Fact Check: ಬೆಂಗಳೂರಿನಲ್ಲಿ ಲಿಂಗಾಯತ ಕ್ಯಾಥೋಲಿಕ್ ಚರ್ಚ್ ಸ್ಥಾಪಿಸಲಾಗಿದೆ ಎಂಬುದು ಸುಳ್ಳು

ಲಿಂಗಾಯತ

ಕ್ರೈಸ್ತ ಧರ್ಮದ ಮತಾಂತರದ ಕುರಿತು ಆಗಾಗ ಚರ್ಚೆಗಳು ನಡೆಯುತ್ತಲೇ ಇರುತ್ತದೆ. ಆದರೆ ಅದನ್ನೇ ಹಿನ್ನಲೆಯಾಗಿಟ್ಟುಕೊಂಡು ಇತ್ತೀಚೆಗೆ ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ಸಾಕಷ್ಟು ಸುಳ್ಳು ಆರೋಪಗಳನ್ನು ಹೊರಿಸಿ ಟೀಕಿಸುವುದು ಮತ್ತು ದ್ವೇಷಿಸುವುದು ಹೆಚ್ಚಾಗುತ್ತಿದೆ.

ಈಗ, “ನಮ್ಮ ಕರ್ಮ ಕ್ರೈಸ್ತರು ಈ ರೀತಿ ಹಿಂದೂ ಧರ್ಮದ ಎಲ್ಲಾ ಜಾತಿಗಳನ್ನು ಬಳಕೆ ಮಾಡಿಕೊಂಡು ಅವರ ಧರ್ಮಕ್ಕೆ ಸೇರಿಸಿಕೊಳ್ಳುತ್ತಿದ್ದರೆ. ಏನು ಹೇಳೋದು ಸ್ವಾಮಿ, ಅಲ್ಪ ಸಂಖ್ಯಾತರ ಬಾಧೆ ಒಂದು ಕಡೆ ಆದರೆ ಇವರು ಶಾಂತಿಯುತವಾಗಿ ಹರಡಿಕೊಳ್ಳಲು ಎಲ್ಲಾ ರೀತಿಯ ದಾರಿಗಳನ್ನು ನಿಧಾನವಾಗಿ ನಿಶ್ಯಬ್ದವಾಗಿ ನಡೆಸುತ್ತಿದ್ದಾರೆ.” ಎಂಬ ತಲೆಬರಹಗಳೊಂದಿಗೆ ‘ಲಿಂಗಾಯತ ಕ್ಯಾಥೋಲಿಕ್ ಚರ್ಚ್’ ಹೆಸರಿನ ಚರ್ಚ್‌ನ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ. ಚರ್ಚ್‌ ಹೆಸರಿನ ಕೆಳಗೆ “Estd: April 16, 2018, ಬೆಂಗಳೂರು, ಕರ್ನಾಟಕ” ಎಂದಿದೆ.

ಈ ಚಿತ್ರವು ಕಳೆದ ನಾಲ್ಕೈದು ವರ್ಷಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು ಸಾಕಷ್ಟು ಜನ ಬಲಪಂಥೀಯ ಬೆಂಬಲಿಗರು ಇದನ್ನು ಹಂಚಿಕೊಂಡಿದ್ದಾರೆ.  

