Fact Check: ಕಾಂಗ್ರೆಸ್‌ ಸರ್ಕಾರವನ್ನು ಹೈಕೋರ್ಟ್‌ ತರಾಟೆಗೆ ತೆಗೆದುಕೊಂಡಿದೆ ಎಂದು ನಕಲಿ ವರದಿ ಹಂಚಿಕೊಳ್ಳಲಾಗುತ್ತಿದೆ

ಹೈಕೋರ್ಟ್

ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ನಕಲಿ ಪತ್ರಿಕಾ ವರದಿಗಳನ್ನೇ ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳಲಾಗುತ್ತಿದೆ. ಸುಳ್ಳು ಹೇಳಿಕೆಗಳನ್ನು ಪತ್ರಿಕಾ ವರದಿಯಂತೆ ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಮಗೆ ಹಿಂದು ಮತ ಬೇಡ ಎಂದಿದ್ದಾರೆ ಎಂದು ಸಹ ನಕಲಿ ವರದಿ ಸೃಷ್ಟಿಸಲಾಗಿತ್ತು. ನಂತರ ಈ ಕುರಿತು ಪ್ರಕರಣ ದಾಖಲಾದರೂ ಯಾರನ್ನೂ ಬಂಧಿಸಿದ ವರದಿಯಾಗಿಲ್ಲ.

ಈಗ, “ಇಂಥ ಕೆಟ್ಟ ಆಡಳಿತ ನಾವು ನೋಡೇ ಇಲ್ಲ: ಹೈಕೋರ್ಟ್‌, ಹೈಕೋರ್ಟ್ ಸರ್ಕಾರವನ್ನು ಹಿಗ್ಗಾ ಮುಗ್ಗಾ ತರಾಟೆ ತೆಗೆದುಕೊಂಡಿದೆ. ಸಿಎಂ ಅವರೇ ಇದು ನಿಮ್ಮ ಸಾಧನೆ ನಿಮ್ಮ ಸಾಧನ ಸಮಾವೇಶದಲ್ಲಿ ಇದನ್ನು ಹೇಳಿ” ಎಂದು ಕನ್ನಡ ಪ್ರಭದ ತಲೆಬರಹವನ್ನು ಬಳಸಿಕೊಂಡು ಪೋಸ್ಟರ್ ಒಂದನ್ನು ಹಂಚಿಕೊಳ್ಳಲಾಗುತ್ತಿದೆ.

ಫ್ಯಾಕ್ಟ್‌ಚೆಕ್: ಈ ಕುರಿತು ನಾವು ರಿವರ್ಸ್‌ ಇಮೇಜ್ ಮೂಲಕ ಹುಡುಕಿದಾಗ ಇಂತಹ ಯಾವುದೇ ವರದಿಯನ್ನು ಕನ್ನಡ ಪ್ರಭ ಪ್ರಕಟಿಸಿರುವ ಲೇಖನ ನಮಗೆ ಲಭ್ಯವಾಗಿಲ್ಲ. ಹೈಕೋರ್ಟ್‌ “ಇಂಥ ಕೆಟ್ಟ ಆಡಳಿತ ನಾವು ನೋಡೇ ಇಲ್ಲ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕದ ಕಾಂಗ್ರೆಸ್‌ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಕುರಿತು ಕೀವರ್ಡ್‌ ಸರ್ಚ್‌ ಮೂಲಕ ಹುಡುಕಿದಾಗ ಸಹ ಯಾವುದೇ ವರದಿಗಳು ಲಭ್ಯವಾಗಿಲ್ಲ. ಆದ್ದರಿಂದ ಇದೊಂದು ನಕಲಿ ವರದಿ ಎಂದು ಸಾಭೀತಾಗಿದೆ.

ಈ ಚಿತ್ರದಲ್ಲಿ ಹೈಕೋರ್ಟ್‌ ಎಂಬ ಪದವನ್ನು ತಪ್ಪಾಗಿ ಬರೆಯಲಾಗಿದೆ ಮತ್ತು ಕನ್ನಡಪ್ರಭ ಪತ್ರಿಕೆಯ ಹೆಸರಿನ ಪಕ್ಕದಲ್ಲಿ ನಮೋ ಕರ್ನಾಟಕ ಎಂದಿರುವುದನ್ನು ನೋಡಬಹುದು. ಇದನ್ನು ಪ್ರಧಾನಿ ನರೇಂದ್ರ ಮೋದಿ ಬೆಂಬಲಿಗರು ಅಥವಾ ಬಿಜೆಪಿ ಬೆಂಬಲಿಗರು ಈ ರೀತಿ ನಕಲಿ ವರದಿಯೊಂದನ್ನು ಸೃಷ್ಟಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟಿದ್ದಾರೆ.


ಇದನ್ನು ಓದಿ: Fact Check: ಹಿಂದೂಗಳ ಅಗತ್ಯವಿಲ್ಲವೆಂದು ಸಿಎಂ ಸಿದ್ದರಾಮಯ್ಯನವರು ಹೇಳಿಲ್ಲ. ಈ ಪತ್ರಿಕಾ ವರದಿ ನಿಜವಲ್ಲ


ವಿಡಿಯೋ ನೋಡಿ: ಸಾಮಾಜಿಕ ಜಾಲತಾಣದಲ್ಲಿ ಮಹೇಶ್‌ ವಿಕ್ರಮ್‌ ಹೆಗ್ಡೆ ಸುಳ್ಳು ಮತ್ತೊಮ್ಮೆ ವೈರಲ್‌


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *