Fact Check: ಮುಖ್ತಾರ್ ಅನ್ಸಾರಿ ಜೈಲಿನಲ್ಲಿ ವಿಷ ಸೇವಿಸಿದ್ದರು ಎಂದು ಅಮಿತ್ ಶಾ ಅವರು ಹೇಳಿಲ್ಲ

ಅಮಿತ್ ಶಾ

ಇತ್ತೀಚೆಗೆ ದರೋಡೆಕೋರ ನಂತರ ರಾಜಕಾರಣಿಯಾಗಿ ಬದಲಾದ  ಐದು ಬಾರಿ ಪೂರ್ವ ಯುಪಿಯ ಮೌ ಕ್ಷೇತ್ರದ ಐದು ಬಾರಿ ಶಾಸಕರಾಗಿದ್ದ ಮುಖ್ತಾರ್ ಅನ್ಸಾರಿ ಅವರು  ಮಾರ್ಚ್ 28 ರಂದು ಹೃದಯಾಘಾತದಿಂದ ನಿಧನರಾದರು. ಅವರ ಅಂತ್ಯಕ್ರಿಯೆಯ ದಿನದಂದು ಸಾವಿರಾರು ಜನ ಬೆಂಬಲಿಗರು ಭಾಗವಹಿಸಿರುವುದು ವರದಿಯಾಗಿದೆ.

ಅನ್ಸಾರಿ (63) ಕಳೆದ ಎರಡು ವರ್ಷಗಳಲ್ಲಿ ಎಂಟು ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ಬಂದಾ ಜೈಲಿನಲ್ಲಿದ್ದರು. ಅನ್ಸಾರಿ ಅವರ ಪುತ್ರ ಉಮರ್ ಅನ್ಸಾರಿ ಮತ್ತು ಘಾಜಿಪುರ ಸಂಸದರೂ ಆಗಿರುವ ಸಹೋದರ ಅಫ್ಜಲ್ ಅನ್ಸಾರಿ ಅವರು ಮುಖ್ತಾರ್ ಅನ್ಸಾರಿ ಅವರಿಗೆ ಜೈಲಿನಲ್ಲಿ ವಿಷ(ಸ್ಲೋ ಪಾಯ್ಸನ್) ನೀಡಿ ಕೊಲ್ಲಲಾಗಿದೆ ಎಂದು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಗೃಹ ಸಚಿವ ಅಮಿತ್ ಶಾ ಅವರ ವಿಡಿಯೋವೊಂದು ವೈರಲ್ ಆಗಿದೆ. ಅದರಲ್ಲಿ ಮುಖ್ತಾರ್ ಅನ್ಸಾರಿ ವಿಷ ಸೇವಿಸಿದ್ದಾರೆ ಎಂದು ಶಾ ಒಪ್ಪಿಕೊಂಡಿದ್ದಾರೆ ಎಂದು ಪ್ರತಿಪಾದಿಸಲಾಗುತ್ತಿದೆ.

ಮುಖ್ತಾರ್ ಅನ್ಸಾರಿಯಿಂದ ಭಾರತೀಯ ಜನತಾ ಪಕ್ಷಕ್ಕೆ ಸ್ವಾತಂತ್ರ್ಯ ಸಿಕ್ಕಿದೆ ಎಂದು ಅಮಿತ್ ಶಾ ಹೇಳುತ್ತಿದ್ದಾರೆ. ಶಾ ತನ್ನ ಕೈಯಿಂದಲೇ ಅನ್ಸಾರಿಗೆ ವಿಷ ಹಾಕಿದ ಹಾಗೆ ಅನಿಸುವುದಿಲ್ಲವೇ?”ಎಂದು ಅವರ ಭಾಷಣದ ತುಣುಕೊಂದನ್ನು ಹಂಚಿಕೊಳ್ಳಲಾಗುತ್ತಿದೆ.

ಫ್ಯಾಕ್ಟ್‌ಚೆಕ್: ಈ ವಿಡಿಯೋ 10 ಏಪ್ರಿಲ್ 2019ರ ಉತ್ತರ ಪ್ರದೇಶದ ಕಾಸ್ಗಂಜ್ ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಅಮಿತ್ ಶಾ ಅವರು ಮಾಡಿದ ಭಾಷಣದ ತುಣುಕಾಗಿದೆ. ಮೂಲ ವಿಡಿಯೋ ಬಿಜೆಪಿ ಅಧಿಕೃತ ಯೂಟೂಬ್ ಚಾನೆಲ್‌ನಲ್ಲಿ ಲಭ್ಯವಿದ್ದು, ಸುಳ್ಳು ಹರಡುವ ಸಲುವಾಗಿ ಈ ಭಾಷಣದ ತುಣುಕನ್ನು ಕಟ್ ಮಾಡಿ ಮುಕ್ತಾರ್ ಅನ್ಸಾರಿ ಅವರ ಸಾವಿಗೆ ಹೊಂದಿಸಿ ತಪ್ಪು ಅರ್ಥ ಬರುವಂತೆ ಹಂಚಿಕೊಳ್ಳಲಾಗುತ್ತಿದೆ.
ತಮ್ಮ ಭಾಷಣದಲ್ಲಿ ಅಮಿತ್ ಶಾ ಅವರು “ನಾವು ಮಾಡಿದ ದೊಡ್ಡ ಕೆಲಸವೆಂದರೆ ನಿಮಗೆ ‘ನಿಜಾಮ್’ನಿಂದ ಮುಕ್ತಿ ನೀಡುವುದು. ‘ಎನ್’ ಎಂದರೆ ನಸಿಮುದ್ದೀನ್ ಸಿದ್ದಿಕಿಯಿಂದ ಬಿಜೆಪಿ ನಿಮಗೆ ಸ್ವಾತಂತ್ರ್ಯ ನೀಡುವುದು; ‘ನಾನು’ ಎಂದರೆ ಇಮ್ರಾನ್ ಮಸೂದ್‌ನಿಂದ ಸ್ವಾತಂತ್ರ್ಯ; ಅದೇ ರೀತಿ ಆಜಂ ಖಾನ್, ಅತೀಕ್ ಅಹ್ಮದ್ ಮತ್ತು ಮುಖ್ತಾರ್ ಅನ್ಸಾರಿ ಅವರಿಂದ ಬಿಜೆಪಿಯಿಂದ ನಿಮಗೆ ಸಿಕ್ಕಿದ ಸ್ವಾತಂತ್ರ್ಯ. ಈ ಎಸ್‌ಪಿ-ಬಿಎಸ್‌ಪಿ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ, ಉತ್ತರ ಪ್ರದೇಶದಲ್ಲಿ ಮತ್ತೆ ನಿಜಾಮ್ ಆಳ್ವಿಕೆ ಬರುತ್ತದೆ. (ಹಿಂದಿಯಿಂದ ಅನುವಾದಿಸಲಾಗಿದೆ)”

ವೈರಲ್ ವಿಡಿಯೋ ಮತ್ತು ಉತ್ತರ ಪ್ರದೇಶದ ಕಾಸ್ಗಂಜ್‌ನಲ್ಲಿ ಮಾಡಿದ ಭಾಷಣದಲ್ಲಿ ಅಮಿತ್ ಶಾ ಅವರ ಹಿಂಬದಿಯಲ್ಲಿರುವ ಬ್ಯಾನರ್ ನಲ್ಲಿ ಮುಮ್ಕಿನ್ ಹೇ(ಮೋದಿ ಹೇ ತೋ ಮುಮ್ಕಿನ್ ಹೇ) ಎಂದು ಬರೆದಿರುವುದನ್ನು ಗಮನಿಸಬಹುದು.

ಏಪ್ರಿಲ್ 10, 2019 ರಂದು ಪ್ರಕಟವಾದ ಜಾಗರನ್ ವರದಿಯು, ಗೃಹ ಸಚಿವ ಅಮಿತ್ ಶಾ ಅವರು ಬಿಜೆಪಿ ಅಭ್ಯರ್ಥಿ ರಾಜವೀರ್ ಸಿಂಗ್ ಪರವಾಗಿ ಸಾರ್ವಜನಿಕರನ್ನು ಉದ್ದೇಶಿಸಿ ಕಾಸ್ಗಂಜ್‌ನಲ್ಲಿ ಮಾಡಿದ ಭಾಷಣದ ಸಮಯದಲ್ಲಿ ನಸಿಮುದ್ದೀನ್ ಸಿದ್ದಿಕಿ, ಇಮ್ರಾನ್ ಮಸೂದ್, ಅಜಮ್ ಖಾನ್, ಅತೀಕ್ ಅಹ್ಮದ್ ಮತ್ತು ಮುಖ್ತಾರ್ ಅನ್ಸಾರಿ ಅವರ ಕುರಿತು ನಿಜಾಮ್ ಎಂದು ಉಲ್ಲೇಖಿಸಿದ್ದರು ಎಂದು ವರದಿಯಲ್ಲಿ ಹೇಳಿದೆ.

ಆದ್ದರಿಂದ ಮುಖ್ತಾರ್ ಅನ್ಸಾರಿ ಅವರಿಗೆ ವಿಷ ಸೇನೀಡಲಾಗಿದೆ ಎಂದು ಅಮಿತ್ ಶಾ ಒಪ್ಪಿಕೊಂಡಿದ್ದಾರೆ ಎಂಬುದು ಸುಳ್ಳು. ಮುಖ್ತಾರ್ ಅನ್ಸಾರಿಯವರ ಸಾವಿನ ನಂತರದ ವೈದ್ಯರು ಸಲ್ಲಿಸಿದ ಪೋಸ್ಟ್‌ಮಾರ್ಟಮ್ ರಿಪೋರ್ಟ್‌ನಲ್ಲಿ ಹೃದಯಾಘಾತದಿಂದ ಅನ್ಸಾರಿಯವರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದೆ. 


ಇದನ್ನು ಓದಿ: Fact Check | ಅರವಿಂದ್‌ ಕೇಜ್ರಿವಾಲ್‌ ಯುವಕನಾಗಿದ್ದಾಗ ಅತ್ಯಾಚಾರದ ಆರೋಪಿ ಎಂಬುದು ಸುಳ್ಳು


ವಿಡಿಯೋ ನೋಡಿ: Fact Check | ಮೋದಿ ಪ್ರಧಾನಿಯಾದರೆ ದೇಶ ಬಿಟ್ಟು ಹೋಗುತ್ತೇನೆ ಎಂಬುದು ದೇವೇಗೌಡರ ಹೇಳಿಕೆಯೇ ಹೊರತು ಸಿದ್ದರಾಮಯ್ಯನವರದ್ದಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *