ವ್ಯಕ್ತಿಯೊಬ್ಬರ ಮೇಲೆ ಗುಂಪೊಂದು ಹಲ್ಲೆ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಹರಾಧನ್ ರಾಯ್ ಎಂಬ ಹಿಂದೂ ವ್ಯಕ್ತಿ ತನ್ನ ಮಗಳ ಅಪಹರಣ ಘಟನೆಯನ್ನು ಖಂಡಿಸಿ ಪ್ರತಿಭಟಿಸಿದ್ದಕ್ಕಾಗಿ ಮುಸ್ಲಿಂ ಮೂಲಭೂತವಾದಿಗಳು ಆತನ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
Attention International Media Outlets – Please Raise Voice In Defence of Hindus in Bangladesh!
An Islamist named Abdul Hakim in Naogaon district in Bangladesh abducted Hindu girl Anjana Roy at gun point. When victim's father Haradhan Roy protested this extreme cruelty, he was… pic.twitter.com/KQfZB18DCz
— Salah Uddin Shoaib Choudhury (@salah_shoaib) June 5, 2025
ವೈರಲ್ ವಿಡಿಯೋದಲ್ಲಿ ಕೂಡ ಗುಂಪೊಂದು ಗಲಾಟೆಯಲ್ಲಿ ತೊಡಗಿರುವುದು ಕಂಡು ಬಂದಿದೆ. ಈ ವಿಡಿಯೋ ನೋಡಿದ ಹಲವು ಮಂದಿ ಇದನ್ನು ನಿಜವೆಂದು ಭಾವಿಸಿ ತಮ್ಮ ವೈಯಕ್ತಿ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಪೋಸ್ಟ್ ಅನ್ನು ಹಂಚಿಕೊಳ್ಳುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋವಿನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ ಪರಿಶೀಲನೆ ನಡೆಸೋಣ
https://twitter.com/Hinduism_sci/status/1930533608537690470
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವಿಡಿಯೋವಿನ ವಿವಿಧ ಕೀ ಫ್ರೇಮ್ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್ನಲ್ಲಿ ಪರಿಶೀಲನೆ ನಡೆಸಿದೆವು. ಈ ವೇಳೆ ನಮಗೆ ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ಮೇ 14 ರಂದು ಫೇಸ್ಬುಕ್ ಖಾತೆಯಿಂದ ಪೋಸ್ಟ್ ಮಾಡಲಾದ ವೀಡಿಯೊದ ವಿಸ್ತೃತ ಆವೃತ್ತಿ ಕಂಡು ಬಂದಿದೆ. ಪೋಸ್ಟ್ ಪ್ರಕಾರ, ಮೇ 13 ರಂದು ಬಾಂಗ್ಲಾದೇಶದ ಸಿಲ್ಹೆಟ್ನಲ್ಲಿ ವಿದ್ಯಾರ್ಥಿ ರಾಜಕೀಯ ಗುಂಪೊಂದಕ್ಕೆ ಸಂಬಂಧಿಸಿದ ಗುಂಪೊಂದು ನಬಿಗಂಜ್ನ ಪ್ರಮುಖ ರಾಜಕಾರಣಿ ಮತ್ತು ಅವಾಮಿ ಲೀಗ್ ನಾಯಕ ನಿರ್ಮಲೆಂದು ದಾಸ್ ರಾಣಾ ಅವರ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ವೀಡಿಯೊ ತೋರಿಸುತ್ತದೆ ಎಂದು ಉಲ್ಲೇಖಿಸಲಾಗಿದೆ.

ರಾಣಾ ಅವರನ್ನು ಥಳಿಸಿ ನಂತರ ಪೊಲೀಸರಿಗೆ ಹಸ್ತಾಂತರಿಸಲಾಯಿತು. ತಾರತಮ್ಯ ವಿರೋಧಿ ವಿದ್ಯಾರ್ಥಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ ಆರೋಪ ಅವರ ಮೇಲಿತ್ತು ಮತ್ತು ಈ ಹಿಂದೆ 2014 ರಲ್ಲಿ ಜಮಾತ್-ಶಿಬಿರ್ ಸದಸ್ಯರ ಮೇಲೆ ಹಲ್ಲೆ ನಡೆಸಿದ ಆರೋಪ ಕೂಡ ರಾಣಾ ಅವರ ಮೇಲೆ ಹೊರಿಸಲಾಗಿತ್ತು. ಈ ಸೂಚನೆಯನ್ನು ತೆಗೆದುಕೊಂಡು, ನಾವು ಕೀವರ್ಡ್ ಹುಡುಕಾಟವನ್ನು ನಡೆಸಿದ್ದೇವೆ ಮತ್ತು ಮೇ 14 ರಂದು ಬಾಂಗ್ಲಾದೇಶದ ಮಾಧ್ಯಮ ಸಂಸ್ಥೆಗಳಾದ ರೂಪಾಲಿ ಬಾಂಗ್ಲಾದೇಶ ಮತ್ತು ಅನುಸಂಧಾನ್ 24 ಪ್ರಕಟಿಸಿದ ವರದಿಗಳು ನಮಗೆ ಕಂಡು ಬಂದಿವೆ.


ಈ ವರದಿಗಳ ಪ್ರಕಾರ, ಕೊತ್ವಾಲಿ ಮಾದರಿ ಪೊಲೀಸ್ ಠಾಣಾಧಿಕಾರಿ-ಪ್ರಭಾರಿ ಮೊಹಮ್ಮದ್ ಜಿಯಾವುಲ್ ಹಕ್, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ನಿರ್ಮಲೆಂದು ದಾಸ್ ರಾಣಾ ಅವರನ್ನು ಗುಂಪು ದಾಳಿಯ ನಂತರ ಪೊಲೀಸ್ ಠಾಣೆಗೆ ಕರೆತಂದರು ಎಂದು ದೃಢಪಡಿಸಿದರು. ಶೇಖ್ ಹಸೀನಾ ನೇತೃತ್ವದ ಅವಾಮಿ ಲೀಗ್ ಸರ್ಕಾರವನ್ನು ಉರುಳಿಸಿದ ವಿದ್ಯಾರ್ಥಿಗಳ ನೇತೃತ್ವದ ದಂಗೆಯನ್ನು ಉಲ್ಲೇಖಿಸಿ, ಜುಲೈ-ಆಗಸ್ಟ್ 2024 ರ ಚಳುವಳಿಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳ ಮೇಲಿನ ದಾಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ರಾಣಾ ಆರೋಪಿಯಾಗಿದ್ದಾರೆ ಎಂಬುದು ಕೂಡ ಈ ವರದಿಗಳ ಮೂಲಕ ಖಚಿತವಾಗಿದೆ. ಹಾಗಾಗಿ ಈ ಘಟನೆ ಬಾಂಗ್ಲಾದೇಶದಲ್ಲಿ ಹಿಂದೂ ವ್ಯಕ್ತಿ ತನ್ನ ಮಗಳ ಅಪಹರಣದ ವಿರುದ್ಧ ಪ್ರತಿಭಟಿಸಿದ್ದಕ್ಕಾಗಿ ಥಳಿತಕ್ಕೆ ಒಳಗಾಗಿದ್ದಾನೆ ಎಂಬುದು ತಪ್ಪು ಮಾಹಿತಿಯಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ಶೇರ್ ಆಗಿರುವ ವಿಡಿಯೊದಲ್ಲಿ ಬಾಂಗ್ಲಾದೇಶದಲ್ಲಿ ಹಿಂದೂ ವ್ಯಕ್ತಿಯೊಬ್ಬ ತನ್ನ ಮಗಳ ಅಪಹರಣಕ್ಕೆ ವಿರೋಧಿಸಿದ್ದಕ್ಕಾಗಿ ಆಕ್ರಮಣಕ್ಕೊಳಗಾದನೆಂದು ಹೇಳಲಾದ ಆರೋಪವು ಸುಳ್ಳಾಗಿದೆ. ಹಾಗಾಗಿ ವೈರಲ್ ವಿಡಿಯೋವನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | ಎಲ್.ಕೆ ಅತೀಕ್ ಅವರನ್ನು ವಿಧಾನ ಪರಿಷತ್ಗೆ ನಾಮನಿರ್ದೇಶನ ಮಾಡಲಾಗಿದೆ ಎಂಬುದು ಸುಳ್ಳು

