಾಯ್ದೆ 1961 ಕೀಲರ ನಡವಳಿಕೆಗೆ ಸಂಬಂಧಿಸಿದಂತೆ ನಿಯಮಗಳನ್ನು ರೂಪಿಸುವ ಅಧಿಕಾರವನ್ನು ಬಾರ್ ಕೌನ್ಸಿಲ್ ಆಫ್ ಇಂಡಿಯಾ (ಬಿಸಿಐ) ಗೆ ನೀಡುತ್ತದೆ. ಹಾಗಾಗಿ ನಾವು ಬಾರ್ ಕೌನ್ಸಿಲ್ ಆಫ್ ಇಂಡಿಯಾ ನಿಯಮಗಳನ್ನು ಪರಿಶೀಲಿಸಿದ್ದೇವೆ. ಬಾರ್ ಕೌನ್ಸಿಲ್ ಆಫ್ ಇಂಡಿಯಾ ನಿಯಮಗಳ ಪ್ರತಿಯು ಅನೇಕ ಸರ್ಕಾರಿ ವೆಬ್ಸೈಟ್ಗಳಲ್ಲಿ ಲಭ್ಯವಿದೆ . 1961 ರ ವಕೀಲರ ಕಾಯ್ದೆ ಮತ್ತು ಭಾರತೀಯ ಬಾರ್ ಕೌನ್ಸಿಲ್ ನಿಯಮಗಳ ಪ್ರತಿಯು ಭಾರತೀಯ ಬಾರ್ ಕೌನ್ಸಿಲ್ ವೆಬ್ಸೈಟ್ನಲ್ಲಿ ಲಭ್ಯವಿದೆ. ಈ ನಿಯಮಗಳ ನಿಯಮ 49 ರ ಪ್ರಕಾರ, ಕಾನೂನು ಅಭ್ಯಾಸ ಮಾಡುವ ಯಾವುದೇ ವಕೀಲರು ಯಾವುದೇ ವ್ಯಕ್ತಿ, ಸರ್ಕಾರ, ಕಂಪನಿ ಅಥವಾ ನಿಗಮದ ಪೂರ್ಣ ಸಮಯದ ಸಂಬಳ ಪಡೆಯುವ ಉದ್ಯೋಗಿಯಾಗಿರಬಾರದು ಎಂಬುದನ್ನು ಉಲ್ಲೇಖಿಸಿದೆ.

ಇನ್ನು ವಕೀಲೆ ಅಶ್ವಿನಿ ಉಪಾಧ್ಯಾಯ ಎಂಬುವವರು ಅವರು ಶಾಸಕಾಂಗದ ಸದಸ್ಯರು (ಸಂಸತ್ತು ಅಥವಾ ವಿಧಾನಸಭೆ ಅಥವಾ ವಿಧಾನ ಪರಿಷತ್ತು) ತಮ್ಮ ಅಧಿಕಾರಾವಧಿಯಲ್ಲಿ ವಕೀಲರಾಗಿ ಕೆಲಸ ಮಾಡುವುದನ್ನು ನಿಷೇಧಿಸಬೇಕೆಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು. ಈ ಸಂಬಂಧ 2018ರಲ್ಲಿ ಸುಪ್ರೀಂ ಕೋರ್ಟ್ನ ಮೂವರು ನ್ಯಾಯಾಧೀಶರ ಪೀಠವು ಈ ಅರ್ಜಿಯನ್ನು ವಜಾಗೊಳಿಸಿತು . ಅರ್ಜಿಯನ್ನು ವಜಾಗೊಳಿಸಿದ ಆಗಿನ ಸಿಜೆಐ ದೀಪಕ್ ಮಿಶ್ರಾ, ನ್ಯಾಯಮೂರ್ತಿ ಎ.ಎಂ. ಖಾನ್ವಿಲ್ಕರ್ ಮತ್ತು ಡಾ. ಡಿ.ವೈ. ಚಂದ್ರಚೂಡ್ ಅವರಿದ್ದ ಪೀಠವು, “1961 ರ ಕಾಯಿದೆಯ ನಿಬಂಧನೆಗಳು ಮತ್ತು ಅದರ ಅಡಿಯಲ್ಲಿ ಮಾಡಲಾದ ನಿಯಮಗಳು ಶಾಸಕಾಂಗದ ಸದಸ್ಯರು ತಮ್ಮ ಅಧಿಕಾರಾವಧಿಯಲ್ಲಿ ವಕೀಲರಾಗಿ ಅಭ್ಯಾಸ ಮಾಡಲು ಯಾವುದೇ ನಿರ್ಬಂಧವನ್ನು ವಿಧಿಸುವುದಿಲ್ಲ. ಭಾರತೀಯ ಬಾರ್ ಕೌನ್ಸಿಲ್ ಮಾಡಿದ ನಿಯಮ 49 ಚುನಾಯಿತ ಸಾರ್ವಜನಿಕ ಪ್ರತಿನಿಧಿಗಳಿಗೆ ಅನ್ವಯಿಸುವುದಿಲ್ಲ, ಏಕೆಂದರೆ ಅವರು ಯಾವುದೇ ವ್ಯಕ್ತಿ, ಸಂಸ್ಥೆ, ಸರ್ಕಾರ, ನಿಗಮ ಅಥವಾ ಸಂಸ್ಥೆಯ ಪೂರ್ಣ ಸಮಯದ ಸಂಬಳ ಪಡೆಯುವ ನೌಕರರ ವರ್ಗಕ್ಕೆ ಬರುವುದಿಲ್ಲ” ಎಂದು ಹೇಳಿತ್ತು. ಈ ತೀರ್ಪಿನ ಆಧಾರದಲ್ಲಿ ಹೇಳುವುದಾದರೆ ವೈರಲ್ ಪೋಸ್ಟ್ ದಾರಿ ತಪ್ಪಿಸುವ ಯತ್ನವಾಗಿದೆ ಎಂಬುದು ಸ್ಪಷ್ಟವಾಗಿದೆ.


ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ ಭಾರತೀಯ ವಕೀಲರ ಕಾಯ್ದೆಯ ಪ್ರಕಾರ ಸಂಸದರು ಅಥವಾ ಶಾಸಕರು ವಕೀಲಿ ವೃತ್ತಿ ಮಾಡುವುದಕ್ಕೆ ನಿಷೇಧವಿದೆ ಎಂಬುದು ಸಂಪೂರ್ಣವಾಗಿ ಸುಳ್ಳಾಗಿದೆ. ಈ ಕುರಿತು ಭಾರತೀಯ ವಕೀಲರ ಕಾಯ್ದೆ 1961, ಭಾರತೀಯ ಬಾರ್ ಕೌನ್ಸಿಲ್ ಆಫ್ ಇಂಡಿಯಾದ ನಿಯಮಗಳ ಪ್ರತಿಯಲ್ಲಿ ಎಲ್ಲಿಯೂ ಉಲ್ಲೇಖವಿಲ್ಲ. ಇನ್ನು ಸುಪ್ರೀಂ ಕೋರ್ಟ್ ಕೂಡ ಶಾಸಕಾಂಗದ ಸದಸ್ಯರು ವಕೀಲಿ ವೃತ್ತಿ ಮಾಡಬಹುದು ಎಂದು 2018ರಲ್ಲೇ ತೀರ್ಪು ನೀಡಿದೆ. ಹಾಗಾಗಿ ವೈರಲ್ ಪೋಸ್ಟ್ ಸುಳ್ಳು ನಿರೂಪಣೆಯಿಂದ ಕೂಡಿದೆ. ವೈರಲ್ ಸುದ್ದಿಗಳನ್ನು ಒಮ್ಮೆ ಪರಿಶೀಲಿಸಿ. ಸುಳ್ಳು ಸುದ್ದಿಗಳನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸದ್ದಿಗಳನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ AI ಫೋಟೊವನ್ನು ನಿಜವೆಂದು ಹಂಚಿಕೊಳ್ಳಲಾಗುತ್ತಿದೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

