ಕರ್ನಾಟಕ ಸರ್ಕಾರ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಒದಗಿಸಿದೆ. ಬಸ್ ಡ್ರೈವರ್ ಮುಸ್ಲಿಂ ಮಹಿಳೆಗೆ ಬಸ್ ನಿಲ್ಲಿಸದ ಕಾರಣ ಸರ್ಕಾರಿ ಬಸ್ಸಿನ ಮೇಲೆ ದಾಳಿ ನಡೆಸಿದ್ದಾರೆ ಎಂದು ಪ್ರತಿಪಾದಿಸಿ ವಿಡಿಯೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ.
ಫ್ಯಾಕ್ಟ್ ಚೆಕ್
ಈ ಕುರಿತು ಹುಡುಕಿದಾಗ ಅದೇ ವಿಡಿಯೋ 2019ರಲ್ಲಿಯೇ ಇಂಟರ್ನೆಟ್ಗೆ ಅಪ್ಲೋಡ್ ಆಗಿರುವುದು ಕಂಡುಬಂದಿದೆ. ಜುಲೈ 2019ರ ವಿಡಿಯೋ ಗುಜರಾತ್ನ ಸೂರತ್ಗೆ ಸಂಬಂಧಿಸಿದ್ದಾಗಿದೆ. ದಿವ್ಯ ನ್ಯೂಸ್ ಚಾನೆಲ್ ಎಂಬ ಯೂಟ್ಯೂಬ್ ಚಾನೆಲ್ನ ವಿಡಿಯೋ ವರದಿಯ ಪ್ರಕಾರ ಗುಜರಾತ್ ರಾಜ್ಯದ ಸೂರತ್ ನ ನಾನ್ಪುರದಲ್ಲಿ ಜುಲೈ 5, 2019 ರಂದು ಮಾಬ್ ಲಿಂಚಿಂಗ್ ವಿರೋಧಿಸಿ ಮುಸ್ಲಿಂ ಸಮುದಾಯದವರು ಪ್ರತಿಭಟನೆ ಹಮ್ಮಿಕೊಂಡಿದ್ದರು. ಆದರೆ ಅನುಮತಿ ಪಡೆದಿಲ್ಲ ಎಂಬ ಕಾರಣಕ್ಕೆ ಪೊಲೀಸರು ಮೆರವಣಿಗೆ ತಡೆದರು. ಆಗ ಪೋಲಿಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆದು ಬಸ್ಗೆ (GJ-05, BZ 0915 ಸೂರತ್ನಲ್ಲಿ ನೋಂದಣಿಯಾಗಿದೆ) ಕಲ್ಲು ತೂರಲಾಗಿದೆ.
![](https://www.kannadafactcheck.com/wp-content/uploads/2023/09/WhatsApp-Image-2023-09-23-at-5.54.23-PM-300x300.jpeg)
ಟಿವಿ9 ಗುಜರಾತಿ ಮತ್ತು ಎಬಿಪಿ ಅಸ್ಮಿತ ಚಾನೆಲ್ಗಳನ್ನು ಇದನ್ನೇ ವರದಿ ಮಾಡಿವೆ. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಇಂಡಿಯನ್ ಎಕ್ಸ್ಪ್ರೆಸ್ ಈ ಕುರಿತು ವಿವರವಾದ ವರದಿ ಮಾಡಿದೆ. ಸೂರತ್ ಪೊಲೀಸರು ಸಹ ಈ ರೀತಿಯ ಘಟನೆ ನಡೆದಿದೆ, ಹಲವರನ್ನು ವಶಕ್ಕೆ ಪಡೆದಿದ್ದೆವು ಎಂದು ಮಾಹಿತಿ ನೀಡಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ ಇದು ಗುಜರಾತ್ನ ಸೂರತ್ನಲ್ಲಿ 2019ರಲ್ಲಿ ನಡೆದ ಘಟನೆಯಾಗಿದೆ. ಈ ಘಟನೆಗೂ ಕರ್ನಾಟಕಕ್ಕೂ ಯಾವುದೇ ಸಂಬಂಧವಿಲ್ಲ.
ಇದನ್ನೂ ಓದಿ; ಆಲೂಗೆಡ್ಡೆಯಿಂದ ಚಿನ್ನ ತೆಗೆಯಬಹುದೆಂಬ ಹೇಳಿಕೆ ರಾಹುಲ್ ಗಾಂಧಿಯವರದ್ದಲ್ಲ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.