“ನಂಜನಗೂಡಿನಲ್ಲಿ ಅಂಧಕಾಸುರ ಸಂಹಾರದ ದಿನಾಚರಣೆಯ ಸಂದರ್ಭದಲ್ಲಿ ಪಾರ್ವತಿ-ಶಿವನ ಉತ್ಸವ ಮೂರ್ತಿ ಮೆರವಣಿಗೆಯ ವೇಳೆ ಜಿಹಾದಿಗಳು ಮೂರ್ತಿಗೆ ನೀರು ಎರಚಿ ಅವಮಾನಿಸಿದರು. ಹಿಂದೂಗಳು ಎಚ್ಚೆತ್ತುಕೊಳ್ಳಬೇಕು” ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಆದರೆ ಈ ಸುದ್ದಿಯ ಸತ್ಯಾಸತ್ಯತೆಯನ್ನು ಪರಿಶೀಲಿಸದೆ ಸಾಕಷ್ಟು ಮಂದಿ ಇದೇ ಸುದ್ದಿಯನ್ನು ನಿಜವೆಂದು ಭಾವಿಸಿ ಹಂಚಿಕೊಳ್ಳುತ್ತಿದ್ದಾರೆ.
ನಂಜನಗೂಡು ಶ್ರೀ ಕಂಟೇಶ್ವರನಿಗೆ ಅಪಮಾನ
ಕೆಲ ಜಿಹಾದಿಗಳು ಎಂಜಲು ನೀರು ಎರಚಿ ಅಪಮಾನಿಸಿದ್ದಾರೆ ಅಲ್ಲಿನ ಹಿಂದೂಗಳು ಇನ್ನಾ ಬದುಕಿದ್ದೀರಾ 😡😡😡 pic.twitter.com/r87R9YNtAF
— wHatNext 🚩 (@raghunmurthy07) December 29, 2023
ಇದರಲ್ಲಿ ಮತ್ತೊಂದು ದುರಂತವೆಂದರೆ ವಿಧಾನಸಭೆಯ ಶಾಸಕರಾಗಿರುವ ಬಸನಗೌಡ ಪಾಟೀಲ್ ಯತ್ನಾಳ್ ಅವರು ಕೂಡ ಜವಬ್ದಾರಿಯುತ ಸ್ಥಾನದಲ್ಲಿದ್ದು ಈ ಸುದ್ದಿಯ ನೈಜ ವಿಚಾರವನ್ನು ತಿಳಿಯದೆ ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ.
The act of expressing hatred towards the deity is truly abhorrent and unacceptable. This behavior warrants the strongest disapproval, and those responsible must be held accountable for disrespecting the Hindu religion and the revered Nanjundeshwara swamy, who holds immense… https://t.co/HoxLkrbybA
— Basanagouda R Patil (Yatnal) (@BasanagoudaBJP) December 29, 2023
ಫ್ಯಾಕ್ಟ್ಚೆಕ್
ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಕನ್ನಡ ಫ್ಯಾಕ್ಟ್ಚೆಕ್ ತಂಡ ಈ ಘಟನೆಯ ಕುರಿತು ಪರಿಶೀಲನೆ ನಡೆಸಲು ಪ್ರಾರಂಭ ಮಾಡಿತ್ತು. ಈ ವೇಳೆ ಅಂತರ್ಜಾಲದಲ್ಲಿ ಈ ಕುರಿತು “ನಂಜುಂಡೇಶ್ವರ ಉತ್ಸವ ಮೂರ್ತಿಗೆ ಎಂಜಲು ನೀರು ಎರಚಿದ ಆರೋಪ- ಐವರ ವಿರುದ್ಧ ದೂರು” ಎಂಬ ವರದಿಯೊಂದು ಪಬ್ಲಿಕ್ ಟಿವಿ ವೆಬ್ತಾಣದಲ್ಲಿ ಕಂಡು ಬಂದಿದೆ.
ಇನ್ನು ಇದೇ ರೀತಿಯ ಹಲವು ವರದಿಗಳು ಕೂಡ ಕಂಡು ಬಂದಿವೆ. ಆ ವರದಿಗಳಲ್ಲಿ ಅಂಧಕಾಸುರ ಸಂಹಾರ ದಿನದಂದು ರಾಕ್ಷಸನ ಫ್ಲೆಕ್ಸ್ ಹಾಕುತ್ತಿದ್ದರು. ಈ ಬಾರಿ ರಂಗೋಲಿ ಬಿಡಿಸಲಾಗಿತ್ತು. ಉತ್ಸವಮೂರ್ತಿ ಹೊತ್ತವರು ರಂಗೋಲಿಯನ್ನು ತುಳಿದು ರಾಕ್ಷಸನ ಸಂಹಾರ ಮಾಡಿದ್ದಾಗಿ ಘೋಷಿಸುವುದು ಉದ್ದೇಶವಾಗಿತ್ತು. ಆದರೆ ಈ ಬಾರಿ ಅಂಧಕಾಸುರನ ಬದಲು ಮಹಿಷಾಸುರನ ರಂಗೋಲಿ ಬಿಡಿಸಿದ್ದಕ್ಕೆ ದಲಿತ ಸಂಘರ್ಷ ಸಮಿತಿ ಸದಸ್ಯರು ವಿರೋಧಿಸಿದ್ದರು. ಆದರೆ ದೇವಸ್ಥಾನದ ಸಿಬ್ಬಂದಿ ಮೆರವಣಿಗೆ ಮುಂದುವರೆಸಿದ್ದರು. ಆಗ ಡಿಎಸ್ಎಸ್ ಸದಸ್ಯರು ನೀರು ಎರಚಿದ್ದರು.
Miscreants throw water mixed with saliva on to Nanjangud Shri Nanjundeshwara Swami Utsavamurti. pic.twitter.com/mNV2Tvskd4
— ನಿರ್ಭಾವುಕ (@nirbhaavuka) December 29, 2023
ಎಂದು ತಿಳಿದು ಬಂದಿದೆ. ಆದರೆ ಈ ವಿಚಾರವನ್ನು ತಿಳಿಯದೆ ಕೆಲ ಕಿಡಿಗೇಡಿಗಳು ದೇವರ ಉತ್ಸವ ಮೂರ್ತಿಯ ಮೇಲೆ ಜಿಹಾದಿಗಳು ಎಂಜಲು ನೀರು ಎರಚಿದ್ದಾರೆ ಎಂದು ಸುಳ್ಳು ಸುದ್ದಿಗಳನ್ನು ಹರಡಲು ಮುಂದಾಗಿದ್ದಾರೆ.
ಈ ಸುದ್ದಿಯನ್ನು ಓದಿ : Fact Check | ವಿಠ್ಠಲ್, ವಿಠ್ಠಲ್’ ಮಂತ್ರ ಪಠಿಸುವುದರಿಂದ ಹೃದಯಾಘಾತವನ್ನು ತಡೆಯಲಾಗುವುದಿಲ್ಲ
ವಿಡಿಯೋ ನೋಡಿ : Fact Check | ವಿಠ್ಠಲ್, ವಿಠ್ಠಲ್’ ಮಂತ್ರ ಪಠಿಸುವುದರಿಂದ ಹೃದಯಾಘಾತವನ್ನು ತಡೆಯಲಾಗುವುದಿಲ್ಲ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