Fact Check: ಸಂವಿಧಾನದ 30-A ಕಾನೂನಿನ ಪ್ರಕಾರ – ಹಿಂದೂಗಳು ತಮ್ಮ ಧರ್ಮವನ್ನು ಬೋಧಿಸಲು ಅವಕಾಶವಿಲ್ಲ ಎಂಬುದು ಸುಳ್ಳು

ಸಂವಿಧಾನ

ಇತ್ತೀಚೆಗೆ ನಮ್ಮ ಭಾರತದ ಸಂವಿಧಾನವನ್ನು ತಪ್ಪಾಗಿ ಅರ್ಥೈಸುವ ಮೂಲಕ ಸಂವಿಧಾನಕ್ಕೆ ಅಗೌರವ ತರುವಂತಹ ಕೆಲಸಗಳನ್ನು ಮಾಡಲಾಗುತ್ತಿದೆ. ಇದರ ಭಾಗವಾಗಿ “ಮೋದಿಯ ಎರಡನೇ ಹೊಡೆತ ಬರಲಿದೆ, 30-A ಕಾಯಿದೆಯನ್ನು ರದ್ದುಗೊಳಿಸಬಹುದು. ನೆಹರೂ ಅವರು ಹಿಂದೂಗಳಿಗೆ ಮಾಡಿದ ದ್ರೋಹವನ್ನು ಸರಿಪಡಿಸಲು ಮೋದಿ ಜಿ ಸಂಪೂರ್ಣವಾಗಿ ಸಿದ್ಧರಾಗಿದ್ದಾರೆ. ಸಂವಿಧಾನದ  30-A ಕಾನೂನಿನ ಪ್ರಕಾರ – ಹಿಂದೂಗಳು ತಮ್ಮ “ಹಿಂದೂ ಧರ್ಮ” ವನ್ನು ಕಲಿಸಲು/ಬೋಧಿಸಲು ಅವಕಾಶವಿಲ್ಲ. “ಕಾನೂನು 30″ ರ ಪ್ರಕಾರ ಮುಸ್ಲಿಮರು, ಸಿಖ್ಖರು ಮತ್ತು ಕ್ರಿಶ್ಚಿಯನ್ನರು ತಮ್ಮ ಧಾರ್ಮಿಕ ಶಿಕ್ಷಣಕ್ಕಾಗಿ ಇಸ್ಲಾಮಿಕ್, ಸಿಖ್, ಕ್ರಿಶ್ಚಿಯನ್ ಧಾರ್ಮಿಕ ಶಾಲೆಗಳನ್ನು ಪ್ರಾರಂಭಿಸಬಹುದು.” ಎಂಬ ಸಂದೇಶವೊಂದು ಹಲವಾರು ದಿನಗಳಿಂದ ಸಾಮಾಜಿಕ ಜಾಲಾತಾಣಗಳಲ್ಲಿ ಹರಿದಾಡುತ್ತಿದೆ. 

ಈ ಹಿಂದೆ ಇದೇ ಸುದ್ದಿಯನ್ನು ಆರ್ಟಿಕಲ್ 30-A ಕಾಯಿದೆಯ ಪ್ರಕಾರ ಶಾಲಾ-ಕಾಲೇಜುಗಳಲ್ಲಿ ಕುರಾನ್ ಭೋದಿಸಬಹುದು ಆದರೆ ಭಗವದ್ಗೀತೆ ಭೋದಿಸುವಂತಿಲ್ಲ ಎಂದಿದೆ ಎಂದು ಪ್ರತಿಪಾದಿಸಿ ಹಂಚಿಕೊಳ್ಳಲಾಗುತ್ತಿತ್ತು. 2021 ರಲ್ಲಿ ಇದೇ ರೀತಿಯ ಪ್ರತಿಪಾದನೆ ಹೊಂದಿರುವ ಮತ್ತೊಂದು ಪೋಸ್ಟ್ ಅನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ವೀಡಿಯೊದಲ್ಲಿ, ನಮ್ಮ ಸಂವಿಧಾನದಲ್ಲಿ ಆರ್ಟಿಕಲ್ 30(ಎ) ಅಂತಹ ಒಂದು ಷರತ್ತು ಇದೆ, ಇದರ ಅನ್ವಯ ಹಿಂದೂಗಳು ಯಾವುದೇ ಶಿಕ್ಷಣ ಸಂಸ್ಥೆಗಳಲ್ಲಿ ಹಿಂಧು ಧರ್ಮದ ಆಧಾರದ ಮೇಲೆ ಬೋಧನೆಗಳನ್ನು ನೀಡಲು ಸಾಧ್ಯವಿಲ್ಲ ಎಂದು ಹೇಳುತ್ತದೆ. ಧರ್ಮ ಅಥವಾ ತಮ್ಮದೇ ಆದ ಧಾರ್ಮಿಕ ಸಂಸ್ಥೆಗಳನ್ನು ನಿರ್ಮಿಸಲು ಸಾಧ್ಯವಿಲ್ಲ. ಆದರೆ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ತಮ್ಮ ಮದರಸಾಗಳನ್ನು ನಡೆಸಲು ಮತ್ತು ಧಾರ್ಮಿಕ ಬೋಧನೆಗಳನ್ನು ಒದಗಿಸಲು ಅನುಮತಿಸುವ ಮತ್ತೊಂದು ಷರತ್ತು 30 ರಲ್ಲಿ ಇದೆ. ಎಂದು ಪ್ರತಿಪಾದಿಸಿದ್ದಾರೆ. ಈ ವಿಡಿಯೋವನ್ನು ನೀವು ಇಲ್ಲಿ ನೋಡಬಹುದು. ಫ್ಯಾಕ್ಟ್‌ಚೆಕ್: ಸಂವಿಧಾನದಲ್ಲಿ ಆರ್ಟಿಕಲ್ 30(ಎ) ಎಂಬ ಯಾವುದೇ ವಿಧಿ ಅಸ್ತಿತ್ವದಲ್ಲಿಲ್ಲ. ಆರ್ಟಿಕಲ್ 30ರ ಉಪ ಷರತ್ತು ಆರ್ಟಿಕಲ್ 30(1ಎ) ಎಂದಿದೆ. ಆರ್ಟಿಕಲ್ 30(1ಎ) ಹೇಳುವಂತೆ ಎಲ್ಲಾ ಅಲ್ಪಸಂಖ್ಯಾತರು, ಧರ್ಮ ಅಥವಾ ಭಾಷೆಯ ಆಧಾರದ ಮೇಲೆ ಅವರ ಆಯ್ಕೆಯ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮತ್ತು ನಿರ್ವಹಿಸುವ ಹಕ್ಕನ್ನು ಹೊಂದಿರುತ್ತಾರೆ.ಆರ್ಟಿಕಲ್ 30(1ಎ) ಅಲ್ಪಸಂಖ್ಯಾತ ಗುಂಪುಗಳಿಂದ ಸ್ಥಾಪಿಸಲಾದ ಯಾವುದೇ ಶಿಕ್ಷಣ ಸಂಸ್ಥೆಯ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳುವ ಮೊದಲು ಮೊತ್ತವನ್ನು ನಿಗದಿಪಡಿಸಬೇಕೆಂದು ತಿಳಿಸುತ್ತದೆ.

ಇಲ್ಲಿ ಎಲ್ಲಿಯೂ “ಹಿಂದೂ ಧರ್ಮ” ವನ್ನು, ಭಗವದ್ಗೀತೆಯನ್ನು ಬೋಧಿಸಲು ಅಥವಾ ಪ್ರಸಾರ ಮಾಡಲು ಅವಕಾಶವಿಲ್ಲ ಎಂದು ಉಲ್ಲೇಖಿಸಿಲ್ಲ. ಇನ್ನು ಮೋದಿಯವರು ಆರ್ಟಿಕಲ್ 30(1ಎ) ರದ್ದುಗೊಳಿಸುತ್ತಾರೆ ಎಂಬ ಯಾವ ವರದಿಗಳೂ ಕಂಡುಬಂದಿಲ್ಲ.
ಭಾರತದಲ್ಲಿ ಅಲ್ಪಸಂಖ್ಯಾತರು ಯಾರು?
ಶಿಕ್ಷಣ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಒದಗಿಸಲಾದ ಮಾಹಿತಿಯ ಪ್ರಕಾರ, ಎಲ್ಲಾ ಅಲ್ಪಸಂಖ್ಯಾತರಿಗೆ ಆರ್ಟಿಕಲ್ 30(1) ಅಡಿಯಲ್ಲಿ ತಮ್ಮದೇ ಆದ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮತ್ತು ನಿರ್ವಹಿಸುವ ಹಕ್ಕನ್ನು ನೀಡಲಾಗಿದೆ. ಧಾರ್ಮಿಕ ಅಥವಾ ಜಾತಿ ಅಥವಾ ಹಿಂದುಳಿದ ಜಾತಿಯ ಜನರಲ್ಲಿ ಶಿಕ್ಷಣವನ್ನು ಸುಧಾರಿಸಲು ಸರ್ಕಾರ ಕ್ರಮಗಳನ್ನು ಕೈಗೊಂಡಿದೆ.
2001 ರ ಜನಗಣತಿಯ ಪ್ರಕಾರ, ಮುಸ್ಲಿಮರು, ಕ್ರಿಶ್ಚಿಯನ್ನರು, ಸಿಖ್ಖರು, ಬೌದ್ಧರು ಮತ್ತು ಪಾರಸಿಯರನ್ನು ಅಲ್ಪಸಂಖ್ಯಾತರು ಎಂದು ಪರಿಗಣಿಸಲಾಗಿದೆ.
ಸಂವಿಧಾನದ 46 ನೇ ವಿಧಿಯು ಪ್ರತಿ ರಾಜ್ಯವು ಎಸ್‌ಸಿಗಳು, ಎಸ್‌ಟಿಗಳು ಮತ್ತು ಇತರ ದುರ್ಬಲ ವರ್ಗಗಳ ಶೈಕ್ಷಣಿಕ ಅಥವಾ ಆರ್ಥಿಕ ಅಗತ್ಯಗಳನ್ನು ಉತ್ತೇಜಿಸುತ್ತದೆ ಮತ್ತು ಸಾಮಾಜಿಕ ಅನ್ಯಾಯ ಮತ್ತು ಶೋಷಣೆಯಿಂದ ಅವರನ್ನು ರಕ್ಷಿಸುತ್ತದೆ ಎಂದು ಹೇಳುತ್ತದೆ. ಆರ್ಟಿಕಲ್ 330, 332, 335, 338 ರಿಂದ 342 ಮತ್ತು ಸಂವಿಧಾನದ ಸಂಪೂರ್ಣ ಐದನೇ ಮತ್ತು ಆರನೇ ಅನುಸೂಚಿಗಳು ಅನುಚ್ಛೇದ 46 ರಲ್ಲಿ ನಿಗದಿಪಡಿಸಿದ ಉದ್ದೇಶಗಳ ಅನುಷ್ಠಾನವನ್ನು ಖಚಿತಪಡಿಸುತ್ತದೆ.
ಅದೇ ರೀತಿ, 30(1) ವಿಧಿಯು ಅಲ್ಪಸಂಖ್ಯಾತರಿಗೆ ತಮ್ಮ ಆಯ್ಕೆಯ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮತ್ತು ನಿರ್ವಹಿಸುವ ಹಕ್ಕನ್ನು ನೀಡುತ್ತದೆ.
ಆದ್ದರಿಂದ ಹೀಗೆ ಆರ್ಟಿಕಲ್ 30(1A)ರ ಕುರಿತು ಸುಳ್ಳು ಸುದ್ದಿಯನ್ನು ಹರಡುತ್ತಿರುವ ಮುಖ್ಯ ಉದ್ದೇಶ ಭಾರತದ ಅಲ್ವಸಂಖ್ಯಾತರಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ, ಬೌದ್ಧರು ಸೇರಿದಂತೆ ಪಾರಸಿ ಧರ್ಮದ ಜನರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಬಾರದು ಎಂಬ ಹುನ್ನಾರ ಇರಬಹುದು. ಈ ಅನುಚ್ಛೇಧವೇನಾದರೂ ತಿದ್ದುಪಡಿಯಾದರೆ  ಅಲ್ವ ಸಂಖ್ಯಾತ ಧರ್ಮದವರೂ ಸೇರಿದಂತೆ, ಅಲ್ವಸಂಖ್ಯಾತ ಭಾಷಿಗರು ಸಹ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು ಸಾಧ್ಯವಾಗುವುದಿಲ್ಲ ಎಂದು ನಾವು ಅರ್ಥ ಮಾಡಿಕೊಳ್ಳಬೇಕು. 

ಇದನ್ನು ಓದಿ: Fact Check | ಪೀರ್‌ ಪಾಷ ಬಂಗ್ಲಾವೇ ಮೂಲ ಅನುಭವ ಮಂಟಪ ಎಂಬುದಕ್ಕೆ ಯಾವುದೇ ಆಧಾರವಿಲ್ಲ


ವಿಡಿಯೋ ನೋಡಿ: Fact Check | ಟಿಪ್ಪು ಸುಲ್ತಾನ್‌ KRS ಅಣೆಕಟ್ಟೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು ಎಂಬುದು ಸತ್ಯ

 

Leave a Reply

Your email address will not be published. Required fields are marked *