Fact Check | ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೇಲೆ ಕೋತಿಯೊಂದು ದಾಳಿ ನಡೆಸಿದೆ ಎಂಬುದು ಸುಳ್ಳು

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಧಿಕಾರಿಗಳಿಂದ ಸುತ್ತುವರೆದಿರುವ ಕಟ್ಟಡದಿಂದ ಹೊರಬರುವಾಗ ಕೋತಿಯೊಂದು ಅವರ ಮೇಲೆ ದಾಳಿ ಮಾಡುತ್ತಿರುವುದನ್ನು ತೋರಿಸುವ ವೀಡಿಯೊ  ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದು ನಿಜವಾದ ಘಟನೆ ಎಂಬಂತೆ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ. ವೈರಲ್‌ ವಿಡಿಯೋ ಕೂಡ ನಿಜವಾದ ವಿಡಿಯೋದಂತೆ ಕಂಡು ಬಂದಿರುವುದರಿಂದ ಹಲವರು ಇದಕ್ಕೆ ವಿವಿಧ ಬರಹಗಳನ್ನು ಬರೆದುಕೊಂಡು ಹಂಚಿಕೊಳ್ಳುತ್ತಿದ್ದಾರೆ. ಇನ್ನೂ ಕೆಲವರು ವಿಡಿಯೋವನ್ನು ಬಳಸಿಕೊಂಡು ಟ್ರೋಲ್‌ ಕೂಡ ಮಾಡುತ್ತಿದ್ದಾರೆ. ಹೀಗಾಗಿ ವಿಡಿಯೋ ಸಾಕಷ್ಟು ಹಂಚಿಕೆಯನ್ನು ಕಂಡುದ್ದು ಸಾರ್ವಜನಿಕ ವಲಯದಲ್ಲಿ ವಿವಿಧ…

Read More

Fact Check | ಬಿಹಾರ ಚುನಾವಣೆಗೂ ಮುನ್ನ ಪಹಲ್ಗಾಮ್ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಲ್ಲ

ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಯ ಹೆಸರಿನಲ್ಲಿ ಒಂದು ಪೋಸ್ಟ್ ವೈರಲ್ ಆಗುತ್ತಿದೆ. ಅದರಲ್ಲಿ ಬಿಹಾರ ಚುನಾವಣೆಗೂ ಮುನ್ನ ಪಹಲ್ಗಾಮ್ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ ಎಂದು ನ್ಯೂಸ್ 24 ಸುದ್ದಿವಾಹಿನಿ ವರದಿ ಮಾಡಿದೆ ಎಂಬಂತೆ ಬರೆಯಲಾಗಿದೆ. ನ್ಯೂಸ್ 24 ಚಾನೆಲ್‌ನ ಲೋಗೋ ಬಳಸಿ ಅಮಿತ್ ಶಾ ಅವರ ಫೋಟೋವನ್ನು ಸಹ ಪೋಸ್ಟ್‌ನಲ್ಲಿ ಇರಿಸಲಾಗಿದೆ. ಈಗ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ಕಾರ್ಮೋಡ ಆವರಿಸಿರುವ ಕಾರಣ ಫೋಟೋ ಕೂಡ…

Read More

Fact Check | ಪ್ರಧಾನಿ ಮೋದಿ ಕಚ್‌ನಲ್ಲಿ ಸೈನಿಕರನ್ನು ಭೇಟಿಯಾದ ಹಳೆಯ ವೀಡಿಯೊವನ್ನು ಇತ್ತೀಚಿನದ್ದು ಎಂದು ಹಂಚಿಕೊಳ್ಳಲಾಗುತ್ತಿದೆ

ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 26 ಜನರು ಪ್ರಾಣ ಕಳೆದುಕೊಂಡ ನಂತರ ದೇಶಾದ್ಯಂತ ಪಾಕಿಸ್ತಾನದ ವಿರುದ್ಧ ಪ್ರತೀಕಾರದ ಮಾತು ಕೇಳಿ ಬರುತ್ತಿದೆ.. ಇದಾದ ನಂತರ, ಈಗ ಸಾಮಾಜಿಕ ಮಾಧ್ಯಮದಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿದೆ. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು  ಸೈನಿಕರೊಂದಿಗೆ ಇರುವುದು ಕಾಣಬಹುದು. “ಪ್ರಧಾನಿ ಮೋದಿ ಸೈನಿಕರಿಗೆ ಸಿಹಿತಿಂಡಿಗಳನ್ನು ತಿನ್ನಿಸಿ ಪಾಕಿಸ್ತಾನದ ಮೇಲೆ ದಾಳಿ ಮಾಡಲು ತಿಳಿಸಿದ್ದಾರೆ” ಎಂಬ ಹೇಳಿಕೆಯೊಂದಿಗೆ ವೈರಲ್‌ ವಿಡಿಯೋವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ವೈರಲ್‌ ಆಗುತ್ತಿರುವ ವಿಡಿಯೋ ನೋಡಿದ ಹಲವು ಮಂದಿ ಇದನ್ನು ಇತ್ತೀಚೆಗಿನದ್ದು…