ಫ್ಯಾಕ್ಟ್‌ಚೆಕ್: ಈ ಚಿತ್ರವನ್ನು ಪೋಟೋಶಾಪ್ ಮಾಡಲಾಗಿದೆ. ಕರ್ನಾಟಕದಲ್ಲಿ ಎಲ್ಲಿಯೂ ಲಿಂಗಾಯತ ಕ್ಯಾಥೋಲಿಕ್ ಚರ್ಚ್ ಇರುವುದಕ್ಕೆ ಪುರಾವೆಗಳಿಲ್ಲ. 2018ರ ಮಾರ್ಚ್‌ನಲ್ಲಿ ಲಿಂಗಾಯತರನ್ನು ಧಾರ್ಮಿಕ ಅಲ್ಪಸಂಖ್ಯಾತರೆಂದು ಘೋಷಿಸುವ ಹಿಂದಿನ ಸಿದ್ದರಾಮಯ್ಯ ಸರ್ಕಾರದ ನಿರ್ಧಾರವು ವಿವಾದಾಸ್ಪದವಾಗಿತ್ತು. ಸರ್ಕಾರದ ಕ್ರಮದ ನಂತರ ಈ ಚಿತ್ರವನ್ನು ಮೊದಲು ಹಂಚಿಕೊಳ್ಳಲಾಗಿದೆ. 2016ರಲ್ಲಿ ಗುಜರಾತ್ ಸರ್ಕಾರ ಜೈನರಿಗೂ ಅಲ್ಪಸಂಖ್ಯಾತ ಸ್ಥಾನಮಾನ ನೀಡಿತ್ತು. ಆದಾಗ್ಯೂ, ಒಂದು ಧರ್ಮಕ್ಕೆ ಅಲ್ಪಸಂಖ್ಯಾತ ಸ್ಥಾನಮಾನದ ಅನುಸಾರವಾಗಿ ಒಂದು ಧರ್ಮವನ್ನು ಕ್ಯಾಥೋಲಿಕ್ ಪಂಥವೆಂದು ಘೋಷಿಸುವುದಕ್ಕೆ ಸಮನಾಗಿರುವುದಿಲ್ಲ. ಆದ್ದರಿಂದ, ‘ಲಿಂಗಾಯತ ಕ್ಯಾಥೋಲಿಕ್ ಚರ್ಚ್’ ಎಂದು ಹೇಳಿಕೊಳ್ಳುವ ಚಿತ್ರವು ನಕಲಿಯಾಗಿದೆ.

ನಾವು ಈ ಚಿತ್ರವನ್ನು ರಿವರ್ಸ್‌ ಇಮೇಜ್‌ನಲ್ಲಿ ಹುಡುಕಿದಾಗ, ‘ಬ್ಯೂಟಿಫುಲ್ ಇಂಡಿಯನ್ ಚರ್ಚುಗಳು’ ಎಂಬ ಬ್ಲಾಗ್‌ ಒಂದರಲ್ಲಿ ಇದೇ ಚಿತ್ರವು ಕಂಡು ಬಂದಿದೆ. ಪ್ರಸ್ತುತ ಏಪ್ರಿಲ್ 2018 ರಲ್ಲಿ ಬೆಂಗಳೂರಿನಲ್ಲಿ ಸ್ಥಾಪಿಸಲಾದ ‘ಲಿಂಗಾಯತ ಕ್ಯಾಥೋಲಿಕ್ ಚರ್ಚ್’ ಎಂದು ಹಂಚಿಕೊಳ್ಳಲಾಗುತ್ತಿರುವ ಚಿತ್ರವು ವಾಸ್ತವವಾಗಿ ಮಹಾರಾಷ್ಟ್ರದ ಪಶ್ಚಿಮ ಭಾಗದಲ್ಲಿರುವ ಥಾಣೆ ಜಿಲ್ಲೆಯ ಕರಾವಳಿ ಪಟ್ಟಣವಾದ ದಹಾನುದಲ್ಲಿನ ಚರ್ಚ್ ಆಗಿದೆ. ಬ್ಲಾಗರ್ ದಹಾನುಗೆ ಭೇಟಿ ನೀಡಿದ ಸಂದರ್ಭದಲ್ಲಿ ಚಿತ್ರವನ್ನು ಕ್ಲಿಕ್ ಮಾಡಿ ಬ್ಲಾಗ್‌ನಲ್ಲಿ ಪೋಸ್ಟ್ ಮಾಡಿದ್ದರು. ಬ್ಲಾಗ್ ಪೋಸ್ಟ್ ದಿನಾಂಕ ಏಪ್ರಿಲ್ 14, 2012. ಮೂಲ ಚಿತ್ರವನ್ನು ಕೆಳಗೆ ನೋಡಬಹುದು.

ಮೇಲಿನ ಚಿತ್ರಗಳಿಂದ ನೋಡಬಹುದಾದಂತೆ, ಚರ್ಚ್ ಅನ್ನು ‘ಅವರ್ ಲೇಡಿ ಆಫ್ ಡೋಲೌರ್ಸ್ ಚರ್ಚ್’ ಎಂದು ಕರೆಯಲಾಗುತ್ತದೆ ಮತ್ತು ‘ಲಿಂಗಾಯತ ಕ್ಯಾಥೋಲಿಕ್ ಚರ್ಚ್’ ಅಲ್ಲ. ಹೆಸರಿನಲ್ಲಿರುವ ಪಠ್ಯವು “ದುಖಿ ಮಾತಾ ಚರ್ಚ್, ದಹಾಣೂ” (ಅನುವಾದ: ದುಖಿ ಮಾತಾ ಚರ್ಚ್, ದಹಾನು).

ದಹಾನು, ಮಹಾರಾಷ್ಟ್ರದ ಚರ್ಚ್‌ನ ಚಿತ್ರವನ್ನು ಫೋಟೊಶಾಪ್ ಮಾಡಿ ಬೆಂಗಳೂರಿನಲ್ಲಿ ಹೊಸದಾಗಿ ಸ್ಥಾಪಿಸಲಾದ ಲಿಂಗಾಯತ ಸಮುದಾಯಕ್ಕೆ ಸೇರಿದ ಚರ್ಚ್ ಎಂದು ಬಿಂಬಿಸಲಾಗಿದೆ, ಇದನ್ನು ಪ್ರತ್ಯೇಕ ಲಿಂಗಾಯತ ಧರ್ಮ ಸ್ಥಾನಮಾನ ಹೋರಾಟವನ್ನು ಟೀಕಿಸುವ ಸಲುವಾಗಿ, ಗ್ಲೋಬಲ್ ಕ್ರಿಶ್ಚಿಯನ್ ಆರ್ಗನೈಸೇಶನ್ ಮತ್ತು ವರ್ಲ್ಡ್ ಇಸ್ಲಾಮಿಕ್ ಆರ್ಗನೈಸೇಶನ್ ಸಹಾಯದಿಂದ ಲಿಂಗಾಯತ ಸಮಸ್ಯೆಯನ್ನು ರೂಪಿಸಲಾಗಿದೆ ಎಂದು ಆರೋಪಿಸಿ ಕರ್ನಾಟಕದ ಸಚಿವ ಎಂ.ಬಿ.ಪಾಟೀಲ್ ಅವರು ಸೋನಿಯಾ ಗಾಂಧಿ ಅವರಿಗೆ ಬರೆದಿರುವ ನಕಲಿ ಪತ್ರವನ್ನು ನಕಲಿ ಸುದ್ದಿ ವೆಬ್‌ಸೈಟ್ ಒಂದನ್ನು ಪೋಸ್ಟ್‌ಕಾರ್ಡ್ ನ್ಯೂಸ್ ಪ್ರಸಾರ ಮಾಡಿತ್ತು. ಅದರೆ ಪತ್ರದಲ್ಲಿ ಉಲ್ಲೇಖಿಸಲಾದ ಎರಡು ಸಂಸ್ಥೆಗಳಲ್ಲಿ ಯಾವುದೂ ಅಸ್ತಿತ್ವದಲ್ಲಿಲ್ಲ. ಈ ಹಿಂದೆ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಸೇರಿದಂತೆ ಹಲವರು ಲಿಂಗಾಯತ ವಿಚಾರದಲ್ಲಿ ಚರ್ಚ್ ಭಾಗಿಯಾಗಿರುವ ಬಗ್ಗೆ ನಕಲಿ ಇಮೇಲ್ ಅನ್ನು ಹಂಚಿಕೊಂಡಿದ್ದರು.

ಆದ್ದರಿಂದ ಬೆಂಗಳೂರಿನಲ್ಲಿ ‘ಲಿಂಗಾಯತ ಕ್ಯಾಥೋಲಿಕ್ ಚರ್ಚ್’ ಸ್ಥಾಪಿಸಲಾಗಿದೆ ಎಂಬುದು ಸುಳ್ಳು ಮತ್ತು ಇದು ಮೂಲ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಕರಾವಳಿ ಪಟ್ಟಣವಾದ ದಹಾನುದಲ್ಲಿನ ಅವರ್ ಲೇಡಿ ಆಫ್ ಡೋಲೌರ್ಸ್ ಚರ್ಚ್ ಆಗಿದೆ.


ಇದನ್ನು ಓದಿ: ಪಾಯಲ್‌ ಕಪಾಡಿಯಾ ಅವರ ಹೆಸರಿನಲ್ಲಿ ನಕಲಿ ಎಕ್ಸ್‌ (ಟ್ವಿಟರ್‌) ಖಾತೆ ಸೃಷ್ಟಿ


ವಿಡಿಯೋ ನೋಡಿ: ದೆಹಲಿಯಲ್ಲಿ ವಿದ್ಯುತ್‌ ಸಬ್ಸಿಡಿ ಸ್ಥಗಿತಗೊಳಿಸಲಾಗಿದೆ ಎಂಬುದು ಸುಳ್ಳು..!


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *