ಮಾಂಸಹಾರ

Fact Check: ಮಾಂಸಹಾರಕ್ಕಿಂತ ಸಸ್ಯಹಾರದಲ್ಲಿ ಹೆಚ್ಚಿನ ಪ್ರೋಟಿನ್‌ ಸಿಗುತ್ತದೆ ಎಂಬ ಜಾನ್ ಅಬ್ರಹಾಂ ಹೇಳಿಕೆ ದಾರಿತಪ್ಪಿಸುವಂತಿದೆ

ನಾಳೆಯಿಂದ ಮೂರು ದಿನಗಳ ಕಾಲ ೮೨ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯದಲ್ಲಿ ನಡೆಯಲಿದೆ. ಈ ಬಾರಿ ಸಮ್ಮೇಳನದಲ್ಲಿ ಸಸ್ಯಹಾರ ಮತ್ತು ಮಾಂಸಹಾರ‌ ಊಟಕ್ಕೆ ಸಂಬಂಧಿಸಿದಂತೆ ಸಾಕಷ್ಟು ವಿವಾದ ಏರ್ಪಟ್ಟಿದೆ. ಸಸ್ಯಹಾರ ಮತ್ತು ಮಾಂಸಹಾರ ಎರಡೂ ಊಟಗಳನ್ನು ಬಡಿಸಬೇಕು ಎಂದು ಮಂಡ್ಯ ಸೇರಿದಂತೆ ರಾಜ್ಯದ ಅನೇಕ ಸಂಘಟನೆಗಳು ಒತ್ತಾಯಿಸಿವೆ. “ಸಸ್ಯಹಾರ ಶ್ರೇಷ್ಠ ಮತ್ತು ಮಾಂಸಹಾರ ಕನಿಷ್ಠ” ಎಂಬ ತಪ್ಪು ತಿಳುವಳಿಕೆಯನ್ನು ಹೋಗಲಾಡಿಸಲು ಮಾಂಸಹಾರ ನೀಡಬೇಕು ಎಂದು ಒತ್ತಾಯಿಸಲಾಗುತ್ತಿದೆ ಎಂದು ಮಾಂಸಹಾರಕ್ಕೆ ಬೇಡಿಕೆ  ಇಟ್ಟಿರುವ ಬಹುತೇಕರ ಅಭಿಪ್ರಾಯವಾಗಿದೆ….

Read More

FACT CHECK : ಕಾಡು ಬಸಳೆ ತಿನ್ನುವುದರಿಂದ ಕಿಡ್ನಿ ಸ್ಟೋನ್‌ ಕರಗುತ್ತದೆ ಎಂಬುದು ಸುಳ್ಳು

ಕಾಡು ಬಸಳೆ ಎಲೆಗಳಿಗೆ ಕಿಡ್ನಿ ಸ್ಟೋನ್‌ ಕರಗಿಸುವ ಶಕ್ತಿ ಇದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋಗಳನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. “ಕಾಡು ಬಸಳೆ ಸೊಪ್ಪಿನ ಚಮತ್ಕಾರ ಗಲಾ ಬ್ಲಾಡರ್ ಸ್ಟೋನ್‌, ಕಿಡ್ನಿ ಸ್ಟೋನ್‌ಗಳನ್ನು ಆಪರೇಷನ್‌ ಮಾಡಿಸದೇ ಕರಗಿ ಹೋಗುತ್ತೆ. ರಕ್ತ ಶುದ್ಧಿ, ಕಣ್ಣು ಉರಿ, ಪಾದ ಉರಿ, ಕಪ್ಪು ಕಲೆ, ಪಿಂಪಲ್‌ ಸಮಸ್ಯೆಯನ್ನೂ ಕಾಡುಬಸಳೆ ನಿವಾರಿಸುತ್ತದೆ” ಎಂಬ ಶೀರ್ಷಿಕೆಯೊಂದಿಗೆ ಫೋಟೋವೊಂದು ವೈರಲ್‌ ಆಗುತ್ತಿದೆ.   ಇದಲ್ಲದೇ, ಕನ್ನಡ  ವೆಬ್‌ಪೋರ್ಟಲ್‌ tv9ಕನ್ನಡ  “Miracle Plant: ಕಾಡು ಬಸಳೆಯ ಆರೋಗ್ಯಯುತ ಪ್ರಯೋಜನಗಳ…

Read More

FACT CHECK I ಟಾಟಾ ಮೆಮೋರಿಯಲ್ ಆಸ್ಪತ್ರೆ ಟ್ಯಾಪಿಂಗ್ ವ್ಯಾಯಾಮದ ವಿಡಿಯೋ ಬಿಡುಗಡೆ ಮಾಡಿದೆ ಎಂಬುದು ಸುಳ್ಳು

ಮುಂಬೈನ ಟಾಟಾ ಮೆಮೋರಿಯಲ್ ಆಸ್ಪತ್ರೆಯ ವೈದ್ಯೆಯೊಬ್ಬರು ತಲೆಯ ಮೇಲೆ ಮೆಲುವಾಗಿ ತಟ್ಟಿಕೊಳ್ಳುವ ಹಾಗೂ ಟ್ಯಾಪಿಂಗ್‌ ವ್ಯಾಯಮ ಮಾಡುವ ಬಗ್ಗೆ ಹೇಳುತ್ತಿರುವ ವಿಡಿಯೋ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್‌ ಆಗುತ್ತಿದೆ. ವೈರಲ್‌ ವಿಡಿಯೋದಲ್ಲಿ “ಟಾಟಾ ಮೆಮೋರಿಯಲ್ ಆಸ್ಪತ್ರೆಯಿಂದ ಈ ವಿಡಿಯೋ ಬಿಡುಗಡೆ ಮಾಡಲಾಗಿದ್ದು ಎಲ್ಲರೂ ಮೇಲಿನ ವಿಡಿಯೋವನ್ನು ಡಿಲೀಟ್ ಮಾಡದೆ ನೋಡಬೇಕಾಗಿ ವಿನಂತಿ. ಇದು ಬಹಳ ಮುಖ್ಯವಾದ ವಿಷಯ. ಇದನ್ನು ನಿಮ್ಮ ಇತರ ಗುಂಪುಗಳಿಗೂ ಹಂಚಿಕೊಳ್ಳಬೇಕಾಗಿ ವಿನಂತಿ” ಎಂಬ ತಲೆ ಬರಹವನ್ನು ನೀಡಲಾಗಿದೆ.  ಜನರು ಇದನ್ನು ಟಾಟಾ…

Read More

FACT CHECK : ಆಹಾರ ಪದ್ಧತಿಯಿಂದ ಪತ್ನಿಯ ಕ್ಯಾನ್ಸರ್ ಗುಣವಾಗಿದೆ ಎಂದ ಕ್ರಿಕೆಟರ್ ಸಿಧು ಹೇಳಿಕೆಯನ್ನು ತಳ್ಳಿ ಹಾಕಿದ ವೈದ್ಯಕೀಯ ತಜ್ಞರು

“ತನ್ನ ಪತ್ನಿ ನವಜೋತ್ ಕೌರ್ ಸರಳ ಆಹಾರ ಪದ್ಧತಿ ಮತ್ತು ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಮೂಲಕ ಕೇವಲ 40 ದಿನಗಳಲ್ಲಿ ಸ್ಟೇಜ್-4 ‌ ಕ್ಯಾನ್ಸರ್‌ನ್ನು ಮಣಿಸಿದ್ದಾರೆ” ಎಂದು ಮಾಜಿ ಕ್ರಿಕೆಟಿಗ ಮತ್ತು ರಾಜಕಾರಣಿ ನವಜೋತ್ ಸಿಂಗ್ ಸಿಧು ಶುಕ್ರವಾರ ಹೇಳಿದ್ದಾರೆ . ವೈದ್ಯರು ತನ್ನ ಪತ್ನಿ ಬದುಕುಳಿಯುವ ಬಗ್ಗೆ ಯಾವುದೇ ಭರವಸೆಯನ್ನು ನೀಡದೇ ಕೈಚೆಲ್ಲಿದ್ದರು ಎಂದೂ ಸಿಧು ಹೇಳಿಕೆ ನೀಡಿದ್ದರು. ಕ್ಯಾನ್ಸರ್ ಚಿಕಿತ್ಸೆಗೆ ಕೋಟಿಗಟ್ಟಲೆ ಖರ್ಚು ಮಾಡಬೇಕೆಂದು ಜನರು ಹೇಳುತ್ತಾರೆ. ಆದರೆ, ಬೇವಿನ ಎಲೆಗಳಿಗೆ ಎಷ್ಟು ಖರ್ಚಾಗುತ್ತದೆ ಎಂದು…

Read More

Fact Check I ನಾನ್ ಸ್ಟಿಕ್‌ ಪಾತ್ರೆಗಳು ಆರೋಗ್ಯಕ್ಕೆ ಹಾನಿಕಾರಕವೇ? ಇಲ್ಲಿದೆ ಸಂಪೂರ್ಣ ಮಾಹಿತಿ

ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುವ ರೀಲ್ಸ್‌ ಹಾಗೂ ಕೆಲವು ಸುದ್ದಿಗಳ ಶೀರ್ಷಿಕೆಗಳ ಪ್ರಕಾರ ಟೆಫ್ಲಾನ್‌ ಅಥವಾ ನಾನ್‌ ಸ್ಟಿಕ್‌ ಪಾತ್ರೆಗಳಲ್ಲಿ ಆಹಾರ ಬೇಯೀಸಿ ಸೇವಿಸುವುದು ಆರೋಗ್ಯಕ್ಕೆ ಹಾನಿಕಾರಕ ಎಂಬ ಪೋಸ್ಟ್‌ಗಳು ವ್ಯಾಪಕವಾಗಿ ಹರಿದಾಡುತ್ತಿವೆ. “ನಾನ್‌ಸ್ಟಿಕ್‌ ಪಾತ್ರೆಗಳನ್ನು ಬಳಸುವುದರಿಂದ ನಿಮ್ಮ ಮಕ್ಕಳ ದೇಹದಲ್ಲಿ ರಸಾಯನಿಕ ಅಂಶಗಳು ಜೀವನ ಪೂರ್ತಿ ಉಳಿದುಕೊಳ್ಳಬಹುದು. ಈ ಪಾತ್ರೆಗಳನ್ನು ರಸಾಯನಿಕ ಬಳಸಿ ತಯಾರಿಸುವುದರಿಂದ ಇವುಗಳು  ಕ್ಯಾನ್ಸರ್‌ಕಾರಕವಾಗಬಹುದು, ಹಾರ್ಮೋನ್ಸ್‌ ಸಮಸ್ಯೆಗಳಿಗೆ ಹಾಗೂ  ಸಂತಾನಾಭಿವೃದ್ಧಿಗೆ ಬಾಧಕವಾಗಬಹುದು”  ಎಂದು ಹೇಳುವ ಯೂಟ್ಯೂಬ್‌ ವಿಡಿಯೋವೊಂದರಲ್ಲಿ ಹೇಳಲಾಗಿದೆ. Instagram ರೀಲ್‌ವೊಂದರಲ್ಲಿ , ನಾನ್…

Read More

Fact Check: ರಕ್ತದಾನದ ಕುರಿತು ಜನರಲ್ಲಿರುವ ತಪ್ಪು ಕಲ್ಪನೆಗಳು

ಆರೋಗ್ಯವಂತ ವಯಸ್ಕರು ನಿಯಮಿತವಾಗಿ ರಕ್ತದಾನ ಮಾಡಬಹುದು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ. ಆದರೂ ಸಹ ರಕ್ತದಾನದ ಕುರಿತು ಅನೇಕ ಜನಗಳಲ್ಲಿ ಸರಿಯಾದ ಅರಿವು ಕಡಿಮೆ ಮತ್ತು ರಕ್ತದಾನ ಮಾಡುವುದಕ್ಕೆ ಜನರು ಮುಂದೆ ಬರುವುದಿಲ್ಲ. ರಕ್ತದಾನ ಮಾಡಲು ವಯಸ್ಸು ಮುಖ್ಯವಲ್ಲ, ಆರೋಗ್ಯದ ಸ್ಥಿತಿಯು ನೀವು ರಕ್ತದಾನಿಯಾಗಲು ಅರ್ಹರೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸುತ್ತದೆ. ರಕ್ತದಾನವನ್ನು ಜೀವದಾನಕ್ಕೆ ಸಮೀಕರಿಸಲಾಗುತ್ತದೆ. ನಿಮ್ಮ ರಕ್ತವನ್ನು ದಾನ ಮಾಡುವುದರಿಂದ ಒಂದು ಜೀವವನ್ನು ಉಳಿಸಬಹುದು, ಅಥವಾ ನಿಮ್ಮ ರಕ್ತವನ್ನು ಅದರ ಘಟಕಗಳಾಗಿ ಬೇರ್ಪಡಿಸಿದರೆ, ಕೆಂಪು ಜೀವಕೋಶಗಳು,…

Read More
ನಿತಿನ್‌ ಗಡ್ಕರಿ

Fact Check: ನಿತಿನ್ ಗಡ್ಕರಿಯವರು ಮನೆಯಿಂದ 60 ಕಿ.ಮೀ. ದೂರದೊಳಗೆ ಟೋಲ್‌ ಬೂತ್ ಇದ್ದರೆ ಟೋಲ್‌ ಶುಲ್ಕ ಕಟ್ಟುವಂತಿಲ್ಲ ಎಂದು ಹೇಳಿಲ್ಲ

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಿಮ್ಮ ಮನೆಯಿಂದ 60 ಕಿ.ಮೀ. ದೂರದೊಳಗೆ ಯಾವುದೇ ಟೋಲ್‌ ಬೂತ್ ಇದ್ದರೂ ನೀವು ಟೋಲ್‌ ಶುಲ್ಕ ಕಟ್ಟುವಂತಿಲ್ಲ ಎಂದು ಕೇಂದ್ರ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆಂಬ ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇದನ್ನು ಅನೇಕರು ಈ ಸಂದೇಶವನ್ನು ನಿಜವೆಂದು ನಂಬಿ ತಮ್ಮ ಸಾಮಾಜಿಕ ಮಾಧ್ಯಮಗಳ ಖಾತೆಗಳಲ್ಲಿ ಮತ್ತು ವಾಟ್ಸಾಪ್‌ಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಫೇಸ್ಬುಕ್ ಬಳಕೆದಾರ ನಂದಲಾಲ್ ಗುರ್ಜರ್ ಕಸನಾ (ಆರ್ಕೈವ್…

Read More
Love Marriage

ಪ್ರೇಮ ವಿವಾಹ ಅಥವಾ ನ್ಯಾಯಾಲಯ ವಿವಾಹಗಳಿಗೆ ಪೋಷಕರ ಅನುಮತಿ ಕಡ್ಡಾಯ ಎಂದು ಸುಪ್ರೀಂ ಕೋರ್ಟ್ ಹೇಳಿಲ್ಲ

ಭಾರತದಲ್ಲಿ ಪ್ರೇಮ ವಿವಾಹಗಳು ಇಂದಿಗೂ ಸವಾಲಾಗಿಯೇ ಪರಿಣಮಿಸುತ್ತಿವೆ. ಜಾತಿಗ್ರಸ್ಥ ದೇಶವಾದ ನಮ್ಮಲ್ಲಿ ಅಂತರ್ಜಾತಿ ಅಥವಾ ಅಂತರ್ಧಮಿಯ ವಿವಾಹವಾದರೆಂತೂ ಮನೆಯಿಂದ ತಮ್ಮ ಕುಲದಿಂದ ಹೊರಗಿಡುವ, ಮರ್ಯಾದೆ ಹತ್ಯೆಯಂತಹ ಅಮಾನುಷ, ಅಮಾನವೀಯ ನಡೆಗಳು ಇಂದಿಗೂ ನಮ್ಮ ಸಮಾಜವನ್ನು ಬಾದಿಸುತ್ತಿವೆ. ಇಂದಿಗೂ ತಾವು ಪ್ರೀತಿಸಿದ ಯುವಕ/ಯುವತಿಯನ್ನು ಮದುವೆಯಾಗುವ ಸ್ವತಂತ್ರ್ಯ ನಮ್ಮ ದೇಶದ ಯುಪೀಳಿಗೆಗೆ ಕಷ್ಟಸಾಧ್ಯವಾಗಿದೆ. ಇತ್ತೀಚೆಗೆ ನಮ್ಮ ಸಂವಿಧಾನ ಕಲ್ಪಿಸಿರುವ ಸ್ವೆಷಲ್ ಮ್ಯಾರೆಜ್ ಆಕ್ಟ್‌ ಕೂಡ ಕೆಲವರ ಬಾಯಲ್ಲಿ “ಲವ್‌ ಜಿಹಾದ್” ಎಂದು ಕರೆಸಿಕೊಳ್ಳುತ್ತಿದೆ. ಇಂತಹ ಸಂದರ್ಭದಲ್ಲಿ ಪ್ರೇಮ ವಿವಾಹಗಳ ಕುರಿತು…

Read More