Read More

Fact Check | ಒಬ್ಬ ಉಗ್ರಗಾಮಿಯನ್ನು ಜೀವಂತವಾಗಿ ಹಿಡಿದ ಭಾರತೀಯ ಸೇನೆ ಎಂದು 2022ರ ವೀಡಿಯೊ ವೈರಲ್

40 ಭಾರತೀಯ ಸೇನಾ ಸೈನಿಕರನ್ನು ಬಲಿತೆಗೆದುಕೊಂಡ ಪುಲ್ವಾಮಾ ದಾಳಿಯ ನಂತರ, ಏಪ್ರಿಲ್ 22 ರಂದು ಶ್ರೀನಗರದಿಂದ 100 ಕಿ.ಮೀ. ದಕ್ಷಿಣಕ್ಕೆ ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ ಇಪ್ಪತ್ತಾರು ಮಂದಿ ಜನಸಾಮಾನ್ಯರನ್ನು ಉಗ್ರಗಾಮಿಗಳು ಬಲಿ ತೆಗೆದುಕೊಂಡಿದ್ದಾರೆ. ಇದರ ಬೆನ್ನಲ್ಲೇ, ಪ್ರತಿಯೊಬ್ಬ ಭಯೋತ್ಪಾದಕರನ್ನು ಗುರುತಿಸಿ, ಪತ್ತೆ ಹಚ್ಚಿ, ಅವರನ್ನು ಭಾರತ ಶಿಕ್ಷಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇಡೀ ಭಾರತ ತನ್ನ ಅಮಾಯಕರ ಸಾವಿಗೆ ಪ್ರತೀಕಾರವನ್ನು ಕೇಳುತ್ತಿದೆ. ಹೀಗಿರುವಾಗ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ಒಂದು…

Read More

Fact Check | ಅಳುತ್ತಿರುವ ಮಗುವಿನ ವೈರಲ್‌ ವೀಡಿಯೊ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಸಂಬಂಧಿಸಿಲ್ಲ

ಜಮ್ಮು ಮತ್ತು ಕಾಶ್ಮೀರದ ಪೆಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ, ಅದರಲ್ಲಿ ಮಗುವೊಂದು ಅಳುತ್ತಿರುವ ವಿಡಿಯೋ ಹೆಚ್ಚಾಗಿ ಹಂಚಿಕೊಡಲಾಗುತ್ತಿದ್ದು, ಇದು ಕೂಡ ಪೆಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದನಾ ದಾಳಿಗೆ ಸಂಬಂಧಪಟ್ಟಿದೆ ಎನ್ನಲಾಗುತ್ತಿದೆ. ಹಲವು ಮಂದಿ “ಪೆಹಲ್ಗಾಮ್‌ ಭಯೋತ್ಪಾದಕ ದಾಳಿಯಲ್ಲಿ ಈ ಮಗು ಅನಾಥವಾಗಿದೆ. ಈಗ ಈ ಮಗುವಿನ ಹೊಣೆಯನ್ನು ಯಾರು ಹೊತ್ತುಕೊಳ್ಳಲಿದ್ದಾರೆ?” ಎಂಬಂತ ಪ್ರಶ್ನೆಗಳನ್ನು ಬರೆದುಕೊಂಡು ವೈರಲ್ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ. ವಿಡಿಯೋ ನೋಡಿದ ಹಲವು ಮಂದಿ ಇದು ಪೆಹಲ್ಗಾಮ್‌ಗೆ ಸಂಬಂಧಿಸಿದ ವಿಡಿಯೋ…

Read More

Fact check | ಆಮ್‌ ಆದ್ಮಿ ಪಕ್ಷದ ಸೋಲನ್ನು ಸುಪ್ರಿಯಾ ಶ್ರೀನಾಟೆ ಸಂಭ್ರಮಿಸಿದ್ದಾರೆ ಎಂದು ಹಳೆಯ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ

ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನಾಟೆ ಅವರು ಸಂಭ್ರಮದಿಂದ ನಡೆದುಕೊಂಡು ಬರುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋವನ್ನು ಶೇರ್‌ ಮಾಡುತ್ತಿರುವವರು ಸುಪ್ರಿಯಾ ಶ್ರೀನಾಟೆ ಅವರು ದೆಹಲಿಯಲ್ಲಿ ಆಮ್‌ ಆದ್ಮಿ ಪಕ್ಷ ಸೋತಿರುವುದಕ್ಕೆ ಸಂತಸ ವ್ಯಕ್ತ ಪಡಿಸಿದ್ದಾರೆ, ಕಾಂಗ್ರೆಸ್‌ ಶೂನ್ಯ ಸಂಪಾದನೆಗಿಂತ ಅವರಿಗೆ ದೆಹಲಿಯಲ್ಲಿ ಆಮ್‌ ಆದ್ಮಿ ಅಧಿಕಾರ ಕಳೆದುಕೊಂಡಿರುವುದು ಹೆಚ್ಚು ಸಂತೋಷವನ್ನು ನೀಡಿದೆ ಎಂದು ಹಲವರು ಬರೆದುಕೊಂಡಿದ್ದಾರೆ. लगातार तीसरी बार कांग्रेस के शून्य पर सिमट जाने के बावजूद चुनाव…

Read More

Fact Check | 2015 ರಲ್ಲಿ ಸ್ವಾಮಿ ಅವಿಮುಕ್ತೇಶ್ವರಾನಂದರ ಮೇಲಿನ ಲಾಠಿ ಚಾರ್ಜ್ ವಿಡಿಯೋವನ್ನು ಇತ್ತೀಚಿನದ್ದು ಎಂದು ಹಂಚಿಕೊಳ್ಳಲಾಗುತ್ತಿದೆ

ಬಿಜೆಪಿ ಸರ್ಕಾರದ ವಿರುದ್ಧ ಮಾತನಾಡಿದರೆ ಅವರು ಎಂತಹ ಹಿಂದೂವೇ ಆಗಲಿ ಅಥವಾ ಹಿಂದುತ್ವವಾದಿಯೇ ಆಗಲಿ ಅವರನ್ನು ಬಿಜೆಪಿ ಹಿಂದೂ ವಿರೋಧಿಯನ್ನಾಗಿ ಮಾಡಿಬಿಡುತ್ತದೆ. ಈಗ ಈ ಸರದಿ ಸ್ವಾಮಿ ಅವಿಮುಕೇಶ್ವರಾನಂದ ಅವರದ್ದಾಗಿದೆ. ಬಿಜೆಪಿಯ ವಿರುದ್ಧ ಮಾತನಾಡಿದರು ಎಂಬ ಕಾರಣಕ್ಕೆ ಅವರ ಮೇಲೆ ಪ್ರಯಾಗ್‌ರಾಜ್‌ನ ಮಹಾಕುಂಭಮೇಳದಲ್ಲಿ ಪೊಲೀಸರಿಂದ ಲಾಠಿಚಾರ್ಜ್ ಮಾಡಿಸಲಾಗಿದೆ ಎಂದು ವಿಡಿಯೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ. शंकराचार्य पर बर्बर लाठीचार्ज।हिन्दुओं की आस्था पर करारी चोट हिन्दू-मुस्लिम गाली-गलौज करने वाले बेशर्म सनातन विरोधी सराकार…

Read More
ಕುಂಭ ಮೇಳ

Fact Check: ಕುಂಭ ಮೇಳವನ್ನು ಪ್ರತಿ 12 ವರ್ಷಗಳಿಗೊಮ್ಮೆ ನಾಲ್ಕು ಬಾರಿ ಆಚರಿಸಲಾಗುತ್ತದೆ, ಪ್ರತಿ 12 ವರ್ಷಗಳಿಗೊಮ್ಮೆ ಅಲ್ಲ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕುಂಭಮೇಳದ ಕುರಿತಂತೆ ಹೇಳಿಕೆ ನೀಡಿದ್ದಾರೆ ಎಂಬ ಸಂದೇಶವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ(ಇಲ್ಲಿ, ಇಲ್ಲಿ ಮತ್ತು ಇಲ್ಲಿ). ಈ ವೈರಲ್‌ ಸಂದೇಶದಲ್ಲಿ ಅಮಿತ್‌ ಶಾ ಅವರು, “ನಾನು ನನ್ನ ಜೀವನದಲ್ಲಿ 9 ಬಾರಿ ಕುಂಭಮೇಳಕ್ಕೆ ಹೋಗಿದ್ದೇನೆ. ನಾನು ಅರ್ಧಕುಂಭವನ್ನೂ ನೋಡಿದ್ದೇನೆ. ನಾನು ಜನವರಿ 27 ರಂದು ಮಹಾಕುಂಭಕ್ಕೆ ಹೋಗುತ್ತಿದ್ದೇನೆ. ನೀವೆಲ್ಲರೂ ಹೋಗಬೇಕು.” ಎಂದು ಹೇಳಿದ್ದಾರೆ ಎಂದು ಪ್ರತಿಪಾದಿಸಲಾಗುತ್ತಿದೆ. 12 ವರ್ಷಗಳಿಗೊಮ್ಮೆ ಮಹಾಮೇಳ ನಡೆಯುವಾಗ ಅವರು 9 ಬಾರಿ ಕುಂಭಮೇಳಕ್ಕೆ ಹೇಗೆ ಭೇಟಿ ನೀಡಲು ಸಾಧ್ಯವಾಯ್ತು…

Read More

Fact Check | ಝಾಕಿರ್ ನಾಯಕ್ ಸಾಂಟಾ ಕ್ಲಾಸ್‌ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ ಎಂಬುದು ಸುಳ್ಳು

ಸಾಮಾಜಿಕ ಜಾಲತಾಣಗಳಲ್ಲಿ ಫೋಟೋವೊಂದು ವೈರಲ್ ಆಗಿದೆ. ವೈರಲ್ ಆಗುತ್ತಿರುವ ಈ ಚಿತ್ರದಲ್ಲಿ, ಪ್ರಚೋದನಕಾರಿ ಭಾಷಣಗಳಿಂದ ವಿವಾದಕ್ಕೆ ಸಿಲುಕಿರುವ ಇಸ್ಲಾಮಿಕ್ ಬೋಧಕ ಡಾ. ಝಾಕಿರ್ ನಾಯಕ್ ಅವರು ಸಾಂಟಾ ಕ್ಲಾಸ್ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ ಹಿಂದೂಗಳ ಆಚರಣೆಗಳ ಬಗ್ಗೆ ವಿವಾದಾತ್ಮಕವಾಗಿ ಮಾತನಾಡುವ ಈತ ಕ್ರೈಸ್ತರ ಆಚಣೆಗೆ ಯಾವುದೇ ರೀತಿಯಾದ ಕೊಂಕು ಮಾತುಗಳನ್ನು ಆಡುವುದಿಲ್ಲ. ಬದಲಾಗಿ ಕ್ರೈಸ್ತರನ್ನು ಮೆಚ್ಚಿಸಲು ಸಾಂಟಾಕ್ಲಾಸ್‌ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾನೆ ಎಂದು ಪೋಸ್ಟ್‌ ಮಾಡುತ್ತಿದ್ದಾರೆ. ವೈರಲ್‌ ಫೋಟೋದಲ್ಲಿ ಸಾಂಟಾ ಕ್ಲಾಸ್‌ ಉಡುಪನ್ನು ಝಾಕಿರ್ ನಾಯಕ್ ಅವರು ಧರಿಸಿಕೊಂಡಿರುವಂತೆ ಕಾಣಿಸುತ್ತಿದೆ….

Read More
ಡಾ. ಬಿ.ಆರ್.ಅಂಬೇಡ್ಕರ್

Fact Check: 2022 ರ ಹಳೆಯ ವಿಡಿಯೋವನ್ನು ಡಾ. ಬಿ.ಆರ್.ಅಂಬೇಡ್ಕರ್ ಕುರಿತು ಅಮಿತ್ ಶಾ ನೀಡಿದ ಹೇಳಿಕೆ ವಿರುದ್ಧ ಬೃಹತ್ ಪ್ರತಿಭಟನೆ ಎಂದು ಹಂಚಿಕೊಳ್ಳಲಾಗುತ್ತಿದೆ

ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಇತ್ತೀಚೆಗೆ ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿವೆ. ಈ ನಡುವೆ ಬೃಹತ್ ಪ್ರತಿಭಟನಾ ರ್ಯಾಲಿಯನ್ನು ತೋರಿಸುವ 28 ಸೆಕೆಂಡುಗಳ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಅಮಿತ್‌ ಶಾ ಅವರ ಹೇಳಿಕೆಯನ್ನು ಖಂಡಿಸಿ ಈ ರ್ಯಾಲಿ ನಡೆದಿದೆ ಎಂದು ಪ್ರತಿಪಾದಿಸಲಾಗುತ್ತಿದೆ. ಅನೇಕ ಎಕ್ಸ್ ಮತ್ತು ಫೇಸ್‌ಬುಕ್‌ ಬಳಕೆದಾರರು ವೈರಲ್ ವಿಡಿಯೋವನ್ನು ಹಂಚಿಕೊಂಡಿದ್ದು, ಅಮಿತ್ ಶಾ ವಿರುದ್ಧ ಭಾರಿ ಪ್ರತಿಭಟನೆಯನ್ನು ಪ್ರದರ್ಶಿಸಿದ್ದಾರೆ ಎಂದು ಆರೋಪಿಸಿದ್ದಾರೆ….

Read More