Fact Check | ಅರವಿಂದ್‌ ಕೇಜ್ರಿವಾಲ್‌ ಅವರು ಧೀರಜ್‌ ಸಾಹು ಅವರನ್ನು ಬೆಂಬಲಿಸಿದ್ದಾರೆ ಎಂಬುದು ಸುಳ್ಳು

ಸಾಮಾಜಿಕ ಜಾಲತಾಣದಲ್ಲಿ “ಆದಾಯ ತೆರಿಗೆ ಇಲಾಖೆಯ ದಾಳಿಯಲ್ಲಿ ಕಾಂಗ್ರೆಸ್‌ ಸಂಸದ ಧೀರಾಜ್‌ ಸಾಹು ಅವರಿಂದ ಅಧಿಕಾರಿಗಳು 351 ಕೋಟಿ ರೂಪಾಯಿ ನಗದು ಪತ್ತೆ ಮಾಡಿದ ಬಳಿಕ, ಸಾಹು ಅವರ ವಿರುದ್ಧ ವ್ಯಾಪಕ ಟೀಕೆಗಳು ಕೇಳಿ ಬಂದಿದ್ದವು. ಆದರೆ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು ಈ ಸಂಸದನ ಪರವಾಗಿ ಮಾತನಾಡಿದ್ದಾರೆ. ಆ ಮೂಲಕ ಭ್ರಷ್ಟಾಚಾರಕ್ಕೆ ಪರೋಕ್ಷ ಬೆಂಬಲ ನೀಡಿದ್ದಾರೆ” ಎಂಬ ಪೋಸ್ಟ್‌ ವೈರಲ್‌ ಆಗುತ್ತಿದೆ.

ಇದನ್ನೇ ಸಾಕಷ್ಟು ಮಂದಿ ಹಂಚಿಕೊಳ್ಳುತ್ತಿದ್ದು, ಆಮ್‌ ಆದ್ಮಿ ಪಕ್ಷ ಮೇಲ್ನೋಟದಲ್ಲಿ ಮಾತ್ರ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುತ್ತೇವೆ ಎನ್ನುತ್ತಾರೆ. ಆದರೆ ಪರೋಕ್ಷವಾಗಿ ಭ್ರಷ್ಟಾಚಾರಿಗಳಿಗೆ ಬೆಂಬಲವನ್ನು ನೀಡುತ್ತಿದ್ದಾರೆ. ಇದಕ್ಕೆ ಪೂರಕ ಆಮ್‌ ಆದ್ಮಿಯ ಸಂಸ್ಥಾಕ ಅರವಿಂದ್‌ ಕೇಜ್ರಿವಾಲ್‌‌ ಭ್ರಷ್ಟಾಚಾರದ ಆರೋಪಿಗೆ ಬೆಂಬಲ ನೀಡಿದ್ದಾರೆ ಎಂದು ಹಂಚಿಕೊಳ್ಳಲಾಗುತ್ತಿದೆ.

ಫ್ಯಾಕ್ಟ್‌ಚೆಕ್‌

ಈ ಕುರಿತು ಫ್ಯಾಕ್ಟ್‌ಚೆಕ್‌ ನಡೆಸಿದಾಗ, ಅರವಿಂದ್ ಕೇಜ್ರಿವಾಲ್ ಜಾರ್ಖಂಡ್ ಕಾಂಗ್ರೆಸ್ ಸಂಸದ ದೀರಜ್ ಸಾಹು ಅವರನ್ನು ಬೆಂಬಲಿಸುವ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಅದರಲ್ಲೂ ಪ್ರಮುಖವಾಗಿ ಅರವಿಂದ್‌ ಕೇಜ್ರಿವಾಲ್‌ ಅವರು ಹೇಳಿಕೆ ನೀಡಿರುವುದಕ್ಕೆ ಸಂಬಂಧಿಸಿದಂತೆ ಇದುವರೆಗೂ ಯಾವುದೇ ವರದಿಗಳು ಕೂಡ ಪತ್ತೆಯಾಗಿಲ್ಲ.

ಇನ್ನು ಈ ರೀತಿಯಾದ ಸುದ್ದಿಯನ್ನು ಆಪ್‌ ಗುಜರಾತ್‌ ಮಿಷನ್‌ 2024  ಎಂಬ ಎಕ್ಸ್‌ ಖಾತೆಯಿಂದ ಹಂಚಿಕೊಂಡ ಬಳಿಕ ಇಷ್ಟು ದೊಡ್ಡ ಗೊಂದಲ ಉಂಟಾಗಿದೆ. ಆದರೆ ಈ ಆಪ್‌ ಗುಜರಾತ್‌ ಮಿಷನ್‌ 2024 ಅಕೌಂಟ್‌ ಗುಜರಾತ್‌ನ ಆಮ್‌ ಆದ್ಮಿ ಪಕ್ಷಕ್ಕೆ ಸೇರಿದ್ದಲ್ಲ ಎಂಬುದು ಕೂಡ ತಿಳಿದು ಬಂದಿದ್ದು ಇದೊಂದು ನಕಲಿ ಖಾತೆ ಎಂದು ಖಚಿತವಾಗಿದೆ. ಹಾಗಾಗಿ ಅರವಿಂದ್‌ ಕೇಜ್ರಿವಾಲ್‌ ಅವರು ಧೀರಜ್‌ ಸಾಹು ಅವರಿಗೆ ಬೆಂಬಲ ಘೋಷಿಸಿದ್ದಾರೆ ಎಂಬುದು ಸುಳ್ಳು


ಇದನ್ನೂ ಓದಿ : Fact Check | SFI ಜಿಲ್ಲಾಧ್ಯಕ್ಷರ ಫೋಟೋವನ್ನು ಮನೋರಂಜನ್‌ ಎಂದು ಸುಳ್ಳು ಹರಡಿದ ಕಿಡಿಗೇಡಿಗಳು


ವಿಡಿಯೋ ನೋಡಿ : Fact Check | SFI ಜಿಲ್ಲಾಧ್ಯಕ್ಷರ ಫೋಟೋವನ್ನು ಮನೋರಂಜನ್‌ ಎಂದು ಸುಳ್ಳು ಹರಡಿದ ಕಿಡಿಗೇಡಿಗಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *