ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಸದಸ್ಯ ಮೌಲಾನಾ ಸಜ್ಜದ್ ನೊಮಾನಿ ಅವರು ಮಹಾ ವಿಕಾಸ್ ಅಘಾಡಿ ( ಎಂವಿಎ ) ಮೈತ್ರಿಕೂಟದ ಬಳಿ ರೈತರ ಭೂಮಿಯನ್ನು ವಕ್ಫ್ಗೆ ವರ್ಗಾಯಿಸಲು ಮನವಿ ಮಾಡಿದ್ದಾರೆ ಎಂದು ಪೋಸ್ಟ್ವೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಇದರ ಜೊತೆಗೆ ಹಲವರು ರಾಷ್ಟ್ರೀಯ ಉಜಾಲ ಸುದ್ದಿ ಮಾಧ್ಯಮದಲ್ಲಿ ಈ ಬಗ್ಗೆ ಪ್ರಕಟವಾದ ಲೇಖನವನ್ನು ಹಂಚಿಕೊಂಡು, ಮೌಲಾನಾ ಸಜ್ಜದ್ ನೊಮಾನಿ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.
महाराष्ट्र के हिंदुओं और किसानों याद रखना अगर महा विकास अघाड़ी की जीत हुई तो महाराष्ट्र के हिंदू दोयम दर्जे के नागरिक बन जाएंगे
मुस्लिम पर्सनल ला बोर्ड के प्रवक्ता मौलाना सज्जाद नोमानी प्रेस कांफ्रेंस करके बताया कि उन्होंने जो जो मांग उद्धव ठाकरे कांग्रेस के नाना पटोले और शरद… pic.twitter.com/u4q27iApTk
— 🇮🇳Jitendra pratap singh🇮🇳 (@jpsin1) November 13, 2024
ಹಲವರು ರಾಷ್ಟ್ರೀಯ ಉಜಾಲದ ವರದಿಯನ್ನು ಹಂಚಿಕೊಂಡಿದ್ದು, ಮಹಾರಾಷ್ಟ್ರದ ಚುನಾವಣೆಗೂ ಮುನ್ನ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟ ವಕ್ಫ್ ಬೋರ್ಡಿಗೆ ಎಲ್ಲಾ ರೀತಿಯ ನೆರವನ್ನು ನೀಡುವುದಾಗಿ ಹೇಳಿದೆ ಮತ್ತು ರೈತರ ಭೂಮಿಯನ್ನು ವಕ್ಫ್ ಬೋರ್ಡಿಗೆ ನೀಡಲು ಷಡ್ಯಂತ್ರವನ್ನು ನಡೆಸಿದೆ ಎಂದು ಉಲ್ಲೇಖಿಸಿ ಪೋಸ್ಟ್ ಮಾಡಿದ್ದಾರೆ. ಹೀಗಾಗಿ ವೈರಲ್ ಪೋಸ್ಟ್ ನಿಜವೆಂದು ಹಲವರು ಭಾವಿಸಿದ್ದು, ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಕೂಡ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್ ಕುರಿತು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ
महाराष्ट्र के हिंदुओं और किसानों याद रखना अगर महा विकास अघाड़ी की जीत हुई तो महाराष्ट्र के हिंदू दोयम दर्जे के नागरिक बन जाएंगे
मुस्लिम पर्सनल ला बोर्ड के प्रवक्ता मौलाना सज्जाद नोमानी प्रेस कांफ्रेंस करके बताया कि उन्होंने जो जो मांग उद्धव ठाकरे कांग्रेस के नाना पटोले और शरद… pic.twitter.com/058Rvg4WNU
— ठा. प्रदीप कुमार सिंह (@pradeepthakur_4) November 13, 2024
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯ್ತು. ಇದಕ್ಕಾಗಿ ನಾವು ವೈರಲ್ ಪೋಸ್ಟ್ಗೆ ಸಂಬಂಧಿಸಿದಂತೆ ಯಾವುದಾದರೂ ರಾಷ್ಟ್ರೀಯ ಅಥವಾ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆಯೇ ಎಂದು ಅಧಿಕೃತ ವರದಿಗಳಿಗಾಗಿ ಹುಡುಕಾಟವನ್ನು ನಡೆಸಿದೆವು. ಆದರೆ ಈ ಕುರಿತು ಯಾವುದೇ ಸುದ್ದಿಗಳು ಕಂಡುಬಂದಿಲ್ಲ. ಒಂದು ವೇಳೆ ಈ ಪೋಸ್ಟ್ ನಿಜವಾಗಿದ್ದರೆ ಈ ಕುರಿತು ಹಲವು ಮಾಧ್ಯಮಗಳು ವರದಿಯನ್ನು ಮಾಡಬೇಕಿತ್ತು. ಹಾಗಾಗಿ ವೈರಲ್ ಪೋಸ್ಟ್ ಹಲವು ಅನುಮಾನಗಳಿಗೆ ಕಾರಣವಾಗಿದೆ

ಇನ್ನು ವೈರಲ್ ಪೋಸ್ಟ್ನ ಪ್ರಕಾರ ರಾಷ್ಟ್ರೀಯ ಉಜಾಲ ಈ ಲೇಖನವನ್ನು ಪ್ರಕಟಿಸಿದೆ ಎನ್ನಲಾಗಿತ್ತು. ಹೀಗಾಗಿ ವಿವಿಧ ಕೀ ವರ್ಡ್ಗಳನ್ನು ಬಳಸಿ ರಾಷ್ಟ್ರೀಯ ಉಜಾಲ ವೆಬ್ಸೈಟ್ನಲ್ಲಿ ವೈರಲ್ ಸುದ್ದಿಗಾಗಿ ಹುಡುಕಾಟವನ್ನು ನಡೆಸಿದೆವು. ಆದರೆ ರಾಷ್ಟ್ರೀಯ ಉಜಾಲದ ವೆಬ್ಸೈಟ್ನಲ್ಲಿ ಯಾವುದೇ ರೀತಿಯಾದ ಅಧಿಕೃತ ವರದಿಗಳು ಕಂಡುಬಂದಿಲ್ಲ.

ಈ ಬಗ್ಗೆ ಇನ್ನಷ್ಟು ಹುಡುಕಾಟವನ್ನು ನಡೆಸಿದಾಗ ರಾಷ್ಟ್ರೀಯ ಉಜಾಲ ಅವರ ಫೇಸ್ಬುಕ್ ಪೋಸ್ಟ್ವೊಂದು ಕಂಡುಬಂದಿದೆ. ಇದರಲ್ಲಿ ರಾಷ್ಟ್ರೀಯ ಉಜಾಲ ಪತ್ರಿಕೆಯ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ನಕಲಿ ಸುದ್ದಿ ತುಣುಕುಗಳನ್ನು ಹಂಚಿಕೊಳ್ಳಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದು, ಪ್ರಣವ್ ಮತ್ತು ಅಂಕಿತ ಪಠಾಕ್ ಎಂಬ ವರದಿಗಾರರಿಗೆ ಮತ್ತು ರಾಷ್ಟ್ರೀಯ ಉಜಾಲ ಪತ್ರಿಕೆಗೆ ಯಾವುದೇ ರೀತಿಯಾದ ಸಂಬಂಧವಿಲ್ಲ ಎಂದು ಈ ಪೋಸ್ಟ್ನಲ್ಲಿ ದೃಢಪಡಿಸಲಾಗಿದೆ.

ಇನ್ನಷ್ಟು ಹುಡುಕಾಟವನ್ನು ನಡೆಸಿದಾಗ 19 ನವೆಂಬರ್ 2024 ರಂದು ಮೌಲಾನಾ ಸಜ್ಜದ್ ನೊಮಾನಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ಪೋಸ್ಟ್ವೊಂದು ಕಂಡುಬಂದಿದೆ. ಇದರಲ್ಲಿ ಅವರು ತಾವು ಮಹಾ ವಿಕಾಸ್ ಅಘಾಡಿಗೆ ಯಾವುದೇ ಬೇಡಿಕೆಗಳನ್ನು ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದು, ಮಾಧ್ಯಮದ ಕೆಲವು ಸ್ನೇಹಿತರು ಮತ್ತು ಕೆಲವು ಕೋಮುವಾದಿಗಳು ನಾನು ಉಲಾಮ ಮಂಡಳಿ ಅಥವಾ ಕೌನ್ಸಿಲ್ನೊಂದಿಗೆ ಸಂಬಂಧ ಹೊಂದಿದ್ದೇನೆ ಎಂದು ಹೇಳುತ್ತಿದ್ದಾರೆ ಮತ್ತು ನಾನು ಮಹಾ ವಿಕಾಸ್ ಅಘಾಡಿ ಪಕ್ಷಗಳಿಗೆ 17 ಬೇಡಿಕೆಗಳೊಂದಿಗೆ ಪತ್ರ ಬರೆದಿದ್ದೇನೆ ಎಂದು ಹೇಳುತ್ತಿದ್ದಾರೆ. ಆದರೆ ನಾನು ಯಾವುದೇ ಉಲಾಮ ಮಂಡಳಿ ಅಥವಾ ಮಂಡಳಿಯ ಅಧ್ಯಕ್ಷ ಅಥವಾ ಸದಸ್ಯನಲ್ಲ. ನಾನು ಅಂತಹ ಯಾವುದೇ ಪತ್ರವನ್ನು ಬರೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
मीडिया के कुछ मित्र और कुछ कम्युनल लोग मुझे किसी उलमा बोर्ड या काउंसिल से जोड़ रहे हैं और कह रहे हैं के मैं ने कोई 17 मांगों वाला पत्र महा विकास आघाड़ी की पार्टियों को लिखा था।
मैं न किसी उलमा बोर्ड या काउंसिल का प्रेसिडेंट या मेंबर नही हूं, न मैं ने ऐसा कोई खत लिखा है। pic.twitter.com/oewZTjj86Q
— Sajjad Nomani (@msajjadnomani) November 19, 2024
ಹೀಗಾಗಿ ಈ ಎಲ್ಲಾ ಅಂಶಗಳನ್ನು ಪರಿಶೀಲಿಸಿದಾಗ ರೈತರ ಭೂಮಿಯನ್ನು ವಕ್ಫ್ ಮಂಡಳಿಗೆ ವರ್ಗಾಯಿಸಲು ಮೌಲಾನಾ ಸಜ್ಜದ್ ನೊಮಾನಿ ಮಹಾ ವಿಕಾಸ್ ಆಘಾಡಿಗೆ ಬೇಡಿಕೆಯನ್ನು ಇಟ್ಟಿದ್ದಾರೆ ಎಂಬುದು ಸುಳ್ಳಾಗಿದೆ. ಹಾಗೆಯೇ ರಾಷ್ಟ್ರೀಯ ಉಜಾಲ ಹೆಸರಿನಲ್ಲಿ ಹಂಚಿಕೊಳ್ಳಲಾಗುತ್ತಿರುವ ಲೇಖನವೂ ಕೂಡ ನಕಲಿಯಾಗಿದೆ. ಈ ಕಾರಣದಿಂದ ವೈರಲ್ ಪೋಸ್ಟ್ ಅನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿ ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check : ದಕ್ಷಿಣ ಆಫ್ರಿಕಾದಲ್ಲಿ 6000 ವರ್ಷ ಹಳೆಯ ಶಿವಲಿಂಗ ಪತ್ತೆಯಾಗಿದೆ ಎಂಬುದು ಸುಳ್ಳು

