ಮನಮೋಹನ್ ಸಿಂಗ್

Fact Check: ಅಮರ್ತ್ಯ ಸೇನ್ ಮತ್ತು ಮನಮೋಹನ್ ಸಿಂಗ್ ಅವರ ಹೆಣ್ಣುಮಕ್ಕಳು ನಳಂದ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ 2730 ಕೋಟಿ ರೂ.ಗಳನ್ನು ದುರುಪಯೋಗಪಡಿಸಿಕೊಂಡಿಲ್ಲ

ನಳಂದ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ಅವಧಿಯಲ್ಲಿ ಅಮರ್ತ್ಯ ಸೇನ್ ಅವರು 2730 ಕೋಟಿ ರೂ.ಗಳ ಸಾರ್ವಜನಿಕ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಮತ್ತು ಡಾ. ಮನಮೋಹನ್ ಸಿಂಗ್ ಅವರ ಹೆಣ್ಣುಮಕ್ಕಳು ಮತ್ತು ಆಪ್ತರನ್ನು ಅರ್ಹತೆಯಿಲ್ಲದೆ ಪ್ರಮುಖ ಹುದ್ದೆಗಳಿಗೆ ನೇಮಿಸಿದ್ದಾರೆ ಎಂಬ ಸಂದೇಶವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ(ಇಲ್ಲಿ ). ಮನಮೋಹನ್ ಸಿಂಗ್ ಅವರ ಹೆಣ್ಣುಮಕ್ಕಳು ಸೇರಿದಂತೆ ಇಲ್ಲಿ ನೇಮಕಗೊಂಡವರು ವಿಶ್ವವಿದ್ಯಾಲಯಕ್ಕೆ ಕೊಡುಗೆ ನೀಡದೆ ವೇತನವನ್ನು ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಇದಲ್ಲದೆ, ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ಬೇಜವಾಬ್ದಾರಿಯುತ ಸಮಿತಿಯನ್ನು ವಜಾಗೊಳಿಸಿದೆ…

Read More

Fact Check: ಮಣಿಪುರದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಮೇಲೆ ಯುರೋಪ್ ಸಂಸತ್ ಮಂಡಳಿ ವಾಗ್ದಾಳಿ ನಡೆಸಿದೆ ಎಂಬುದು ಸತ್ಯ

ಪ್ರಧಾನಿ ಮೋದಿ ಮೇಲೆ ಯುರೋಪ್ ಸಂಸತ್ ಮಂಡಳಿ ವಾಗ್ದಾಳಿ ನಡೆಸಿದೆ ಎಂದು ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ವಿಡಿಯೋದಲ್ಲಿ ಯುರೋಪ್‌ ಸಂಸತ್‌ ಮಂಡಳಿಯ ಅನೇಕ ನಾಯಕರು ಭಾರತದಲ್ಲಿ ಹೆಚ್ಚಾಗುತ್ತಿರುವ ಧಾರ್ಮಿಕ ಹಿಂಸಾಚಾರ ಮತ್ತು ಅಲ್ಪಸಂಖ್ಯಾತರ ಮೇಲೆ ನಡೆಸುತ್ತಿರುವ ಹಲ್ಲೆಯನ್ನು ಖಂಡಿಸಿದ್ದಾರೆ ಎಂದು ಹಂಚಿಕೊಳ್ಳಲಾಗುತ್ತಿದೆ.  ಈ ವಿಡಿಯೋವನ್ನು ಹಂಚಿಕೊಂಡಿರುವ ಅನೇಕರು “ಬಿಗ್ ಬ್ರೇಕಿಂಗ್ – ಯುರೋಪ್‌ನಲ್ಲಿ ನರೇಂದ್ರ ಮೋದಿ ತೀವ್ರ ದಾಳಿಗೆ ಒಳಗಾಗಿದ್ದಾರೆ ಇದೀಗ ಐರೋಪ್ಯ ಸಂಸತ್ ಮಂಡಳಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದೆ….

Read More

FACT CHECK : ಡಾ.ಮನಮೋಹನ್ ಸಿಂಗ್‌ರವರ ಅಂತಿಮ ಯಾತ್ರೆಯಲ್ಲಿ ಗಾಂಧಿ ಪರಿವಾರ ಭಾಗವಹಿಸಿಲ್ಲ ಎಂಬುದು ಸುಳ್ಳು

ದೆಹಲಿಯಲ್ಲಿ ಶನಿವಾರ ನಡೆದ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಅಂತಿಮ ಯಾತ್ರೆಯ ವೀಡಿಯೋವೊಂದು ವೈರಲ್ ಆಗಿದ್ದು, ಹಿರಿಯ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿಲ್ಲ ಎಂದು ಆರೋಪಿಸಿ ಹಂಚಿಕೊಳ್ಳಲಾಗುತ್ತಿದೆ. “ಇಂದು ನಮಗೆ ಡಾ. ಮನಮೋಹನಜೀಯವರ ಕೊನೆಯ ಪ್ರಯಾಣದಲ್ಲಿ ಗಾಂಧಿ ಕುಟುಂಬವು ನೋಡಲು ಸಿಗಲಿಲ್ಲ! ಗಾಂಧಿ ಪರಿವಾರದ ಹೊರಗಿನ ಹಿರಿಯ ನಾಯಕರಿಗೆ ಕಾಂಗ್ರೆಸ್ಸಿಗಿರುವ ಗೌರವ ಇದೇನಾ? BJY (ಭಾರತ್‌ ಜೋಡೋ ಯಾತ್ರೆ)ಯಲ್ಲಿ ಸಾವಿರಾರು ಕಿ.ಮೀ ನಡೆದು…

Read More
ಪ್ರಿಯಾಂಕಾ ಗಾಂಧಿ

Fact Check: ಸೋನಿಯಾ, ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ʼಮೆರ್ರಿ ಕ್ರಿಸ್ಮಸ್ʼ ಫಲಕಗಳನ್ನು ಹಿಡಿದಿರುವ ವೈರಲ್ ಚಿತ್ರವು ಎಐ-ರಚಿತವಾಗಿದೆ

 ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರೊಂದಿಗೆ “ಮೆರ್ರಿ ಕ್ರಿಸ್ಮಸ್” ಎಂಬ ಫಲಕಗಳನ್ನು ಹಿಡಿದಿರುವ ಚಿತ್ರವು ಕಳದ ಒಂದು ವಾರಗಳಿಂದ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಈ ಪೋಟೋವನ್ನು ಬಳಸಿಕೊಂಡು ಹಿಂದೂ ಹಬ್ಬಗಳಿಗೆ ಶುಭಾಶಯಗಳನ್ನು ಕೋರದವರು ಕ್ರಿಸ್ಮಸ್‌ಗೆ ಮಾತ್ರ ಶುಭ ಕೋರಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಈ ಪೋಟೋವನ್ನು ಹಂಚಿಕೊಂಡಿರುವವರು ಹಿಂದಿಯಲ್ಲಿ “ನೀವು ಎಂದಾದರೂ ಅವರ ಹೋಳಿ, ದೀಪಾವಳಿ ಅಥವಾ ರಕ್ಷಾಬಂಧನಕ್ಕೆ ಶುಭಾಶಯ ಕೋರಿರುವ ಚಿತ್ರವನ್ನು ನೋಡಿದ್ದರೆ , ದಯವಿಟ್ಟು ಹೇಳಿ. ಸ್ನೇಹಿತರೇ…”…

Read More

FACT CHECK : ಮೈಕ್ರೋಸಾಫ್ಟ್ ದಿಗ್ಗಜ ಬಿಲ್ ಗೇಟ್ಸ್ ಮಂಕಿಪಾಕ್ಸ್ ವೈರಸ್‌ ಸೃಷ್ಟಿಸಿದ್ದಾರೆ ಎಂಬುದು ಸುಳ್ಳು

ಸಾಮಾಜಿಕ ಜಾಲತಾಣದಲ್ಲಿ “ಮಂಕಿಪಾಕ್ಸ್‌ನ ಸೃಷ್ಟಿ ಮತ್ತು ಹರಡುವಿಕೆಯ ಹಿಂದೆ ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್‌ ಗೇಟ್ಸ್‌ ಕೈವಾಡವಿದೆ” ಎಂದು ಆರೋಪಿಸಿ ಪೋಸ್ಟ್‌ಗಳನ್ನು ಹಂಚಿಕೊಳ್ಳಲಾಗಿದೆ. ಸದಾ ಆನ್‌ಲೈನ್ ದಾಳಿಗೆ ಗುರಿಯಾಗುತ್ತಿರುವ ಬಿಲ್ ಗೇಟ್ಸ್,  mpox ವೈರಸ್ ಅನ್ನು ಸೃಷ್ಟಿಸಿದ್ದಾರೆ ಮತ್ತು ಈಗ ಅದಕ್ಕೆ ಲಸಿಕೆಯನ್ನು ಹೊರತರಲಿದ್ದಾರೆ, ಆ ಮೂಲಕ ಅವರು ತೀರಾ ಕೀಳ್ಮಟ್ಟಕ್ಕೆ ಇಳಿದಿದ್ದಾರೆ” ಎಂದು ಹಂಚಿಕೊಳ್ಳಲಾಗಿದೆ. ಇದಲ್ಲದೇ, ವಿಶ್ವ ಆರೋಗ್ಯ ಸಂಸ್ಥೆಯು ಬಿಲ್ ಗೇಟ್ಸ್‌ನ ಕೈಯಲ್ಲಿ ಕೇವಲ “ಗೊಂಬೆ” ಎಂದು ಹಲವರು ಆರೋಪಿಸಿದ್ದಾರೆ ಮತ್ತು ಅವರು mpoxನ್ನು ಜಾಗತಿಕ ಆರೋಗ್ಯ ತುರ್ತುಸ್ಥಿತಿ…

Read More

Fact Check | ಡಾ.ಮನಮೋಹನ್ ಸಿಂಗ್‌ ಸೋನಿಯಾ ಗಾಂಧಿ ಕಾಲಿಗೆ ಬಿದ್ದು ನಮಸ್ಕರಿಸಿದ್ದರು ಎಂಬುದು ಸುಳ್ಳು

ವ್ಯಕ್ತಿಯೊಬ್ಬ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರ ಪಾದಗಳನ್ನು ಸ್ಪರ್ಶಿಸಿ ನಮಸ್ಕರಿಸಿರುವ ಚಿತ್ರವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಟ್ವಿಟರ್‌ ಚಿತ್ರದಲ್ಲಿ ವ್ಯಕ್ತಿಯು ದಿವಂಗತ ಭಾರತದ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಎಂದು ಬಣ್ಣಿಸಲಾಗಿದೆ.   “ಚಮ್ಚಾಗಳು ಎಲ್ಲಿದ್ದಾರೆ?” ಎಂಬ ಶೀರ್ಷಿಕೆಯೊಂದಿಗೆ ಫೋಟೋವನ್ನು ಹಂಚಿಕೊಳ್ಳಲಾಗುತ್ತಿದೆ. ಡಾ. ಮನಮೋಹನ ಸಿಂಗ್‌ ಸೋನಿಯಾ ಗಾಂಧಿ ಕಾಲಿಗೆ ಬಿದ್ದು ನಮಸ್ಕರಿಸಿದ್ದರಾ! ಈ ಕುರಿತು ಕನ್ನಡ ಫ್ಯಾಕ್ಟ್‌ ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ. Kaha gaye chamche pic.twitter.com/43ZyfojnWt — Kungfu Pande 🇮🇳 (Parody) (@pb3060) December…

Read More

Fact Check | ನಿತಿನ್ ಗಡ್ಕರಿ ರಾಹುಲ್ ಗಾಂಧಿಯವರನ್ನು ಹೊಗಳಿದ್ದಾರೆ ಎಂಬುದು ಸುಳ್ಳು

ಕೇಂದ್ರ ಸಚಿವ ನಿತಿನ್ ಗಡ್ಕರಿಯವರ ಸಂದರ್ಶನದ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋದಲ್ಲಿ ಸಂದರ್ಶಕರು ನಿತಿನ್ ಗಡ್ಕರಿಯವರಿಗೆ ರಾಹುಲ್ ಗಾಂಧಿ ಬಗ್ಗೆ ನಿಮ್ಮ ಅಭಿಪ್ರಾಯವೇನು? ಎಂದು ಪ್ರಶ್ನೆ ಕೇಳಿದ್ದಾರೆ. “ಗಾಂಧಿಯವರನ್ನು ನಾನು ಭೇಟಿಯಾದಾಗ, ಅವರು ಮಹಾನ್ ವ್ಯಕ್ತಿಗಳು ಎಂದು ನಾನು ಅರಿತುಕೊಂಡೆ” ರಾಹುಲ್ ಗಾಂಧಿ🔥🔥🔥ಎಂದು ಗಡ್ಕರಿಯವರು ಗಾಂಧಿಯವರನ್ನು ಹೊಗಳಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಅನೇಕ ಬಳಕೆದಾರರು ಹಂಚಿಕೊಳ್ಳುತ್ತಿದ್ದಾರೆ. ಈ ಕುರಿತು ಕನ್ನಡ ಫ್ಯಾಕ್ಟ್‌ ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ. ಫ್ಯಾಕ್ಟ್‌ ಚೆಕ್‌ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿರುವ…

Read More

Fact Check : ವ್ಯಕ್ತಿಯೊಬ್ಬ ZOOನಲ್ಲಿನ ಸಿಂಹದ ಪಂಜರದಲ್ಲಿ ಪ್ರವೇಶಿಸಿದ್ದಾನೆ ಎಂದು 2019ರ ವಿಡಿಯೋ ಹಂಚಿಕೆ

ಭಾರತದ ರಾಷ್ಟ್ರೀಯ ಮೃಗಾಲಯದಲ್ಲಿ ವ್ಯಕ್ತಿಯೊಬ್ಬನ ಮೇಲೆ ಸಿಂಹವೊಂದು ದಾಳಿ ನಡೆಸಿರುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. “ಮೃಗಾಲಯದ ಸಿಂಹದ ಪಂಜರದಲ್ಲಿ ಪ್ರವಾಸಿಗ. ಜೀವ ಉಳಿಸಲು ಕೆಚ್ಚೆದೆಯ ಪ್ರಯತ್ನಗಳು ನಡೆಯುತ್ತಿವೆ. ಎರಡು ದಿನಗಳ ಹಿಂದೆ ಭಾರತದ ರಾಷ್ಟ್ರೀಯ ಮೃಗಾಲಯದಲ್ಲಿ ಈ ಘಟನೆ ನಡೆದಿದೆ” ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋವನ್ನು ಅನೇಕ ಸಾಮಾಜಿಕ ಬಳಕೆದಾರರು ಹಂಚಿಕೊಳ್ಳುತ್ತಿದ್ದಾರೆ. ಈ ಕುರಿತು ಕನ್ನಡ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ ಫ್ಯಾಕ್ಟ್‌ ಚೆಕ್‌ : ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್‌ ಆಗುತ್ತಿರುವ ವಿಡಿಯೋದ ಕುರಿತು…

Read More

FACT CHECK : ದೆಹಲಿ ರಸ್ತೆಯ ಪರಿಸ್ಥಿತಿ ಎಂದು ಎಡಿಟೆಡ್‌ ಚಿತ್ರ ಹಂಚಿಕೊಂಡ ಬಿಜೆಪಿ ಐಟಿ ಸೆಲ್‌ ಮುಖ್ಯಸ್ಥ ಅಮಿತ್‌ ಮಾಳವೀಯ

ದೆಹಲಿಯಲ್ಲಿ ಆಪ್‌ ಸರ್ಕಾರವನ್ನು ಗುರಿಯಾಗಿಸಿ ಹಲವು ಸುಳ್ಳು ಸುದ್ದಿಗಳನ್ನು ಹರಡಿದ ಕುಖ್ಯಾತಿ ಪಡೆದಿರುವ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಮತ್ತೊಮ್ಮ  ಮುಖಭಂಗಕ್ಕೊಳಗಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅಮಿತ್ ಮಾಳವೀಯ  ಹಂಚಿಕೊಂಡಿರುವ ರಸ್ತೆಯ ಫೋಟೋವೊಂದು ಫ್ಯಾಕ್ಟ್‌ಚೆಕರ್‌ ಹಾಗೂ ಆಲ್ಟ್‌ ನ್ಯೂಸ್‌ ಸಹ ಸಂಪಾದಕ ಮುಹಮ್ಮದ್‌ ಝುಬೇರ್‌ ಹಂಚಿಕೊಂಡ ಬಳಿಕ  ವೈರಲ್ ಆಗಿದೆ. ಮುಹಮ್ಮದ್‌ ಝುಬೇರ್‌ ಹಂಚಿಕೊಂಡಿರುವ ಅಮಿತ್‌ ಮಾಳವೀಯ ಹಂಚಿಕೊಂಡಿರುವ ದೆಹಲಿ ಬಿಜೆಪಿ ಪೋಸ್ಟರ್‌ನ ಚಿತ್ರದಲ್ಲಿ ರಸ್ತೆಗಳು ಗುಂಡಿಗಳಿಂದ ತುಂಬಿರುವುದನ್ನು ಗಮನಿಸಿ “ಚೆನ್ನಾಗಿ ಎಡಿಟ್‌ ಮಾಡಿದ್ದೀರಿ@amitmalviya” ಎಂದು…

Read More
ಡಾ. ಬಿ.ಆರ್.ಅಂಬೇಡ್ಕರ್

Fact Check: 2022 ರ ಹಳೆಯ ವಿಡಿಯೋವನ್ನು ಡಾ. ಬಿ.ಆರ್.ಅಂಬೇಡ್ಕರ್ ಕುರಿತು ಅಮಿತ್ ಶಾ ನೀಡಿದ ಹೇಳಿಕೆ ವಿರುದ್ಧ ಬೃಹತ್ ಪ್ರತಿಭಟನೆ ಎಂದು ಹಂಚಿಕೊಳ್ಳಲಾಗುತ್ತಿದೆ

ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಇತ್ತೀಚೆಗೆ ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿವೆ. ಈ ನಡುವೆ ಬೃಹತ್ ಪ್ರತಿಭಟನಾ ರ್ಯಾಲಿಯನ್ನು ತೋರಿಸುವ 28 ಸೆಕೆಂಡುಗಳ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಅಮಿತ್‌ ಶಾ ಅವರ ಹೇಳಿಕೆಯನ್ನು ಖಂಡಿಸಿ ಈ ರ್ಯಾಲಿ ನಡೆದಿದೆ ಎಂದು ಪ್ರತಿಪಾದಿಸಲಾಗುತ್ತಿದೆ. ಅನೇಕ ಎಕ್ಸ್ ಮತ್ತು ಫೇಸ್‌ಬುಕ್‌ ಬಳಕೆದಾರರು ವೈರಲ್ ವಿಡಿಯೋವನ್ನು ಹಂಚಿಕೊಂಡಿದ್ದು, ಅಮಿತ್ ಶಾ ವಿರುದ್ಧ ಭಾರಿ ಪ್ರತಿಭಟನೆಯನ್ನು ಪ್ರದರ್ಶಿಸಿದ್ದಾರೆ ಎಂದು ಆರೋಪಿಸಿದ್ದಾರೆ….

Read More